ನರಸಿಂಹರಾಜಪುರ: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದವರು ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ಶನಿವಾರ ಬಾಗಿನ ಅರ್ಪಿಸಿದರು.
ನರಸಿಂಹರಾಜಪುರ: ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದವರು ಮೆಣಸೂರು ಸಮೀಪದ ಭದ್ರಾ ಹಿನ್ನೀರಿಗೆ ಶನಿವಾರ ಬಾಗಿನ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಮಾತನಾಡಿ, ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ಭದ್ರಾ ತುಂಬಿ ಹರಿಯುತ್ತಿದೆ. ರೈತರಿಗೆ ಈ ವರ್ಷ ನೆಮ್ಮದಿ, ಸಂತೋಷ ತರಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಭದ್ರಾ ಹಿನ್ನೀರಿಗೆ ಬಾಗಿನ ಅರ್ಪಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮ ಶ್ರೀನಿವಾಸ್, ಮಹಿಳಾ ಘಟಕದ ಸದಸ್ಯರಾದ ಶಾಂತ, ಅನಿತ, ಭಾನುಮತಿ,ಶೈಲಜ, ಲಲಿತಮ್ಮ,ಭವಾನಿ ಇದ್ದರು. ಎಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.