ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವ ವೈಭವ

KannadaprabhaNewsNetwork |  
Published : Sep 22, 2025, 01:00 AM IST
ಸಿಕೆಬಿ-1 ನವರಾತ್ರಿ ಉತ್ಸವದಲ್ಲಿ ವೈಭವದಿಂದ ದೇವಿಯ ಆರಾಧನೆಗೆ ಸಿದ್ದಗೊಂಡಿರುವ ನವ ದುರ್ಗೆಯರು  | Kannada Prabha

ಸಾರಾಂಶ

ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 100 ದಿನಗಳ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಪ್ರಮುಖ ಭಾಗವಾಗಿದೆ. ಇದು ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯು ಒಂದೆಡೆ ಕಲೆಯುವ ಅನನ್ಯ ಜಾಗತಿಕ ಸಮಾವೇಶ ಎನಿಸಿದೆ. ನವರಾತ್ರಿ ಆಚರಣೆಯ ಮುಖ್ಯ ಭಾಗವಾಗಿ ‘ಅತಿ ರುದ್ರ ಮಹಾ ಯಜ್ಞ’ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ಜಗತ್ತು ಒಂದು ಕುಟುಂಬ ಮಾನವೀಯ ಸೇವಾ ಅಭಿಯಾನ ಉಚಿತ ಪೋಷಣೆ, ಶಿಕ್ಷಣ ಮತ್ತು ಆರೋಗ್ಯ ಉಪಕ್ರಮಗಳೊಂದಿಗೆ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆ. ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನವರಾತ್ರಿ ಉತ್ಸವವನ್ನು ಹೆಗ್ಗುರುತಾಗಿ ಆಯೋಜಿಸುತ್ತಿದೆ.

ಈ ವರ್ಷದ ನವರಾತ್ರಿ ಆಚರಣೆಗಳು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ನಡೆಯಲಿವೆ. ಶ್ರೀ ಸತ್ಯ ಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಂಭ್ರಮದ ಸಂದರ್ಭದಲ್ಲಿಯೇ ನವರಾತ್ರಿ ಉತ್ಸವವೂ ನಡೆಯುತ್ತಿರುವುದು ವಿಶೇಷ.

100 ದಿನಗಳ ಮಹೋತ್ಸವ

ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 100 ದಿನಗಳ ‘ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ’ದ ಪ್ರಮುಖ ಭಾಗವಾಗಿದೆ. ಇದು ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯು ಒಂದೆಡೆ ಕಲೆಯುವ ಅನನ್ಯ ಜಾಗತಿಕ ಸಮಾವೇಶ ಎನಿಸಿದೆ. ನವರಾತ್ರಿ ಆಚರಣೆಯ ಮುಖ್ಯ ಭಾಗವಾಗಿ ‘ಅತಿ ರುದ್ರ ಮಹಾ ಯಜ್ಞ’ ನಡೆಯಲಿದೆ. ಶೃಂಗೇರಿ ಮಠದ 108 ಪುರೋಹಿತರು ಹನ್ನೊಂದು ದಿನಗಳ ಕಾಲ ಈ ಆಚರಣೆಯನ್ನು ನಡೆಸಿಕೊಡಲಿದ್ದಾರೆ.

ಇದರ ಜೊತೆಯಲ್ಲಿ ನವರಾತ್ರಿ ಹೋಮವು ಸ್ತ್ರೀರೂಪದ ದೈವಿಕ ಶಕ್ತಿಯನ್ನು ಒಂಬತ್ತು ರೂಪಗಳಲ್ಲಿ ಗೌರವಿಸುತ್ತದೆ. ಇದೇ ವೇಳೆ ಬಂಗಾಳದ ಸಾಂಪ್ರದಾಯಿಕ ದುರ್ಗಾ ಪೂಜೆಯನ್ನು ಸಹ ನಡೆಸಲಾಗುತ್ತದೆ. ಪ್ರತಿ ಸಂಜೆಯೂ ಭಾರತದ ಕೆಲವು ಪ್ರಸಿದ್ಧ ಕಲಾವಿದರನ್ನು ಒಳಗೊಂಡ ಸಾಂಸ್ಕೃತಿಕ ಸಂಭ್ರಮಗಳು ಆಚರಣೆಗಳಿಗೆ ಜೀವ ತುಂಬಲಿವೆ.

ಸಾಂಸ್ಕೃತಿಕ ಕರ್ಯಕ್ರಮ

ಕರ್ನಾಟಕದ ಸಾಂಸ್ಕೃತಿಕ ಜಗತ್ತು ಗೌರವದಿಂದ ಗುರುತಿಸುವ ಅರುಣಾ ಸಾಯಿರಾಂ ಅವರಿಂದ ಭಕ್ತಿಗೀತೆಗಳು, ಸಿತಾರ್ ಮಾಂತ್ರಿಕ ಪಂಡಿತ್ ನೀಲಾದ್ರಿ ಕುಮಾರ್ ಅವರ ಭಾವಪೂರ್ಣ ಪ್ರಸ್ತುತಿ ಮತ್ತು ಖ್ಯಾತ ನೃತ್ಯಪಟುಗಳಾದ ತನುಶ್ರೀ ಶಂಕರ್, ಡಾ ಸೋನಾಲ್ ಮಾನ್ಸಿಂಗ್ ಮತ್ತು ಡಾ ಪದ್ಮಾ ಸುಬ್ರಹ್ಮಣ್ಯಂ ಮತ್ತಿತರರ ಕಲಾ ಪ್ರದರ್ಶನವು ಪ್ರೇಕ್ಷಕರ ಮನಸಿಗೆ ಮುದ ನೀಡಲಿದೆ. ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಈ ರೋಮಾಂಚಕ ಆಚರಣೆಗಳು ಭಕ್ತಿ ಮತ್ತು ಕಲಾತ್ಮಕತೆಯನ್ನು ಬೆಸೆಯಲಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಶ್ರೀ ಸತ್ಯ ಸಾಯಿ ಬಾಬಾ ಅವರ ಶತಮಾನೋತ್ಸವ ವರ್ಷವನ್ನು ಆಚರಿಸುತ್ತಿದ್ದೇವೆ. ನಿಸ್ವಾರ್ಥ ಸೇವೆಯಿಲ್ಲದೆ ಆಧ್ಯಾತ್ಮಿಕತೆಯು ಅಪೂರ್ಣ ಎಂದು ಈ ನವರಾತ್ರಿ ಆಚರಣೆಗಳು ನಮಗೆ ನೆನಪಿಸುತ್ತದೆ. ಪ್ರೀತಿ, ಏಕತೆ ಮತ್ತು ಸಹಾನುಭೂತಿಯಿಂದ ಒಗ್ಗೂಡಿದ ಉತ್ತಮ ಜಗತ್ತನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ನಾವು ವಿಶ್ವ ಸಾಂಸ್ಕೃತಿಕ ಮಹೋತ್ಸವ ಮತ್ತು ಈ ಪವಿತ್ರ ಆಚರಣೆಗಳ ಮೂಲಕ ಪುನರುಚ್ಚರಿಸುತ್ತೇವೆ. ಸಾಂಸ್ಕೃತಿಕ ವೈವಿಧ್ಯವನ್ನು ಮಾನವೀಯತೆಯ ಶಕ್ತಿಯಾಗಿ ಸಂಭ್ರಮಿಸಲಾಗುತ್ತದೆ” ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ