ಹಂದಿ ಸಾಕಾಣಿಕೆ ತೆರವಿಗೆ ನೋಟೀಸ್‌ ಜಾರಿ

KannadaprabhaNewsNetwork |  
Published : Dec 11, 2025, 01:30 AM IST
10ಜಿಪಿಟಿ4ಗುಂಡ್ಲುಪೇಟೆ ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ಹಂದಿ ಸಾಗಾಣಿಕೆದಾರರಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟೀಸ್‌ ಡಿ.10 ರಂದು ನೀಡಿದ್ದಾರೆ. | Kannada Prabha

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಪರಿಸರ ಸೂಕ್ಷ್ಮ ವಲಯದಂಚಿನ ಜಮೀನಿನಲ್ಲಿ ಅಕ್ರಮವಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವು ಸಂಬಂಧ ಹಂದಿ ಸಾಕಾಣಿಕೆದಾರರಿಗೆ ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ವಿಚಾರಣೆಗೆ ನೋಟೀಸ್‌ ಜಾರಿ ಆದೇಶ ಹೊರಡಿಸಿದ್ದಾರೆ.

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ಪರಿಸರ ಸೂಕ್ಷ್ಮ ವಲಯದಂಚಿನ ಜಮೀನಿನಲ್ಲಿ ಅಕ್ರಮವಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವು ಸಂಬಂಧ ಹಂದಿ ಸಾಕಾಣಿಕೆದಾರರಿಗೆ ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ವಿಚಾರಣೆಗೆ ನೋಟೀಸ್‌ ಜಾರಿ ಆದೇಶ ಹೊರಡಿಸಿದ್ದಾರೆ.

ಕಳೆದ ಡಿ.೪ ರ ಕನ್ನಡಪ್ರಭ ಪತ್ರಿಕೆಯಲ್ಲಿ ಓಂಕಾರ ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಹಂದಿ ಸಾಕಾಣಿಕೆ ಎಂದು ವರದಿ ಪ್ರಕಟಿಸಿ ತಾಲೂಕು ಆಡಳಿತ ಗಮನ ಸೆಳೆದಿತ್ತು. ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ರಾಜಸ್ವ ನಿರೀಕ್ಷಕರ ವರದಿ ಆಧರಿಸಿ ಡಿ.೧೬ ರಂದು ತಹಸೀಲ್ದಾರ್‌ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಹಂದಿ ಸಾಕಾಣಿಕೆದಾರ ಸಂತೋಷ್‌, ರಂಗಸ್ವಾಮಿ ನಾಯಕಗೆ ನೋಟೀಸ್‌ ಜಾರಿ ಮಾಡಿದ್ದಾರೆ.

ಬೇಗೂರು ರಾಜಸ್ವ ನಿರೀಕ್ಷಕರ ವರದಿ ಪ್ರಕಾರ ಹಂದಿ ಸಾಕಾಣಿಕೆ ಮಾಡುವ ಸ್ಥಳ ಸೂಕ್ಷ್ಮ ಪರಿಸರ ವಲಯದಂಚಿನಲ್ಲಿದೆ. ಕಾಡು ಪ್ರಾಣಿಗಳು ಸಂಚರಿಸುವ ಸ್ಥಳವಾಗಿದ್ದು,ಆಹಾರಕ್ಕಾಗಿ ಹೊರ ಬರುತ್ತವೆ ಹಾಗಾಗಿ ಹಂದಿ ಸಾಕಾಣಿಕೆ ಕೇಂದ್ರ ತೆರವುಗೊಳಿಸಬೇಕಿರುವ ಕಾರಣ ಓಂಕಾರ ವಲಯ ಅರಣ್ಯಾಧಿಕಾರಿ,ದೂರುದಾರ ರವಿಕುಮಾರ್‌ ದೂರಿನ ಮೇರೆಗೆ ತಹಸೀಲ್ದಾರ್‌ ಕ್ರಮ ಕೈಗೊಂಡು ವಿಚಾರಣೆಗೆ ಮುಂದಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ