ಕನ್ನಡಪ್ರಭ ವಾರ್ತೆ ಅಥಣಿ
ನೂತನ ಅಧ್ಯಕ್ಷ ನಿಂಗಪ್ಪ ಖೋಕಲೆ ಮಾತನಾಡಿ, ಈಗಿರುವ ನ್ಯಾಯಾಲಯ ಸಂಕೀರ್ಣ ಸಾಕಾಗುತ್ತಿಲ್ಲ. ಹೀಗಾಗಿ ವಕೀಲರ ಬೇಡಿಕೆಯಂತೆ ಉಚ್ಚ ನ್ಯಾಯಾಲಯದ ಮೂಲಕ ₹36 ಕೋಟಿ ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮ ಸಂಘದ ಎಲ್ಲ ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಹಿರಿಯ ವಕೀಲ ಕೆ.ಎ.ವಣಜೋಳ ಮಾತನಾಡಿ, ಅಥಣಿ ವಕೀಲರ ಸಂಘದ ಚುನಾವಣೆಯನ್ನು ಹಿರಿಯ ವಕೀಲರ ಮಾರ್ಗದರ್ಶದಲ್ಲಿ ಅತ್ಯಂತ ಶಿಸ್ತಿನಿಂದ ನಿರ್ವಹಿಸಿದ್ದು, ಚುನಾವಣೆಯಲ್ಲಿ ಯಾರು ಗೆದ್ದರೂ ಸಹ ಮುಂದಿನ ದಿನಗಳಲ್ಲಿ ಎಲ್ಲರೂ ಕೂಡಿಕೊಂಡೇ ಕಾರ್ಯನಿರ್ವಹಿಸುವ ಪ್ರವೃತ್ತಿ ನಮ್ಮದಾಗಿದೆ. ಈ ಹಿಂದಿನಂತೆಯೇ ಎನ್.ಬಿ.ಖೋಕಲೆ ವಕೀಲರಿಗೂ ನಾವೆಲ್ಲ ಸಹಕಾರ ನಿಡೋಣ ಎಂದು ಮನವಿ ಮಾಡಿದರು.ವಕೀಲರ ಸಂಘದ ಸದಸ್ಯರಾದ ಲೆನಿನ್ ಹಳಿಂಗಳಿ, ಸುನೀಲ ಸಂಕ ಮಾತನಾಡಿದರು. ಅಥಣಿ ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.