- ಆರೋಗ್ಯ ಅಧಿಕಾರಿಗಳ ಅಮಾನತಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಪಿ.ಎಚ್.ಸಿ) ಬುಧವಾರ ನವಜಾತ ಶಿಶುವೊಂದು ಮೃತಪಟ್ಟಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎನ್ನುವ ಆರೋಪ ಪೋಷಕರದ್ದಾಗಿದೆ.* ಘಟನೆ ವಿವರ:
ಯಾದಗಿರಿ ನಗರದ ಜಿಲ್ಲಾಸ್ಪತ್ರೆಗೆ ಹೋಗುವಂತೆ ಇಲ್ಲಿನ ವೈದ್ಯರು ಹೇಳಿದ್ದರು. ಆದರೆ, ಅಂಬ್ಯುಲೆನ್ಸ್ ವ್ಯವಸ್ಥೆಗೆ ಗೋಗರೆದರೂ ಲಭ್ಯವಾಗಲಿಲ್ಲ. ನಮ್ಮಂತ ಬಡವರ ಜೀವಕ್ಕೆ ಬೆಲೆಯಿಲ್ಲದಂತಾಗಿದೆ ಎನ್ನುವುದು ಪೋಷಕರಾದ ಜನಾರ್ಧನ ದಾಸರಿ (ಗಾಯತ್ರಿ ದಾಸರಿ ತಂದೆ) ನೋವನ್ನು ತೋಡಿಕೊಂಡರು.
-----ಕೋಟ್ -1 ಗುರುಮಠಕಲ್ ಸಮುದಾಯ ಆಸ್ಪತ್ರೆಯಲ್ಲಿ ಸರಿಯಾಗಿ ಸಮಯಕ್ಕೆ ಅಂಬುಲೆನ್ಸ್ ಲಭ್ಯವಾಗಿಲಿಲ್ಲ. ಅದಕ್ಕಾಗಿ ಗಾಯತ್ರಿ ನವೀನ್ ದಾಸರಿ ಅವರ ನವಜಾತ ಶಿಶುವು ಮೃತಪಟ್ಟಿದ್ದು, ಇದಕ್ಕೆ ಅರೋಗ್ಯ ಅಧಿಕಾರಿಗಳೆ ಕಾರಣ ಕೂಡಲೇ ಅವರನ್ನು ಅಮಾನತು ಮಾಡಬೇಕು.
-ಕೆ.ಬಿ. ವಾಸು ರಾಜ್ಯ ಉಪಾಧ್ಯಕ್ಷ, ಆಲ್ ಇಂಡಿಯ ಬಹುಜನ ಸಮಾಜ ಪಾರ್ಟಿ.------
9ವೈಡಿಆರ್14: ಗುರುಮಠಕಲ್ ಪಟ್ಟಣದ ಸಮುದಾಯ ಆಸ್ಪತ್ರೆ.