ಆರೋಗ್ಯ ಸೇವೆಯಲ್ಲಿ ನಾರಾಯಣ ಹೆಲ್ತ್ ಸಂಸ್ಥೆ ಮಹತ್ವದ ಮೈಲಿಗಲ್ಲು

KannadaprabhaNewsNetwork |  
Published : Aug 23, 2026, 02:15 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಮುಂಚೂಣಿಯಲ್ಲಿರುವ ನಾರಾಯಣ ಹೆಲ್ತ್ ಸಂಸ್ಥೆಯು ತನ್ನ ಆಸ್ಪತ್ರೆಗಳ ಜಾಲಗಳ ಮೂಲಕ 10 ಸಾವಿರಕ್ಕೂ ಅಧಿಕ ಆರ್ಥೋಪೆಡಿಕ್ ಹಾಗೂ ಸಾವಿರಕ್ಕೂ ಅಧಿಕ ರೋಬೋಟಿಕ್ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ನಾರಾಯಣ ಹೆಲ್ತ್ ಸಂಸ್ಥೆಯ ಆರ್ಥೋಪೆಡಿಕ್ ಆಂಕಾಲಜಿಸ್ಟ್ ಡಾ. ಸುಮನ್ ಎಂ. ಭೈರೇಗೌಡ ತಿಳಿಸಿದರು.

ಬಳ್ಳಾರಿ: ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಾರಾಯಣ ಹೆಲ್ತ್ ಸಂಸ್ಥೆಯು ತನ್ನ ಆಸ್ಪತ್ರೆಗಳ ಜಾಲಗಳ ಮೂಲಕ 10 ಸಾವಿರಕ್ಕೂ ಅಧಿಕ ಆರ್ಥೋಪೆಡಿಕ್ ಹಾಗೂ ಸಾವಿರಕ್ಕೂ ಅಧಿಕ ರೋಬೋಟಿಕ್ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ನಾರಾಯಣ ಹೆಲ್ತ್ ಸಂಸ್ಥೆಯ ಆರ್ಥೋಪೆಡಿಕ್ ಆಂಕಾಲಜಿಸ್ಟ್ ಡಾ. ಸುಮನ್ ಎಂ. ಭೈರೇಗೌಡ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿಯ 12 ವರ್ಷದ ಬಾಲಕಿಗೆ ತೀವ್ರ ಮೂಳೆ ಕ್ಯಾನ್ಸರ್ ಕಾಣಿಸಿಕೊಂಡಾಗ ಕೃತಕ ಇಂಪ್ಲಾಂಟ್ ಬಳಸದೆ ‘ಕ್ರಯೋಥೆರಪಿ’ ವಿಧಾನದ ಮೂಲಕ ನೈಸರ್ಗಿಕ ಮೂಳೆಯನ್ನೇ ಸಂರಕ್ಷಿಸಿ ಮರುಜೋಡಣೆ ಮಾಡಲಾಗಿದೆ. ಈ ಹಿಂದೆ ಮೂಳೆ ಕ್ಯಾನ್ಸರ್ ಬಂದರೆ ಅಂಗಾಂಗ ಕತ್ತರಿಸುವುದು ಅನಿವಾರ್ಯವಾಗಿತ್ತು. ಆದರೆ. ಇಂದಿನ ಸುಧಾರಿತ ಕೀಮೋಥೆರಪಿ ಮತ್ತು ಲಿಕ್ವಿಡ್ ನೈಟ್ರೋಜನ್ ಕ್ರಯೋಥೆರಪಿಯಂತಹ ತಂತ್ರಜ್ಞಾನಗಳಿಂದ ನೈಸರ್ಗಿಕ ಅಂಗಾಂಗವನ್ನು ಉಳಿಸಿಯೇ ಕ್ಯಾನ್ಸರ್ ನಿರ್ಮೂಲನೆ ಮಾಡಬಹುದು. ಇಂದು ಆ ಬಾಲಕಿ ಯಾವುದೇ ಸಮಸ್ಯೆಯಿಲ್ಲದೆ ನಡೆದಾಡುತ್ತ ಎಂಜಿನಿಯರಿಂಗ್ ಓದುತ್ತಿರುವುದೇ ನಮಗೆ ತೃಪ್ತಿ ತಂದಿದೆ. ಮತ್ತೊಂದು ಪ್ರಕರಣದಲ್ಲಿ, ಬೆನ್ನುಮೂಳೆಯ ತೀವ್ರ ಕ್ಷಯರೋಗದಿಂದ ನಡೆಯಲಾಗದೆ ನರಳುತ್ತಿದ್ದ 14 ವರ್ಷದ ಉಷಾ ಎಂಬ ಬಾಲಕಿಗೆ ‘ರಿಯಲ್-ಟೈಮ್ 3ಡಿ ಓ-ಆರ್ಮ್ ಸ್ಪೈನಲ್ ನ್ಯಾವಿಗೇಷನ್’ ತಂತ್ರಜ್ಞಾನ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು ಎಂದು ತಿಳಿಸಿದರು.

ಸ್ಪೈನ್ ಸರ್ಜನ್ ಡಾ. ವಿನು ರಾಜ್ ಅವರು ಮಾತನಾಡಿ, ಸೋಂಕು ಮತ್ತು ಕುಸಿತಕ್ಕೊಳಗಾದ ಎಳೆಯ ಬೆನ್ನುಮೂಳೆಗೆ ಚಿಕಿತ್ಸೆ ನೀಡುವಾಗ ಸಣ್ಣ ತಪ್ಪಿಗೂ ಅವಕಾಶವಿರುವುದಿಲ್ಲ. ಓ-ಆರ್ಮ್ ಮತ್ತು 3ಡಿ ನ್ಯಾವಿಗೇಷನ್ ನಮಗೆ ಮಿಲಿಮೀಟರ್‌ಗಿಂತಲೂ ಸೂಕ್ಷ್ಮ ನಿಖರತೆಯನ್ನು ಒದಗಿಸಿದ್ದರಿಂದ ನರಗಳಿಗೆ ಹಾನಿಯಾಗದಂತೆ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಇದರಿಂದಾಗಿ ಬಾಲಕಿ 48 ಗಂಟೆಗಳಲ್ಲೇ ಎದ್ದು ನಿಲ್ಲಲು ಸಾಧ್ಯವಾಯಿತು ಎಂದು ವಿವರಿಸಿದರು.ಕೀಲು ಕಸಿಗೆ ಸುಧಾರಿತ ರೋಬೋಟಿಕ್ ತಂತ್ರಜ್ಞಾನಗಳ ಜೊತೆಗೆ ಬೆನ್ನುಮೂಳೆ, ಟ್ರಾಮಾ ಹಾಗೂ ಆರ್ಥೋಪೆಡಿಕ್ ಆಂಕಾಲಜಿ ಉಪ-ವಿಭಾಗಗಳಲ್ಲಿ ನುರಿತ ತಜ್ಞರ ಸೇವೆಯನ್ನು ಸಂಯೋಜಿಸುವ ಮೂಲಕ ನಾರಾಯಣ ಹೆಲ್ತ್ ಸಂಸ್ಥೆಯು ರೋಗಿಗಳು ದೂರದ ಊರುಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಿದೆ. ಅತ್ಯಾಧುನಿಕ ರೋಬೋಟಿಕ್ಸ್ ಹಾಗೂ ಸುಧಾರಿತ ಸೌಲಭ್ಯಗಳ ಮೂಲಕ ರೋಗಿಗಳಿಗೆ ತ್ವರಿತ, ಗುಣಮಟ್ಟದ ಪರಿಹಾರ ಒದಗಿಸಲು ಸಂಸ್ಥೆ ಬದ್ಧವಾಗಿದೆ.

ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಹಾಗೂ ನುರಿತ ತಜ್ಞರ ನೆರವಿನಿಂದಾಗಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೋಗಿಗಳಿಗೆ ದೂರದ ಮಹಾನಗರಗಳಿಗೆ ತೆರಳುವ ಅನಿವಾರ್ಯತೆ ತಪ್ಪಿದ್ದು, ಸುಧಾರಿತ ಚಿಕಿತ್ಸೆ ಸ್ಥಳೀಯವಾಗಿಯೇ ಲಭ್ಯವಾಗುತ್ತಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡರಗಿ: ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ, 160 ವಿದ್ಯಾರ್ಥಿಗಳು ಅಸ್ವಸ್ಥ
ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಪವಿತ್ರ ಕೇಂದ್ರಗಳು: ಫಕೀರ ಸಿದ್ಧರಾಮ ಸ್ವಾಮೀಜಿ