ಸಿರುಗುಪ್ಪ: ಈ ಬಾರಿ ರೈತರ ಬೆಳೆಗಳು ಸಮೃದ್ಧಿಯಾಗಿ ಬರಲಿ ಎಂದು ಹಾರೈಸಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ. ನದಿಯನ್ನು ಪೂಜಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಒಂದು ಪ್ರಮುಖ ಆಚರಣೆಯಾಗಿದೆ. ರೈತರ ಬೆಳೆಗಳು ಸಮೃದ್ಧಿಯಾದರೆ ಜನಜೀವನವೂ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ನಗರಸಭೆಯ ಸದಸ್ಯರಾದ ಮೋಹನ್ ರೆಡ್ಡಿ, ಮೇಕೆಲ ವೀರೇಶ್, ನಟರಾಜ್, ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶೇಖರಗೌಡ, ಮುಖಂಡರಾದ ಇಬ್ರಾಹಿಂಪುರ ವೀರನಗೌಡ, ವೀರಭದ್ರಗೌಡ, ಚಿರಂಜೀವಿ ರೆಡ್ಡಿ, ನಾಗೇಶಪ್ಪ, ಮಹದೇವ ಹೊನ್ನಪ್ಪ, ರಾಮರಾಜ, ಗಂಗಣ್ಣ, ರವಿಗೌಡ, ಮಂಜುನಾಥ, ಶರಣಬಸನಗೌಡ, ಸಿರಿಗೆರೆ ವಿರೂಪಾಕ್ಷಪ್ಪ, ಎಚ್. ಶೇಖಪ್ಪ, ಶಂಕ್ರಪ್ಪ, ಬೆಳಗಲ್ ಶಿವಪ್ಪ, ರಾರಾವಿ ಮಾರೇಶ, ಸೋಮಯ್ಯ ಮತ್ತಿತರರಿದ್ದರು.