ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸನ್ಮಾನ ಸ್ವೀಕರಿಸಿ ಮಾತನಾಡಿದ ಪರಮೇಶ್ವರ ಹೆಗಡೆ, ತಾನು ಎಂಟನೇ ವಯಸ್ಸಿನಲ್ಲಿಯೇ ಸಂಗೀತ ಅಭ್ಯಾಸ ಪ್ರಾರಂಭಿಸಿದೆ. ಎಷ್ಟು ಕಲಿತರೂ ಅದು ಮುಗಿಯುವುದಿಲ್ಲ. ಸಂಗೀತ ಅರ್ಥವಾಗಬೇಕೆಂದರೆ ಕನಿಷ್ಠ ಐವತ್ತು ವರ್ಷ ಆಗಬೇಕು ಎಂದರು.
ಅಭಿನಂದನಾ ನುಡಿಗಳನ್ನಾಡಿದ ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ, ಪರಮೇಶ್ವರ ಹೆಗಡೆಯವರು ಸ್ಥಾಪಿಸಿದ ಸಂಗೀತ ಸಂಸ್ಥೆಗಳು ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು.ಭುವನೇಶ್ವರಿ ದೇವಸ್ಥಾನದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾಪೋಷಕ ಅಶೋಕ ರಾವ್ (ವಡ್ಡಿನಕೊಪ್ಪ) ಬೆಂಗಳೂರು ಮುಖ್ಯ ಅಭ್ಯಾಗತರಾಗಿ ಅನಿಸಿಕೆ ಹಂಚಿಕೊಂಡರು. ಕರ್ನಾಟಕಿ ಮೃದಂಗ ವಾದಕ ನರಸಿಂಹಮೂರ್ತಿ ಹಳೆಇಕ್ಕೇರಿ ವೇದಿಕೆಯಲ್ಲಿದ್ದರು. ಕೊಳಲುವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿದರು. ರಾಜೇಶ್ವರಿ ಭಟ್ಟ ಡೊಂಬೆಕೈ ಸನ್ಮಾನಪತ್ರ ವಾಚಿಸಿದರು. ಪ್ರಶಾಂತ ಹೆಗಡೆ ಕಾಶಿಗದ್ದೆ ಧನ್ಯವಾದ ಸಮರ್ಪಿಸಿದರು. ಪರಮೇಶ್ವರ ಹೆಗಡೆ ಭಾನ್ಕುಳಿ ನಿರೂಪಿಸಿದರು.
ಸಂಗೀತ ಕಾರ್ಯಕ್ರಮದಲ್ಲಿ ಮೊದಲಿಗೆ ಅಮೃತಾ ರಾವ್ ಬೆಂಗಳೂರು ರಾಗ ಶ್ರೀ ಪ್ರಸ್ತುತ ಪಡಿಸಿ, ಹರಿಭಜನೆ ಮಾಡೋ ನಿರಂತರ ಎಂಬ ಭಜನೆ ಹಾಡಿದರು. ಗುರುರಾಜ ಆಡುಕುಳ ತಬಲಾದಲ್ಲಿ ಅಜಯ ಹೆಗಡೆ ವರ್ಗಾಸರ ಹಾರ್ಮೋನಿಯಂ ಸಾಥ್ ನೀಡಿದರು. ಬಾಲ ಕಲಾವಿದ ಚಕ್ಷು ಕಶ್ಯಪ್ ಬೆಂಗಳೂರು ಸಿತಾರ್ ವಾದನದಲ್ಲಿ ರಾಗ ಯಮನ್ ಪ್ರಸ್ತುತ ಪಡಿಸಿದರು. ಪ್ರಣವ ಶರ್ಮಾ ಕಲ್ಲಾಳ ತಬಲಾ ಸಾತ್ ನೀಡಿದರು. ಹಿರಿಯ ಗಾಯಕ ಪಂ| ಪರಮೇಶ್ವರ ಹೆಗಡೆ ರಾಗ ದುರ್ಗಾ, ರಾಗ ಶಂಕರ ರಾಗ ಕಲಾವತಿ, ರಾಗ ಭೈರವಿ ಹಾಡಿದರು. ವಾದಕ ಡಾ. ರವೀಂದ್ರ ಕಾಟೋಟಿ ಹಾರ್ಮೋನಿಯಂ ಮತ್ತು ಪ್ರೊ. ಗೋಪಾಲಕೃಷ್ಣ ಹೆಗಡೆ ಕಲಭಾಗ ತಬಲಾ ಸಾಥ್ ನೀಡಿದರು. ಕೌಶಿಕ್ ಐತಾಳ ಹಾಗೂ ಕೀರ್ತನ ಹೊಳ್ಳ ಸಹಗಾಯನ ನೀಡಿದರು.