ಹಿಂದುಗಳು ಒಂದಾಗದ ಹೊರತು ಉಳಿಗಾಲವಿಲ್ಲ: ತಿಮಶೆಟ್ಟಿ

KannadaprabhaNewsNetwork |  
Published : Jan 18, 2024, 02:05 AM IST
ಹಿಂದು ವೀರಶೈವ ಲಿಂಗಾಯತ ಮಂಚ ವತಿಯಿಂದ ಹೋಯ್ ಹಮಿ ಹಿಂದುಚ್ ಅಭಿಯಾನ ನಡೆಯಿತು.  | Kannada Prabha

ಸಾರಾಂಶ

ನಿಜವಾದ ಹಿಂದು ಧರ್ಮಿಯರು ಜಾತಿ, ಮತಗಳಲ್ಲಿ ಒಡೆದು ಹರಿದು ಹಂಚಿ ಹೋಗಿದ್ದೇವೆ. ನಾವೆಲ್ಲರೂ ಒಂದಾಗದ ಹೊರತು ನಮಗೆ ಉಳಿಗಾಲವಿಲ್ಲ ಎಂದು ಹಿಂದು ವೀರಶೈವ ಲಿಂಗಾಯತ ಮಂಚ್‌ನ ಅಧ್ಯಕ್ಷ ಧಾನೇಶ ತಿಮಶೆಟ್ಟಿ ಕಳವಳ ವ್ಯಕ್ತ ಪಡಿಸಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಸಮಸ್ತ ಭಾರತ ದೇಶವನ್ನು ಹಿಂದುಸ್ತಾನ ಎಂದು ಕರೆಯುವಾಗ ಇಲ್ಲಿರುವ ಎಲ್ಲರೂ ಹಿಂದುಗಳೆ ಆಗಿದ್ದಾರೆ. ಆದರೆ ನಿಜವಾದ ಹಿಂದು ಧರ್ಮಿಯರು ಜಾತಿ, ಮತಗಳಲ್ಲಿ ಒಡೆದು ಹರಿದು ಹಂಚಿ ಹೋಗಿದ್ದೇವೆ. ನಾವೆಲ್ಲರೂ ಒಂದಾಗದ ಹೊರತು ನಮಗೆ ಉಳಿಗಾಲವಿಲ್ಲ ಎಂದು ಹಿಂದು ವೀರಶೈವ ಲಿಂಗಾಯತ ಮಂಚ್‌ನ ಅಧ್ಯಕ್ಷ ಧಾನೇಶ ತಿಮಶೆಟ್ಟಿ ಕಳವಳ ವ್ಯಕ್ತ ಪಡಿಸಿದರು.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪರಿ ಮಹಾನಗರ ಪಾಲಿಕೆಯ ಬಸವಣ್ಣನವರ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿ ಹೋಯ್ ಹಮಿ ಹಿಂದುಚ್ ಅಭಿಯಾನ ನಡೆಸಿ ಮಾತನಾಡಿದ ಅವರು ಕರ್ನಾಟಕದ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮುಂಬರುವ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು ಪದ ಬಳಕೆ ಮಾಡಬಾರದೆಂದು ನಿರ್ಣಯಿಸಿದ್ದು ದುಃಖದ ಸಂಗತಿಯಾಗಿದೆ. ಇದನ್ನು ನಾವು ಕಟುವಾಗಿ ವಿರೋಧಿಸುತ್ತೇವೆ. ನಾವೆಲ್ಲರೂ ಹಿಂದುಗಳಾಗಿದ್ದು ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಎಲ್ಲರೂ ಹಿಂದು ಎಂದು ನಮೂದಿಸಬೇಕೆಂದು ಮನವಿ ಮಾಡಿದ ಅವರು ಬರುವ ದಿನಗಳಲ್ಲಿ ಕರ್ನಾಟಕ ರಾಜ್ಯದ ತುಂಬಾ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ ಎಂದು ತಿಳಿಸಿದರು.

ಖ್ಯಾತ ಉದ್ಯಮಿ ಎಸ್.ಬಿ. ಪಾಟೀಲ್ ಬಡದಾಳ ಮಾತನಾಡಿ ಹೌದು ನಾವು ಹಿಂದುಗಳು ಎನ್ನುವ ಸ್ವಾಭಿಮಾನದ ಕೂಗು ಪ್ರತಿ ಮನೆಯಿಂದಲೂ ಕೇಳಿಸುವಂತಾಗಬೇಕು. ಜಾತಿ, ಮತ ಪಂಥಗಳನ್ನು ಬದಿಗಿಟ್ಟು ನಾವೆಲ್ಲರೂ ಹಿಂದುಗಳೆನ್ನುವ ಒಗ್ಗಟ್ಟಿನ ಮಂತ್ರ ಜಪಿಸಬೇಕಾದ ಕಾಲ ಬಂದಿದೆ. ಇಂತಹ ಸಂದರ್ಭದಲ್ಲಿ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಇಡುವವರಿಗೆ ಜನ ಬೆಂಬಲಿಸಬಾರದೆಂದು ಮನವಿ ಮಾಡಿದರು.

ಬಸವೇಶ್ವರ ಪ್ರತಿಮೆ ಸಮಿತಿ ಅಧ್ಯಕ್ಷ ನಾರಾಯಣ ಬಹಿರವಾಡ, ಶರದ ಗಂಜಿವಾಲೆ, ಗುರುರಾಜ ಚರಂತಿಮಠ, ವಿಜಯ ಜಂಗಮ, ಸಂಜಯ ಗರುಳೆ, ವಿಶ್ವನಾಥ ಹಿರೇಮಠ, ಸಂಜಯ ಮಣ್ಣೂರಕರ, ಹೆಂತರ ಹರಹರೆ, ಸತೀಶ ಗೊರಡೆ, ಶಿವಾನಂದ ಚೌಗುಲೆ, ಅಪ್ಪಾ ದಿವಾನ, ಸುರೇಶ ವಾಲ್ಕೆ, ವಿಜಯ ಬಿರಾಜದಾರ, ಬಿ.ಕೆ ಹಿರೇಮಠ, ರಾಜೇಂದ್ರ ಮೈಂದರ್ಗಿಕರ, ಶಿವಾನಂದ ಪಾಟೀಲ್, ಸಿದ್ದರಅಮ ಘೊಂಗಡೆ, ವಿಜಯಕುಮಾರ ಸ್ವಾಮಿ, ಶಿವಪುತ್ರ ದರೂರ, ಆನಂದ ಬಿರಾಜದಾರ, ರವಿ ಪಾಟೀಲ, ಗುರುರಾಜ ಕುಂಬಾರ, ಕೃಷ್ಣ ಗೊಂದಳೆ, ಚಂದ್ರಕಾಂತ ಹಲಗೆ, ಅಭಿಷೇಕ ಚರಂತಿಮಠ, ಸುನೀಲ ಚೌಗುಲೆ, ಜಯಶ್ರೀ ಪಾಟೀಲ, ರಾಗಿಣಿ ಬಿರಾಜದಾರ, ಪ್ರಮೀಳಾ ಪಾತರಜದಾರ, ಲಕ್ಷ್ಮೀ ಸ್ಪಮ್ರಾಣಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ