
ರಾಮನಗರ: ವಾಣಿಜ್ಯ ತೆರಿಗೆ ಇಲಾಖೆ ಯುಪಿಐ ಮೂಲಕ 40 ಲಕ್ಷ ರುಪಾಯಿಗಳಿಗೂ ಹೆಚ್ಚಿನ ವಹಿವಾಟು ನಡೆಸಿರುವ 185 ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಈಗ ನೋಟಿಸ್ ಪಡೆದಿರುವ 185 ವ್ಯಾಪಾರಿಗಳ ಪೈಕಿ ಚನ್ನಪಟ್ಟಣ-ಮಾಗಡಿ ತಾಲೂಕುಗಳಲ್ಲಿ 55 ಮಂದಿ ಮತ್ತು ರಾಮನಗರ-ಕನಕಪುರದಲ್ಲಿ 130 ವಹಿವಾಟುದಾರರು ಸೇರಿದ್ದಾರೆ. ಇವರೆಲ್ಲರು ತೆರಿಗೆ ನೋಟಿಸ್ ಏನೆಂದು ಉತ್ತರ ಕೊಡಬೇಕೆಂದು ಚಿಂತೆಗೀಡಾಗಿದ್ದಾರೆ.
ಫೋನ್ಪೇ, ಗೂಗಲ್ ಪೇ ಮುಂತಾದ ಆಪ್ಗಳ ಮೂಲಕ ಗ್ರಾಹಕರು ತಾವು ಕೊಂಡ ವಸ್ತುಗಳು ಅಥವಾ ಸೇವೆಗಳಿಗೆ ಹಣ ಪಾವತಿಸುವುದು ಇತ್ತೀಚಿನ ದಿನಗಳಲ್ಲಿ ವಾಡಿಕೆ. ಚಿಲ್ಲರೆ ಸಮಸ್ಯೆ, ನಗದು ರಕ್ಷಣಾ ಸಮಸ್ಯೆಗಾಗಿ ಬಹುತೇಕ ಗ್ರಾಹಕರು ಈ ಆಪ್ಗಳ ಮೂಲಕ ಹಣ ಪಾವತಿಸುತ್ತಾರೆ.ಜಿಎಸ್ಟಿ ವ್ಯವಸ್ಥೆಯಡಿ ನೋಂದಣಿ ಕಡ್ಡಾಯ:
40,22,095 ರು.ವಹಿವಾಟು ನಡೆಸಿದ ವ್ಯಾಪಾರಿಯೊಬ್ಬರಿಗೆ ನೋಟಿಸ್ ಜಾರಿಯಾಗಿದೆ. ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗೆ ವಾರ್ಷಿಕ 40 ಲಕ್ಷ ರುಪಾಯಿಗಳಿಗೂ ಹೆಚ್ಚು ವಹಿವಾಟು ಮಾಡಿದರೆ, ಜಿಎಸ್ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆದರೆ, ಸದರಿ ವ್ಯಕ್ತಿ ಜಿಎಸ್ಟಿ ಅಡಿ ನೋಂದಾಯಿಸಿಕೊಂಡಿಲ್ಲ. ಹೀಗಾಗಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಹಾಗೊಮ್ಮೆ ಜಿಎಸ್ಟಿ ಕಾಯ್ದೆಯಡಿ ವ್ಯಾಪಾರವನ್ನು ನೋಂದಣಿ ಮಾಡಿಕೊಂಡಿದ್ದರೆ, ನೋಂದಣಿ ಪ್ರಮಾಣ ಪತ್ರವನ್ನು ಕಚೇರಿಗೆ ತಲುಪಿಸುವಂತೆ ಸೂಚಿಸಲಾಗಿದೆ. ಕಾಯ್ದೆ ಪ್ರಕಾರ ನೋಂದಣಿ ಅಗತ್ಯವಿಲ್ಲ ಎಂದು ವ್ಯಾಪಾರಿ ಅಭಿಪ್ರಾಯಪಟ್ಟಲ್ಲಿ ಅಥವಾ 40 ಲಕ್ಷ ರುಪಾಯಿ ವಹಿವಾಟು ದಾಟಿಲ್ಲ ಎಂದು ಅಭಿಪ್ರಾಯವಾದರೆ ಅಗತ್ಯ ಪುರಾವೆಗಳನ್ನು ಒದಗಿಸಬೇಕಾಗಿದೆ. ನಿಗದಿತ ಸಮಯದೊಳಗೆ ಸಮಜಾಯಿಷಿ ನೀಡದಿದ್ದರೆ ಜಿಎಸ್ಟಿ ಕಾಯ್ದೆಯ ಸೆಕ್ಷನ್ 122(1)(ಎಕ್ಸ್ ಐ) ಮತ್ತು 122(1ಎ) ರೀತ್ಯ ಕ್ರಮ ಕೈಗೊಳ್ಳುವುದಾಗಿ ನೋಟಿಸ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಯಾರ್ಯಾರು ಜಿಎಸ್ಟಿ ವ್ಯಾಪ್ತಿಗೆ ಬರಲ್ಲ:
ಬಾಕ್ಸ್ ...........
ಸಣ್ಣ ವ್ಯಾಪಾರಿಗಳ ಜಿಎಸ್ಟಿ ತಪಾಸಣೆ ಮತ್ತು ನೋಟಿಸ್ಗಳು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ. ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಬೇಕೋ ಅಥವಾ ದೊಡ್ಡ ತೆರಿಗೆ ಕಟ್ಟಬೇಕೋ ಎಂದು ತಿಳಿಯದೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಬಹುತೇಕರು ಆನ್ಲೈನ್ ಪೇಮೆಂಟ್ ಬೇಡ ನಮಗೆ ಕ್ಯಾಶ್ ನೀಡಿ ಎಂದು ಗ್ರಾಹಕರ ಬಳಿ ಕೇಳುತ್ತಿದ್ದಾರೆ.
ರಾಮನಗರದ ವ್ಯಾಪಾರಿಯೊಬ್ಬರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿರುವುದು.