-ರೈತ ಸಮೂಹಕ್ಕೆ ಆಘಾತ । ತೀವ್ರ ಮಳೆ ಕೊರತೆ ಎದುರಿಸಿದರೂ ಕಲಬುರಗಿ ಜಿಲ್ಲೆಯ ಯಾವ ತಾಲೂಕುಗಳ ಹೆಸರು ಮೊದಲ ಪಟ್ಟಿಯಲ್ಲಿಲ್ಲ ಏಕೆ?
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ, ಸರ್ಕಾರ ಮೊದಲ ಹಂತದಲ್ಲಿ ಬರ ಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವ 101 ತಾಲೂಕು ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಒಂದೂ ತಾಲೂಕು ಸ್ಥಾನ ಪಡೆಯದೆ ಇರೋದು ರೈತ ಸಮೂಹಕ್ಕೆ ಆಘಾತ ಉಂಟು ಮಾಡಿದೆ.ಜಿಲ್ಲಾದ್ಯಂತ ಕಳೆದ 1 ತಿಂಗಳಿಂದ ರಣ ಬಿಸಿಲು ತನ್ನ ಪ್ರತಾಪ ತೋರಿಸುತ್ತಿದೆ, ನೀರಿನ ಬವಣೆ ಕಾಡಲಾರಂಭಿಸಿದರೂ ಆ. 12 ರಂದು ಪ್ರಟಗೊಂಡಿರುವ ಬರ ಪೀಡಿತ ತಾಲೂಕುಗಳ ಮೊದಲ ಪಟ್ಟಿಯಲ್ಲಿ ಜಿಲ್ಲೆಯ ಒಂದೂ ತಾಲೂಕು ಕಾಣದಿರೋದು ರೈತರಲ್ಲಿ ಆತಂಕ ಹುಟ್ಟು ಹಾಕಿದೆ. ಅಧಿಕೃತವಾಗಿ ಬರ ಪೀಡಿತ ತಾಲೂಕು ಎಂದು ಘೋಷಣೆಯಾಗದೆ ಇದ್ದಲ್ಲಿ ತಮಗೆ ಯಾವುದೇ ಸವಲತ್ತು ದೊರಕೋದು ಅಷ್ಟಕ್ಕಷ್ಟೆ ಎಂದು ಮಳೆಯ ಕೊರತೆಯಿಂದ ಬಸವಳಿದಿರುವ ರೈತರು ಕಂಗಾಲಾಗಿದ್ದಾರೆ.
ಭಾರತ ಸರ್ಕಾರದ ಬರಗಾಲ ಘೋಷಣೆ ನಿಯಮ- 2020 ಅನುಸಾರ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಾನದಂಡಗಳಡಿ ತಾಲೂಕು ಒಳಗೊಳ್ಳದೆ ಇರಲು ಸಾಧ್ಯವೆ? ಮಳೆಯೇ ಇಲ್ಲದ ಈ ಜಿಲ್ಲೆಯಲ್ಲಿ ಬರಗಾಲ ಮೊದಲು ಘೋಷಣೆಯಾಗಬೇಕಿತ್ತು. ಅದು ಬಿಟ್ಟು ಈ ರೀತಿ ಬೇಕಾಬಿಟ್ಟಿತನ ತೋರಿದರೆ ಹೇಗೆಂದು ರೈತರು ಕಂಗಾಲಾಗಿದ್ದಾರೆ.
ಕಲುರಗಿಯಲ್ಲಿ ಕಳೆದ 3 ತಿಂಗಳಲ್ಲಿ ಮಳೆಯೇ ಬಂದಿಲ್ಲ. ಕೆಲವು ತಾಲೂಕುಗಳಲ್ಲಂತೂ ನಾಲ್ಕಾರು ದಿನ ಬಿಟ್ರೆ ಮಳೆ ಕಂಡಿಲ್ಲ. ರೈತರು ಮುಂಗಾರು ಬಿತ್ತಿ ಹರಗಿ ಹಿಂಗಾರು ಬಿತ್ತಿದ್ದಾರೆ. ಈಗ ತೊಗರಿ ಸಹ ಹರಗಿ ಮತ್ತೊಂದು ಬೆಳೆ ಬಿತ್ತೋಣವೆ? ಮಳೆ ಬರುವುದೆ? ಎಂದು ಕಾಯುತ್ತಿದ್ದಾರೆ. ಈ ರೀತಿಯಲ್ಲಿ ಭೀಕರ ಬರಗಾಲದಲ್ಲಿ ರೈತರು ಸಿಲುಕಿ ಒದ್ದಾಡುತ್ತಿರೋವಾಗ ಡ್ರಾಟ್ ಮ್ಯಾನುವಲ್, ಅಲ್ಲಿನ ಮಾನದಂಡಗಳು ಯಾವ ಸೀಮೆಯ ಲೆಕ್ಕ? ಎಂಬ ಪ್ರಶ್ನೆ ರೈತರು ಕೇಳುತ್ತಿದ್ದಾರೆ......ಬಾಕ್ಸ್......
- ಮೊದಲ ಪಟ್ಟಿಯಲ್ಲಿ ಕಲಬುರಗಿಯ ಒಂದೂ ತಾಲೂಕು ಇಲ್ಲ
- ಅಂತರ್ಜಲ ಮಟ್ಟದಲ್ಲಿ ಕುಸಿತ ಕಂಡರೂ ಕೇಳೋರಿಲ್ಲ ಗೋಳು
- 12 ತಾಲೂಕು ಸಾಧಾರಣ ಬರಪೀಡಿತ, 101 ತಾಲೂಕು ಪಟ್ಟಿ
........ಬಾಕ್ಸ್.....
- ರಾಯಚೂರಿನ 7 ತಾಲೂಕುಗಳಲ್ಲಿ 5 ಬರ ಪೀಡಿತ, ಮಸ್ಕಿ ಭೀಕರ ಬರ ಪೀಡಿತ- ಬೀದರ್ನ 8 ತಾಲೂಕುಗಳಲ್ಲಿ 4 ಬರ ಪೀಡಿತ
- ವಿಜಯ ನಗರ ಜಿಲ್ಲೆಯ 6 ತಾಲೂಕುಗಳಲ್ಲಿ 4 ಬರ ಪೀಡಿತ- ಕೊಪ್ಪಳದ 7 ತಾಲೂಕುಗಳಲ್ಲಿ 3 ಬರ ಪೀಡಿತ, ಗಂಗಾವತಿ ಭೀಕರ ಬರ ಪೀಡಿತ
- ಯಾದಗಿರಿ 6 ತಾಲೂಕುಗಳಲ್ಲಿ ಶಹಾಪೂರ ಬರ ಪೀಡಿತ- ಬಳ್ಳಾರಿಯ 5 ತಾಲೂಕುಗಳಲ್ಲಿ 4 ಬರ ಪೀಡಿತ
-ರಾಜ್ಯದ 190 ತಾಲೂಕು ಪೈಕಿ 13 ತಾಲೂಕುಲ್ಲಿ ಭೀಕರ ಮಳೆ ಕೊರತೆ ದಾಖಲಿಸಿ101 ತಾಲೂಕುಗಳ ಪಟ್ಟಿ ಬಿಡುಗಡೆ.
ಫೋಟೋ- ಗೊಬ್ಬೂರ ಟ್ಯಾಂಕ್ಮಳೆ ಇಲ್ಲದೆ ಸಂಪೂರ್ಣ ಬರಿದಾಗಿರುವ ಗೊಬ್ಬೂರ ಕರೆ. ಜಿಲ್ಲೆಯ 170 ಕೆರೆಗಳಲ್ಲಿ 150 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ.