ಡಾ. ಅಂಬೇಡ್ಕರ್ ಪಾಂಡಿತ್ಯವನ್ನು ಆರಾಧಿಸಬೇಕು

KannadaprabhaNewsNetwork |  
Published : Apr 28, 2025, 12:49 AM IST
46 | Kannada Prabha

ಸಾರಾಂಶ

ಅಂಬೇಡ್ಕರ್ ಜಾಗತಿಕ ಪಂಡಿತರಾಗಿದ್ದಾರೆ. ಮಹಾನ್ ಮೇಧಾವಿ. ಅವರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಡಾ.ಬಿ.ಆರ್. ಅಂಬೇಡ್ಕರ್ ಅವರ ವಿದ್ವತ್ ಮತ್ತು ಪಾಂಡಿತ್ಯವನ್ನು ಆರಾಧಿಸಬೇಕು ಮತ್ತು ಗೌರವಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಸರ್ಕಾರಿ ವಕೀಲ ತಿಮ್ಮಯ್ಯ ತಿಳಿಸಿದರು.

ಜಯನಗರದ ನೇಗಿಲಯೋಗಿ ಸಭಾ ಭವನದಲ್ಲಿ ಅಧಿವಕ್ತ ಪರಿಷತ್ ಕರ್ನಾಟಕ ದಕ್ಷಿಣ ಮೈಸೂರು ಘಟಕ, ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ, ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಜಾಗತಿಕ ಪಂಡಿತರಾಗಿದ್ದಾರೆ. ಮಹಾನ್ ಮೇಧಾವಿ. ಅವರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವತ್ತು ಎಲ್ಲಾ ಸೌಕರ್ಯ ಇದ್ದಾಗಿಯೂ ಒಂದರೆಡು ಪದವಿ ಪಡೆಯಲು ಕಷ್ಟ ಪಡುತ್ತೇವೆ. ಯಾವ ಸೌಕರ್ಯ ಇಲ್ಲದಿದ್ದರೂ ಅಂಬೇಡ್ಕರ್ ಸಾಧನೆ ಅಚ್ಚರಿದಾಯಕ ಎಂದರು.

ಅಂಬೇಡ್ಕರ್ ಅವರಿಗೆ 9 ಭಾಷೆಗಳಲ್ಲಿ ಓದುವುದು ಬರೆಯುವುದು ಗೊತ್ತಿತ್ತು. ಹಿಂದಿ, ಪಾಲಿ, ಸಂಸ್ಕೃತ, ಇಂಗ್ಲಿಷ್, ಫ್ರೆಂಚ್, ಜರ್ಮನಿ, ಮರಾಠಿ ಸೇರಿ ಅನೇಕ ಭಾಷೆಗಳನ್ನು ಕಲಿತಿದ್ದರು. ಜಗತ್ತಿನ ಬಹುತೇಕ ಧರ್ಮಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ. ಜಗತ್ತಿನ ಎಲ್ಲಾ ಜ್ಞಾನವನ್ನು ಸಂಪಾದಿಸಿದ ಬಾಬಾ ಸಾಹೇಬರು ಭಾರತ ದೇಶಕ್ಕೆ ಹೊಂದುವಂತಹ ವಿಚಾರಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಿದರು ಎಂದು ಅವರು ಹೇಳಿದರು.

ನಿವೃತ್ತ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿದೇವಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಲೋಕೇಶ್, ಅಧಿವಕ್ತ ಪರಿಷದ್ ಮೈಸೂರು ಅಧ್ಯಕ್ಷೆ ವಿ. ಶಾರದಾ, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು