ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವಿಧಾನಸೌಧದಲ್ಲಿ ನಡೆದ ಸದನದಲ್ಲಿ ಮಾತನಾಡಿದ ಅವರು, ಬೆಣ್ಣಿಹಳ್ಳ 148 ಕಿ.ಮೀ. ಹರಿಯುತ್ತಿದ್ದು, ಕುಂದಗೋಳ ಕ್ಷೇತ್ರದಲ್ಲಿ 42 ಕಿ.ಮೀ. ಉದ್ದ ಹರಿಯುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಅಪಾರ ಹಾನಿಯನ್ನುಂಟು ಮಾಡುತ್ತದೆ. ಆಯವ್ಯಯದಲ್ಲಿ ಸೂಚಿಸಿದಂತೆ ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡುವುದಾಗಿ ಸರ್ಕಾರ ತಿಳಿಸಿದೆ. ಆದರೆ ಇದಕ್ಕಾಗಿ ನಿರ್ಧಿಷ್ಟ ಅನುದಾನ ಮೀಸಲಿಟ್ಟಿಲ್ಲ.
ಬೆಣ್ಣಿಹಳ್ಳದ ಸಮಸ್ಯೆ ಸುಮಾರು ವರ್ಷಗಳಿಂದಲೂ ಹೀಗೆ ಇದೆ. ಕುಂದಗೋಳ ಕ್ಷೇತ್ರದ 22 ಹಳ್ಳಿಗಳಲ್ಲಿ ಬೆಣ್ಣಿಹಳ್ಳದಿಂದ ಸಮಸ್ಯೆ ಎದುರಿಸುವಂತಾಗಿದೆ. ಪ್ರತಿವರ್ಷ ಸಾವಿರಾರು ಎಕರೆ ಬೆಳೆಯು ಬೆಣ್ಣಿಹಳ್ಳದಿಂದ ಹಾಗೂ ಇದರ ಉಪಹಳ್ಳಗಳಾದ ಕಗ್ಗೋಡಿ, ಮಾಸ್ತಿ, ದೇಸಾಯಿ, ಡವಗಿ, ಹಾಗೂ ಗೂಗಿಹಳ್ಳಗಳಿಂದ ನಾಳವಾಗುತ್ತದೆ. ಹಾಗಾಗಿ, ಬೆಣ್ಣಿಹಳ್ಳಕ್ಕೆ ಕೇವಲ ತಡೆಗೋಡೆಯಷ್ಟೇ ಅಲ್ಲ. ಇದರ ಉಪಹಳ್ಳಗಳ ಹೂಳು ತೆಗೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಮೇವು ಬ್ಯಾಂಕ್:
ಕುಂದಗೋಳ ಕ್ಷೇತ್ರ ಪ್ರತಿಶತ 70ರಷ್ಟು ಯರೇಭೂಮಿಯಿಂದ ಕೂಡಿದೆ. ಇಲ್ಲಿರುವ ಕೆರೆಗಳ ನೀರು ಬರಗಾಲವಿರುವುದರಿಂದ ಬತ್ತಿ ಹೋಗಿವೆ. ಹಾಗಾಗಿ, ಬರಪೀಡಿತ ತಾಲೂಕಿರುವುದರಿಂದ ಹೆಚ್ಚಿನ ಅನುದಾನವನ್ನು ನೀಡಬೇಕು. ಜನರು ಕೆಲಸ ಅರಸಿ ಬೇರೆಕಡೆಗೆ ಗೂಳೆ ಹೋಗುವುದನ್ನು ತಪ್ಪಿಸಲು ರಸ್ತೆ ಕಾಮಗಾರಿ, ಬರಗಾಲ ಕಾಮಗಾರಿ ಕೈಗೊಳ್ಳಲು ಅದಕ್ಕಾಗಿ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಆಶ್ರಯ ಯೋಜನೆಯಡಿ ಬಡವರಿಗೆ ಸೂರು ಕಲ್ಪಿಸಿ ಸಹಾಯ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ತ್ವರಿತವಾಗಿ ಅನುದಾನ ನೀಡಬೇಕು. ಪ್ರತಿ ವಿದ್ಯಾರ್ಥಿಗಳಿಗೂ ವಿದ್ಯಾನಿಧಿ ಯೋಜನೆಯ ಸೌಲಭ್ಯ ನೀಡಬೇಕು. ಯೋಜನೆಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.