ಮನುಕುಲ ಏಳಿಗೆಗೆ ಶ್ರಮಿಸಿದ ನಾರಾಯಣ ಗುರು

KannadaprabhaNewsNetwork |  
Published : Sep 22, 2025, 01:00 AM IST
ಕ್ಯಾಪ್ಷನ21ಕೆಡಿವಿಜಿ32 ದಾವಣಗೆರೆಯಲ್ಲಿ ನಡೆದ ಆರ್ಯ ಈಡಿಗ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು. | Kannada Prabha

ಸಾರಾಂಶ

ನಾವುಗಳು ಬರೆದಿಟ್ಟಂತೆ ಜೀವನ ಮಾಡಲು ಅಸಾಧ್ಯ. ಆದರೆ, ಬರೆದಿಡುವಂಥ ಉತ್ತಮ ಜೀವನ ಮಾಡಲು ಸಾಧ್ಯವಿದೆ. ಮನುಕುಲದ ಏಳಿಗೆಗೆ ಶ್ರಮಿಸಿದ ನಾರಾಯಣ ಗುರು ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ನುಡಿದರು.

- ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಅಭಿಮತ । ಪ್ರತಿಭಾ ಪುರಸ್ಕಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಾವುಗಳು ಬರೆದಿಟ್ಟಂತೆ ಜೀವನ ಮಾಡಲು ಅಸಾಧ್ಯ. ಆದರೆ, ಬರೆದಿಡುವಂಥ ಉತ್ತಮ ಜೀವನ ಮಾಡಲು ಸಾಧ್ಯವಿದೆ. ಮನುಕುಲದ ಏಳಿಗೆಗೆ ಶ್ರಮಿಸಿದ ನಾರಾಯಣ ಗುರು ಅವರ ಸೇವಾ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ನುಡಿದರು.

ನಗರದ ಜಿಲ್ಲಾ ಆರ್ಯ ಈಡಿಗ ಸಂಘ ವತಿಯಿಂದ ಶನಿವಾರ ನಗರದ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. ಭಾರತ ಕಂಡ ಸಮಾಜ ಸುಧಾರಣೆ ಮಾಡಿದ ಅಪರೂಪದ ಸಂತರು, ದಾರ್ಶನಿಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಹ ಒಬ್ಬರು. ಶೋಷಣೆಮುಕ್ತ, ಸಮಸಮಾಜ ನಿರ್ಮಾಣಕ್ಕಾಗಿ ಅವಿರತ ಶ್ರಮಿಸಿದವರು ಎಂದರು.

ಮನುಷ್ಯನ ಮನಸ್ಸನ್ನು, ಬದುಕನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಣ ಮನುಷ್ಯನಿಗೆ ಗೌರವವನ್ನು ತಂದು ಕೊಡುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲಿನಂತೆ, ಕುಡಿದವರು ಘರ್ಜಿಸಲೇ ಬೇಕು. ಅಂದರೆ ಶಿಕ್ಷಣದಿಂದ ಅಮೂಲಾಗ್ರ ಬದಲಾವಣೆ ಸಾಧ್ಯವಿದೆ ಎಂದು ನುಡಿದರು.

ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ನಾರಾಯಣ ಗುರುಗಳ ಚಿಂತನೆ, ಸಂದೇಶಗಳು ಸಾರ್ವಕಾಲಿಕ ಸತ್ಯ. ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಆರ್ಯ ಈಡಿಗ ಸಂಘದ ಪ್ರಮುಖ ಬೇಡಿಕೆಗಳನ್ನು ನಿಯಮಾನುಸಾರ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಗಮನಕ್ಕೆ ತಂದು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸಂಘದ ಅಧ್ಯಕ್ಷ ಎ.ನಾಗರಾಜ ಮಾತನಾಡಿ, ಕಡಿಮೆ ದರದಲ್ಲಿ ನಿವೇಶನ ನೀಡಿದ್ದು, ವಿನೋಬ ನಗರದಲ್ಲಿ ವಿದ್ಯಾರ್ಥಿಗಳ ಮತ್ತು ಸರಸ್ವತಿ ಬಡಾವಣೆಯಲ್ಲಿ ವಿದ್ಯಾರ್ಥಿನಿಯರ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕ ದಾನಿಗಳು ಸಹಾಯಹಸ್ತ ಚಾಚಿದ್ದರಿಂದ ಸಂಘದಿಂದ ಪ್ರಗತಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಈಡಿಗ ಸಮುದಾಯದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಸಿಎಂ ಕರ್ತವ್ಯಾಧಿಕಾರಿ ಎಂ.ಶ್ರೀನಿವಾಸ, ಮಡಿಕೇರಿ ಎಸಿಪಿ ಎಸ್.ಮಹೇಶ ಕುಮಾರ, ಅಧಿಕಾರಿಗಳಾದ ಕೆ.ಆನಂದ, ಡಾ.ಲಕ್ಷ್ಮಿಕಾಂತ, ಕೆ.ಎನ್.ಸಂತೋಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಸಂಘದ ಗೌರವಾಧ್ಯಕ್ಷ ಎಚ್.ಶಂಕರ್ ಪಾಲ್ಗೊಂಡಿದ್ದರು.

ಮುಖಂಡರಾದ ಲಕ್ಷ್ಮಿ ತಿಮ್ಮಪ್ಪ, ಇ.ಶಾಂತಾರಾಮ್, ಸಿ.ವಿ.ರವೀಂದ್ರ ಬಾಬು, ಚನ್ನಗಿರಿ ಗಂಗಾಧರ, ಹೊನ್ನಾಳಿ ಮಹಾಂತೇಶ, ಅಂಬರೀಷ, ಎಚ್.ಎಸ್.ಮಹಾಬಲೇಶ, ಇ.ಲಕ್ಷ್ಮಣ, ಎಸ್.ವಿ. ರಾಮದಾಸ, ಇ.ರಾಜಣ್ಣ, ಬಿ.ಸೋಮಶೇಖರ, ಹನುಮಂತಪ್ಪ, ಎಸ್.ಮಂಜಪ್ಪ, ರಘು, ಬಾಲರಾಜ, ಗವಿಸಿದ್ದಪ್ಪ, ಓಂಕಾರಮೂರ್ತಿ, ವೈ.ಕೃಷಣಮೂರ್ತಿ, ಎಸ್.ಭರಮಪ್ಪ, ಆನಂದಪ್ಪ ಇತರರು ಇದ್ದರು.

- - -

(ಕೋಟ್‌) ಸಣ್ಣ ಸಮಾಜವಾದರೂ ಸುಂದರವಾದ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡುವಲ್ಲಿ ಸಮಾಜದ ಮುಖಂಡರು ಶ್ರಮಿಸಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರು ಆರ್ಯ ಈಡಿಗ ಸಮಾಜದ ಮೇಲೆ ಅತ್ಯಂತ ಕಾಳಜಿಯುಳ್ಳವರಾಗಿದ್ದಾರೆ. ಸಮಾಜಕ್ಕೆ ಅನುದಾನ ನೀಡುವ ಮೂಲಕ ಪ್ರಗತಿಗೆ ಕಾರಣರಾಗಿದ್ದಾರೆ.

- ದಿನೇಶ ಕೆ. ಶೆಟ್ಟಿ, ದೂಡಾ ಅಧ್ಯಕ್ಷ

- - -

-21ಕೆಡಿವಿಜಿ32:

ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ