ಕನ್ನಡಪ್ರಭ ವಾರ್ತೆ ಮಂಗಳೂರು
ಈ ಸಂದರ್ಭ ಎನ್ಎಂಪಿಎಯ ಪ್ರಮುಖ ಮೂಲಸೌಕರ್ಯ ಉಪಕ್ರಮ ಹಾಗೂ ನೂತನ ಭದ್ರತಾ ಕಣ್ಗಾವಲು ಗೋಪುರವನ್ನು ಟಿ.ಕೆ. ರಾಮಚಂದ್ರನ್ ಉದ್ಘಾಟಿಸಿದರು. ಜತೆಗೆ ಕಸ್ಟಮ್ಸ್ ಹೌಸ್ ಬಳಿ ಟ್ರಕ್ ಪಾರ್ಕಿಂಗ್ ಟರ್ಮಿನಲ್ ವಿಸ್ತರಣೆಗೆ ಗುದ್ದಲಿಪೂಜೆ ನೆರವೇರಿಸಿದರು. ಬಂದರಿನ ಇತ್ತೀಚಿನ ಸಾಧನೆಗಳನ್ನು ಗುರುತಿಸಿ ಮತ್ತು ಸಾಗರ ಕ್ಷೇತ್ರದ ಬೆಳವಣಿಗೆಗೆ ತಮ್ಮ ಕೊಡುಗೆಯನ್ನು ಮುಂದುವರಿಸಲು ನೌಕರರನ್ನುಪ್ರೋತ್ಸಾಹಿಸಿದರು.
ಸ್ವಯಂಚಾಲಿತ ತೂಕದ ಸೇತುವೆಗಳು, ಡ್ರೋನ್ ಆಧಾರಿತ ಕಣ್ಗಾವಲು, ಸ್ವಯಂಚಾಲಿತ ಅಗ್ನಿಶಾಮಕ, ಬಂದರು ದಾಖಲೆಗಳ ಡಿಜಿಟಲ್ ಪ್ರಕ್ರಿಯೆ, ಇ-ಕಾರ್ಡ್ ಟಿಕೆಟಿಂಗ್ ಸೇರಿದಂತೆ ಅತ್ಯಾಧುನಿಕ ಯಾಂತ್ರೀಕೃತಗೊಂಡ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಎನ್ಎಂಪಿಎ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.ಎನ್ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ ಅವರು, ಬಂದರಿನ ಪ್ರಮುಖ ಮೂಲಸೌಕರ್ಯಗಳು, ಸೌಲಭ್ಯಗಳು, ವಿವಿಧ ಯೋಜನೆಗಳು, ಪ್ರಮಾಣೀಕರಣಗಳು, ಬಂದರಿನ ಸಾಧನೆಗಳು ಮತ್ತು ಕಾರ್ಯಾಚರಣೆ ಸಾಮರ್ಥ್ಯಗಳ ಕುರಿತು ವಿವರಿಸಿದರು.