ಮಡಿಕೇರಿ: ಜನತೆಯ ಕಾರ್ಯಕ್ರಮಗಳ ಎಲ್ಲ ಅಗತ್ಯಗಳನ್ನು ಪೂರೈಸುವ ಶಾಮಿಯಾನ ಸಂಘದ ಸದಸ್ಯರ ಶ್ರಮ ಮೌಲ್ಯಕ್ಕೆ ನಿಲುಕದ್ದು. ಈ ವೖತ್ತಿಯಲ್ಲಿರುವವರು ಸಂಘದ ಮೂಲಕ ಒಗ್ಗಟ್ಟಿನಿಂದ ವೖತ್ತಿ ಜೀವನ ನಿರ್ವಹಿಸಬೇಕು ಎಂದು ಬಿ.ಆರ್. ನಾಗೇಂದ್ರ ಪ್ರಸಾದ್ ಹೇಳಿದರು.
ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಸದಾ ಸವಾಲಿನ ನಡುವೇ ಮಲೆನಾಡು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಮಿಯಾನ ವೃತ್ತಿಯ ಶ್ರಮ ಜೀವಿಗಳಿಗೆ ತಮ್ಮದೇ ಸಂಘಟನೆ ಅತ್ಯಗತ್ಯವಾಗಿತ್ತು ಎಂದರು.
ಕರ್ನಾಟಕ ರಾಜ್ಯ ಶಾಮಿಯಾನ, ಧ್ವನಿ, ಬೆಳಕು ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಬ್ದುಲ್ ಕರೀಂ ಅತ್ತಾರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಗಣೇಶೋತ್ಸವ ಸಂದರ್ಭ ಡಿಜೆ ಅಳವಡಿಕೆ ಸಂದರ್ಭ ಕಠಿಣ ನಿಯಮಗಳನ್ನು ಪಾಲಿಸದೆ ನಿಯಮಗಳಲ್ಲಿ ಸಡಿಲಿಕೆ ಮಾಡಿ ಸಂಘದ ಸದಸ್ಯರಿಗೆ ನೆರವಾಗುವಂತೆ ಸರ್ಕಾರವನ್ನು ಆಗ್ರಹಿಸಿದರು.ರಾಜ್ಯ ಸಂಘದ ಸ್ಥಾಪಕಾಧ್ಯಕ್ಷ ಮೆಹಬೂಬ್ ಸಿದ್ದಾಪುರ ಮಾತನಾಡಿ, ಸಚಿವ ಸಂತೋಷ್ ಲಾಡ್ ಪ್ರಯತ್ನದಿಂದ ಕಾರ್ಮಿಕ ಇಲಾಖೆಯಲ್ಲಿ ಶಾಮಿಯಾನ ವ್ಯವಸ್ಥೆಯ ಕಾರ್ಮಿಕರು ನೋಂದಣಿಯಾಗಲು ಸಾಧ್ಯವಾಯಿತು ಎಂದರು.
ಸಂಘದ ಪ್ರಧಾನ ಕಾರ್ರ್ಯದರ್ಶಿ ಅವಿನ್ ಕುಮಾರ್ ವಂದಿಸಿ, ನವಿನ್ ಕುಲಾಲ್ ನಿರೂಪಿಸಿದರು.