ಜನವಸತಿ ಪ್ರದೇಶದಲ್ಲಿದ್ದ ಕೋಳಿ ಫಾರಂ ತೆರವಿಗೆ ಮುಂದಾದ ಅಧಿಕಾರಿಗಳು

KannadaprabhaNewsNetwork |  
Published : Jun 18, 2025, 12:10 AM ISTUpdated : Jun 18, 2025, 12:11 AM IST
17ಕೆಎಂಎನ್ ಡಿ14 | Kannada Prabha

ಸಾರಾಂಶ

ಜನವಸತಿ ಪ್ರದೇಶಕ್ಕೆ ಸಮೀಪವಿದ್ದ ಕೋಳಿ ಫಾರಂನ್ನು ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತಕ್ಕೆ ಮಾಲೀಕರು ವಾರದೊಳಗೆ ಸ್ಥಳಾಂತರ ಮಾಡುವುದಾಗಿ ಮಾಡಿದ ಲಿಖಿತ ಮನವಿಯಿಂದ ಗಡುವು ನೀಡಿ ವಾಪಸ್ಸಾದ ಘಟನೆ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಡ್ಯಜನವಸತಿ ಪ್ರದೇಶಕ್ಕೆ ಸಮೀಪವಿದ್ದ ಕೋಳಿ ಫಾರಂನ್ನು ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತಕ್ಕೆ ಮಾಲೀಕರು ವಾರದೊಳಗೆ ಸ್ಥಳಾಂತರ ಮಾಡುವುದಾಗಿ ಮಾಡಿದ ಲಿಖಿತ ಮನವಿಯಿಂದ ಗಡುವು ನೀಡಿ ವಾಪಸ್ಸಾದ ಘಟನೆ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಸಮೀಪ ನಡೆಯಿತು.ಕುಮಾರ್ ಎಂಬುವವರಿಗೆ ಸೇರಿದ ಕೋಳಿ ಫಾರಂನ್ನು ತೆರವುಗೊಳಿಸಲು ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸುತ್ತ ಅಳವಡಿಸಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿದರು. ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಲೀಕ ಕುಮಾರ್ ವಾರದೊಳಗೆ ತೆರವು ಮಾಡುವುದಾಗಿ ಮಾಡಿದ ಮನವಿ ಪುರಸ್ಕರಿಸಿ ಗಡುವು ನೀಡಿ ವಾಪಸ್ಸಾದರು.ಕುಮಾರ್ ಗ್ರಾಮಕ್ಕೆ ಹೊಂದಿಕೊಂಡಂತೆ ಕೋಳಿ ಫಾರಂ ನಿರ್ಮಿಸಿದ್ದರು. ಇದರಿಂದ ಸೊಳ್ಳೆ, ನೊಣಗಳ ಕಾಣ, ವಾಸನೆ ಬರುತ್ತಿರುವ ಕಾರಣ ಗ್ರಾಮಸ್ಥರು ಮತ್ತು ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ತಾಲೂಕು ಆಡಳಿತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ಕಾರ್‍ಯೋನ್ಮುಖರಾದ ತಾಲೂಕು ಆಡಳಿತದ ಅಧಿಕಾರಿಗಳು ಮಾಲೀಕ ಕುಮಾರ್‌ಗೆ ನೋಟೀಸ್ ನೀಡಿ ತೆರವುಗೊಳಿಸುವಂತೆ ಸೂಚಿಸಿದ್ದರು.ನೋಟಿಸ್ ಕೊಟ್ಟು ಕಾಲಾವಕಾಶ ನೀಡಿದ್ದರೂ ಸಹ ಮಾಲೀಕ ಕೋಳಿ ಫಾರಂನ್ನು ಸ್ಥಳಾಂತರ ಅಥವಾ ತೆರವುಗೊಳಿಸಲಿಲ್ಲ. ಇದರಿಂದ ಬೇಸತ್ತ ಅಧಿಕಾರಿಗಳು ಇಂದು ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿ ಕೋಳಿ ಫಾರಂನ ತಂತಿ ಬೇಲಿಯನ್ನು ತೆರವುಗೊಳಿಸಿದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಮಾಲೀಕ ಕುಮಾರ್ ವಾರದೊಳಗೆ ತೆರವುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ಎಚ್ಚರಿಕೆಯ ಗಡುವು ನೀಡಿ ವಾಪಸ್ಸಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''