ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅರಮನೆ ಬಲರಾಮ ದ್ವಾರದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.
ನಿಶಾನೆ ಆನೆ ಧನಂಜಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನೆರೆದಿದ್ದ ಗಣ್ಯರಿಗೆ, ಜನಸ್ತೋಮಕ್ಕೆ ವಂದಿಸಿ ವಿಜಯದಶಮಿ ಮೆರವಣಿಗೆ ಮುನ್ನಡೆಸಿತು. ಇದನ್ನು ಹಿಂಬಾಲಿಸಿಕೊಂಡು ನೌಫತ್ ಆನೆಯಾಗಿ ಗೋಪಿ ಸಾಗಿ ಬಂತು. ಉಳಿದ ಆನೆಗಳು ಸಾಲಾನೆಗಳಾಗಿ ಸಾಗುವ ಮೂಲಕ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.14 ಆನೆಗಳೂ ಭಾಗಿ
ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ ಸಾಗಿದವು. ನಂತರ ಮೊದಲ ಹಂತದ ಸಾಲಾನೆಯಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಎರಡನೇ ಹಂತದಲ್ಲಿ ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ ಹಾಗೂ 3ನೇ ಹಂತದಲ್ಲಿ ಕಂಜನ್, ಭೀಮ, ಏಕಲವ್ಯ ಆನೆಗಳು ಸಾಗಿದವು.
ಇದೇ ಮೊದಲ ಬಾರಿಗೆ ದಸರೆ ಆಗಮಿಸಿದ್ದ ಶ್ರೀಕಂಠ, ರೂಪಾ ಮತ್ತು ಹೇಮಾವತಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದವು. ಶ್ರೀಕಂಠ ಮತ್ತು ಹೇಮಾವತಿ ಸಾಲಾನೆಗಳಾಗಿ ಸಾಗಿದರೇ, ರೂಪಾ ಆನೆಯು ಅಂಬಾರಿ ಆನೆಗೆ ಕುಮ್ಕಿ ಆನೆಯಾಗಿ ಸಾಗಿ ಸೈ ಎನಿಸಿಕೊಂಡಿತು.
----
ಎಲ್ಲೆಲ್ಲೂ ಭೀಮ ಆನೆಯದ್ದೇ ಹವಾ
ಜಂಬೂಸವಾರಿಯಲ್ಲಿ 11 ಆನೆಗಳು ಸಾಲಾನೆಯಾಗಿ ಸಾಗಿದವು. ಕೊನೆಯ ಸಾಲಿನಲ್ಲಿದ್ದ ಭೀಮನನ್ನು ಕಂಡ ಜನ ಭೀಮ... ಭೀಮ.... ಎಂದು ಕೂಗಲು ಆರಂಭಿಸಿದರು. ಜನರ ಹರ್ಷೋದ್ಘಾರಕ್ಕೆ ಮಣಿದ ಭೀಮ ಸೊಂಡಲೆತ್ತಿ ನಮಿಸುವ ಮೂಲಕ ನೆರೆದಿದ್ದವರ ಸಂಭ್ರಮವನ್ನು ಇಮ್ಮಡಿಗೊಳಿಸಿತು.
----
ಬಾಕ್ಸ್...ಆನೆಗಳ ಜವಾಬ್ದಾರಿ
ಅಂಬಾರಿ ಆನೆ- ಅಭಿಮನ್ಯುಅಂಬಾರಿ ಆನೆಗೆ ಕುಮ್ಕಿಗಳು- ಕಾವೇರಿ ಮತ್ತು ರೂಪಾ
ನಿಶಾನೆ ಆನೆ- ಧನಂಜಯನೌಫತ್ ಆನೆ- ಗೋಪಿ
ಸಾಲಾನೆಗಳು- ಮಹೇಂದ್ರ, ಶ್ರೀಕಂಠ, ಲಕ್ಷ್ಮಿ, ಕಂಜನ್, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ ಮತ್ತು ಹೇಮಾವತಿ.