ಭಗವದ್ಗೀತೆಯಲ್ಲಿನ ಜ್ಞಾನಕ್ಕಿಂತ ಮಿಗಿಲಿಲ್ಲ: ಶೇಖ್ ನಜೀರ್ ಭಾಷಾ

KannadaprabhaNewsNetwork |  
Published : Aug 26, 2024, 01:32 AM IST
ಫೋಟೋ: 25 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ತಾಲೂಕಿನ ಮುತ್ಕೂರು ಗ್ರಾಮದಲ್ಲಿನ ಜ್ಞಾನಧರಾ ಟ್ರಸ್ಟ್ ಹಾಗೂ ಭೂಮಿ ಪೌಂಡೇಷನ್ ನ ನೂತನ ಕಚೇರಿ ಉದ್ಗಾಟನೆ ಕಾರ್ಯಕ್ರಮದಲ್ಲಿ ಆಂದ್ರ ಪ್ರದೇಶದ ಗೀತಾ ವೈಭವ ಟ್ರಸ್ಟ್ ಅದ್ಯಕ್ಷ ಶೇಖ್ ನಜೀರ್ ಬಾಷ ಹಾಜರಿದ್ದರು. | Kannada Prabha

ಸಾರಾಂಶ

ಭಗವದ್ಗೀತೆಯಲ್ಲಿನ ಜ್ಞಾನಕ್ಕಿಂತ ಮಿಗಿಲಿಲ್ಲ, ಭಗವದ್ಗೀತೆಯಲ್ಲಿಲ್ಲದ ವಿಜ್ಞಾನ ಮತ್ತೊಂದಿಲ್ಲ ಎಂದು ಆಂಧ್ರ ಪ್ರದೇಶದ ಗೀತಾ ವೈಭವ ಟ್ರಸ್ಟ್ ಅಧ್ಯಕ್ಷ ಶೇಖ್ ನಜೀರ್ ಭಾಷಾ ಹೇಳಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ ಭಗವದ್ಗೀತೆಯಲ್ಲಿನ ಜ್ಞಾನಕ್ಕಿಂತ ಮಿಗಿಲಿಲ್ಲ, ಭಗವದ್ಗೀತೆಯಲ್ಲಿಲ್ಲದ ವಿಜ್ಞಾನ ಮತ್ತೊಂದಿಲ್ಲ ಎಂದು ಆಂಧ್ರ ಪ್ರದೇಶದ ಗೀತಾ ವೈಭವ ಟ್ರಸ್ಟ್ ಅಧ್ಯಕ್ಷ ಶೇಖ್ ನಜೀರ್ ಭಾಷಾ ಹೇಳಿದರು.

ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದಲ್ಲಿ ಜ್ಞಾನಧಾರಾ ಟ್ರಸ್ಟ್ ಹಾಗೂ ಭೂಮಿ ಫೌಂಡೇಶನ್‌ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಸ್ಲಾಂ ಅಂದರೆ ವಿಶ್ವಾಸ, ದೇವರ ಮೇಲೆ, ಧರ್ಮದ ಮೇಲೆ, ಗ್ರಂಥಗಳ ಮೇಲಿನ ವಿಶ್ವಾಸ, ಆದರೆ ಇಸ್ಲಾಂ, ಕ್ರಿಸ್ಚಿಯನ್ ಧರ್ಮಗಳಿ ಕಲಿಯುಗದಲ್ಲಿ ಹುಟ್ಟಿದ ಧರ್ಮಗಳಾಗಿದ್ದು ಅದಕ್ಕೂ ಮೊದಲೆ ಅಂದರೇ ಸುಮಾರು ೫೧೭೦ ವರ್ಷಗಳ ಹಿಂದೆ ದ್ವಾಪರ ಯುಗದಲ್ಲಿ ಶ್ರೀ ಕೃಷ್ಣನು ಆರ್ಜುನನಿಗೆ ಈ ಭಗವದ್ಗೀತೆಯನ್ನು ಭೋದಿಸಿ ಇಡಿ ಪ್ರಪಂಚಕ್ಕೆ ಪಸರಿಸುವಂತೆ ಮಾಡಿದ್ದ ತದ ನಂತರವೇ ಬೇರೆ ಬೇರೆ ಧರ್ಮಗಳು ಹುಟ್ಟಿಕೊಂಡವು ಎಂದರು.

ಜ್ಞಾನಧಾರಾ ಟ್ರಸ್ಟ್ ಅಧ್ಯಕ್ಷ ರಾಧಕೃಷ್ಣ ಮಾತನಾಡಿ, ಪ್ರತಿವರ್ಷ ನಮ್ಮ ಪರಿಸರ ಉಳಿವಿಗಾಗಿ ಲಕ್ಷ ವೃಕ್ಷ ನೆಡುವ ಕಾರ್ಯದ ಜೊತೆ ಭಗವದ್ಗೀತೆಯ ಸಾರವನ್ನು ಎಲ್ಲರಿಗೂ ತಲುಪಿಸುವುದೇ ನಮ್ಮ ಉದ್ದೇಶವಾಗಿದೆ ಎಂದರು.

ಜ್ಞಾನಧಾರಾ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಕುಮಾರ್ ಮಾತನಾಡಿ ಕಳೆದ ವರ್ಷ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಅರಣ್ಯ ವಾಸಿಗಳಿಗೆ ಭಗವದ್ಗೀತಾ ಪುಸ್ತಕ ವಿತರಣೆ ಮಾಡುವ ಮೂಲಕ ಆ ಭಾಗದಲ್ಲಿ ಒಂದು ಲಕ್ಷ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗಿತ್ತು, ಈ ವರ್ಷ ಸ್ವಲ್ಪ ತಡವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಲಕ್ಷ ವೃಕ್ಷ ನೆಡುವ ಅಭಿಯಾನ ಶುರು ಮಾಡಲಾಗುವುದು ಎಂದರು.

ಗೀತಾ ವೈಭವ ಟ್ರಸ್ಟ್ ಕಾರ್ಯದರ್ಶಿ ಶುಷ್ಮಶ್ರೀ, ಎಂ ಆರ್ ವೆಂಕಟೇಶ್, ಆರ್ ರವೀಂದ್ರ, ಎಂ ಡಿ ದೇವೇಗೌಡ, ಪ್ರತಾಪ್, ಜೈ ಕಿಶನ್, ನಾರಾಯಣಸ್ವಾಮಿ, ಪಿ ರಘುಶಂಕರ್, ಶ್ರೀನಾಥ್, ರವೀಂದ್ರ, ಮಹೇಶ್ ಕುಮಾರ್, ರಾಮಚಂದ್ರಪ್ಪ, ವೆಂಕಟೇಶ್ ಪಿ ಹಾಗೂ ವೆಂಕಟಸ್ವಾಮಿ ಹಾಜರಿದ್ದರು. 2 ಹೊಸಕೋಟೆ ಅನುಗೊಂಡನಹಳ್ಳಿ ಹೋಬಳಿಯ ಮುತ್ಕೂರು ಗ್ರಾಮದಲ್ಲಿ ಜ್ಞಾನಧಾರಾ ಟ್ರಸ್ಟ್ ಹಾಗೂ ಭೂಮಿ ಫೌಂಡೇಶನ್‌ ಕಚೇರಿ ಉದ್ಘಾಟನೆ ನೆರವೇರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿವ್‌-ಇನ್‌ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌!
ಪಿಎಂ ಹೇಳ್ತಿರೋ ಆರೆಂಜ್‌ ಆರ್ಥಿಕತೆ ರಾಜ್ಯದಲ್ಲಿ 2016ಲ್ಲೇ ನೀತಿ ಜಾರಿ: ಡಿಕೆ