ಕನ್ನಡಪ್ರಭ ವಾರ್ತೆ ಅರೇಹಳ್ಳಿಚಿಕ್ಕ ಹಳ್ಳಿ, ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಹ ಗಣಪತಿ ಪೆಂಡಾಲ್ ಎಂಬ ಭವ್ಯ ಕಟ್ಟಡ ತಲೆ ಎತ್ತಿರುವುದು ಪುಟ್ಟ ಗ್ರಾಮದ ಸಾಧನೆಯಾಗಿದೆ ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು.
ಗ್ರಾಮದ ಹಿರಿಯ ಮುಖಂಡ ಯು.ಪಿ. ಮಲ್ಲೇಶ್ ಮಾತನಾಡುತ್ತಾ ದಾನಿಗಳು, ಗ್ರಾಮ ಪಂಚಾಯ್ತಿಯ ಅಲ್ಪ ಅನುದಾನ, ಆನೆ ಹಾವಳಿ ಹಾಗೂ ಹವಾಮಾನ ವೈಪರೀತ್ಯದಿಂದ ಅನುಭವಿಸುತ್ತಿರುವ ನಷ್ಟದ ನಡುವೆಯೂ ಗ್ರಾಮಸ್ಥರು ಕಷ್ಟಪಟ್ಟು ನೀಡಿದ ಹಣಕಾಸಿನ ನೆರವು ಇವೆಲ್ಲವುಗಳ ಪರಿಣಾಮದಿಂದಾಗಿ ಅಂದಾಜು ೧೪ ಲಕ್ಷ ರು. ವೆಚ್ಚದಲ್ಲಿ ಗಣಪತಿ ಪೆಂಡಾಲ್ ಇಂದು ನಿರ್ಮಾಣವಾಗಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷ ಯೋಗೇಶ್, ವಿದ್ಯಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಮುಖಂಡರಾದ ಶಿವಾನಂದ, ಎಚ್.ಡಿ ತುಳಸಿದಾಸ್, ಅಮಿತ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.