ಕನ್ನಡಪ್ರಭ ವಾರ್ತೆ ತುಮಕೂರು
ಅವರು ಪರ್ವ ಗ್ರೂಪ್ ಸಂಸ್ಥಾಪಕ ನೀಲೇಶ್ ಅವರು ತಮ್ಮ ಸ್ವಗ್ರಾಮ ಕೊರಟಗೆರೆ ತಾಲೂಕು ಹನುಮಂತಯ್ಯನ ಪಾಳ್ಯದಲ್ಲಿ ನಿರ್ಮಿಸಿರುವ ದೊಡ್ಡಮ್ಮ ದೇವಿ ಸ್ಥಿರಬಿಂಬ ಪ್ರತಿಷ್ಠಾಪನಾ ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಷ್ಟು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಇವತ್ತು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ, ದೊಡ್ಡ ಆರ್ಥಿಕ ಶಕ್ತಿಯಾದ ದುಬೈನಲ್ಲಿ ಉದ್ಯಮ ಸಾಮ್ರಾಜ್ಯ ಸ್ಥಾಪಿಸಿರುವ ನೀಲೇಶ್ ಅವರನ್ನು ಕೊಟ್ಟಿರುವಂತಹ ಈ ಹಳ್ಳಿಗೆ ಧನ್ಯವಾದ ಎಂದರು.ಅವರು ಹಳ್ಳಿಯಲ್ಲಿ ಇದ್ದಿದ್ದರೆ ನನಗೆ ನೀಲೇಶ್ ಪರಿಚಯವೇ ಆಗುತ್ತಿರಲಿಲ್ಲ. ಅವರು ನನಗೆ ಪರಿಚಯ ಆಗಿದ್ದು ದುಬೈನಲ್ಲಿ. ದುಬೈನಲ್ಲಿ ಕನ್ನಡಿಗರೊಬ್ಬರು ಉದ್ಯಮ ಕಟ್ಟಿ ಬೆಳೆಸಿದ್ದಾರೆ ಎನ್ನುವ ವಿಷಯ ತಿಳಿದು ಪರಿಚಯವಾಯಿತು. ಅಷ್ಟು ದೊಡ್ಡ ಉದ್ಯಮ ಸಮೂಹ ಕಟ್ಟಿದರೂ ಅದರ ಒಂದಿಷ್ಟು ಅಹಂಕಾರ ಅವರಲ್ಲಿ ಬರಲಿಲ್ಲ ಅನ್ನುವುದು ದೊಡ್ಡ ವಿಷಯ ಎಂದರು.ಸಾಮಾನ್ಯವಾಗಿ ಯಾವುದಾದರೂ ಒಂದು ಊರಲ್ಲಿ ಅಂಗಡಿ ನಡೆಸುವ ಒಬ್ಬರು ಕಾರು ತೆಗೆದುಕೊಂಡರೆ ಸಾಕು ಅವರಿಗೆ ಅಹಂಕಾರ ಬಂದಿರುತ್ತದೆ. ಆದರೆ, ನೀಲೇಶ್ ಅವರಿಗೆ ಒಂದಿಷ್ಟು ಅಹಂಕಾರವಿಲ್ಲ. ನಾನು ಇವತ್ತು ಈ ಗ್ರಾಮಕ್ಕೆ ಬಂದಿದ್ದರೆ ದೇವರು ಕರೆದುಕಂಡು ಬಂದಿಲ್ಲ. ನೀಲೇಶ್ ಅವರ ಪ್ರೀತಿ ನನ್ನನ್ನು ಇಲ್ಲಿ ಕರೆ ತಂದಿತು. ನೀಲೇಶ್ ಅವರು ಭೇಟಿಯಾದಗಲೆಲ್ಲಾ ಉದ್ಯಮ, ಬಿಲ್ಡಿಂಗ್, ದುಡ್ಡು, ಸ್ಟಾಕ್, ಅಂತಾರಾಷ್ಟ್ರೀಯ ಮಾರುಕಟ್ಟೆ ಬಗ್ಗೆ ಚರ್ಚಿಸಿದರೂ ಅಷ್ಟೇ ಆತ್ಮೀಯವಾಗಿ ಹಳ್ಳಿಯ ಜನರ ಬಗ್ಗೆ ಮಾತನಾಡುತ್ತಾರೆ. ಹಳ್ಳಿಯ ಬಗ್ಗೆ ಏನಾದರೂ ಮಾತನಾಡಬೇಕು ಅಂತಾ ಅಭಿಲಾಷೆ ಅವರಲ್ಲಿ ಸದಾ ಇರುತ್ತದೆ. ಈಗ ದೇವಸ್ಥಾನ ಮೂಲಕ ಜನರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ ಎಂದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ. ಹನುಮಂತನಾಥ ಸ್ವಾಮೀಜಿ ಮಾತನಾಡಿ, ನಮ್ಮ ದೇಶ ಸಂಸ್ಕೃತಿ ಮತ್ತು ಸಂಮೃದ್ಧಿಯ ಪ್ರತೀಕ. ನಾವು ಈ ಪುಣ್ಯಭೂಮಿಯಲ್ಲಿ ಇರುವುದೇ ನಮ್ಮಪುಣ್ಯ. ಪ್ರತಿಯೊಬ್ಬರೂ ಸನ್ನಡೆಯಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ತಿಪಟೂರಿನ ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ದೊಡ್ಡಮ್ಮ ದೇವಿ ದೇವಸ್ಥಾನವು ಧಾರ್ಮಿಕ ಕೇಂದ್ರವಾಗಿದ್ದು, ಜನರ ನಂಬಿಕೆ- ಭಕ್ತಿ,ಸಂಸ್ಕೃತಿ- ಸಂಪ್ರದಾಯಗಳನ್ನು ಬಲಪಡಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತೆ ಭಾವನಾ ಬೆಳಗೆರೆ, ಪರ್ವ ಗ್ರೂಪ್ನ ಸಹ ಸಂಸ್ಥಾಪಕ ಶಶಿಧರ ನಾಗರಾಜಪ್ಪ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್, ಮಾಜಿ ಖನಿಜ ನಿಮಗದ ಅಧ್ಯಕ್ಷ ಲಿಂಗಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ರಾಜಣ್ಣ, ಉದ್ಯಮಿಗಳಾದ ಭಾಸ್ಕರ್, ಸ್ಮಿತ, ಪ್ರಭು, ಸಿದ್ದೇಶ್, ಮೋನಿಕಾ ಮಂದಣ್ಣ, ಓಂಕಾರ್, ಗ್ರಾಮದ ಹಿರಿಯ ಮುಖಂಡ ಹನುಮಂತರಾಯಪ್ಪ, ಶಿಕ್ಷಕ ಹರೀಶ್, ನರಸಿಂಹರಾಜು ಸೇರಿದಂತೆ ಗ್ರಾಮಸ್ಥರು, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ಬೆಳಗ್ಗೆಯಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿಯೊಂದಿಗೆ ಅತ್ಯಂತ ಯಶಸ್ವಿಯಾಗಿ ನೆರವೇರಿತು.
-10000_309.JPG: