- ಗ್ರಾಮಸ್ಥರು- ಜಾಗ ತಮ್ಮದೆಂದ ವ್ಯಕ್ತಿ ಮಧ್ಯೆ ತೀವ್ರ ವಾಕ್ಸಮರ । ಪಾಲಿಕೆ ಆಯುಕ್ತೆ ರೇಣುಕಾ ಸ್ಥಳಕ್ಕೆ ಭೇಟಿ, ಮನವೊಲಿಕೆ- - -
- ವಿವಾದಿತ ಜಾಗ ಕೈಬಿಟ್ಟು ಮಧ್ಯ 30 ಅಡಿ ರಸ್ತೆ ನಿರ್ಮಿಸುವುದಾಗಿ ಹೇಳಿದರೂ ಕೇಳದ ಶಿವಕುಮಾರ
- ಬದಲಿ ರಸ್ತೆ ಮಾಡಿಕೊಳ್ಳಿ, ನಮ್ಮ ಜಾಗವೇ ಯಾಕೆ ಎಂಬ ಆಕ್ಷೇಪಕ್ಕೆ ಕೆರಳಿದ ಗ್ರಾಮಸ್ಥರು- ಯಾರೋ ಜಾಗ ತಮ್ಮದೆಂದರೆ ಅವರ ಜತೆ ಮಾತೇಕೇ, ನಿಯಮಾನುಸಾರ ರಸ್ತೆ ನಿರ್ಮಿಸಿ ಎಂದ ಗ್ರಾಮಸ್ಥರು
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಹಳೇ ಕುಂದುವಾಡ ಗ್ರಾಮದ ಮುಖ್ಯ ರಸ್ತೆಯ ಕೆರೆ ಸಮೀಪದ ಜಾಗ ತಮ್ಮದೆಂದು ಶಿವಕುಮಾರ ಎಂಬವರು ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ತಂತಿ ಬೇಲಿ ಕಿತ್ತುಹಾಕಿದ್ದರಿಂದ ಶಿವಕುಮಾರ ನ್ಯಾಯಾಲಯದ ಮೊರೆ ಹೋಗಿದ್ದ ಪರಿಣಾಮ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೇ ನಿಂತು, ಸಂಚಾರ ಮಾರ್ಗದಲ್ಲಿ ಗುಂಡಿಬಿದ್ದಿತ್ತು.
ವಿವಾದಿತ ಸ್ಥಳ ವೀಕ್ಷಿಸಿದ ಗ್ರಾಮಸ್ಥರು ಹಾಗೂ ರಸ್ತೆಗೆ ಬೇಲಿ ಹಾಕಿದ್ದ ವ್ಯಕ್ತಿ ಕಡೆಯವರ ಮಾತುಗಳನ್ನು ಆಲಿಸಿದ ಪಾಲಿಕೆ ಆಯುಕ್ತರಾದ ರೇಣುಕಾ, ಸಾರ್ವಜನಿಕರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ವಿವಾದಿತ ಜಾಗವನ್ನು ಬಿಟ್ಟು, ಮಧ್ಯ 30 ಅಡಿ ರಸ್ತೆ ನಿರ್ಮಿಸುವುದಾಗಿ ಹೇಳಿದರು. ಅದಕ್ಕೆ ಕಿವಿಗೊಡದ ಶಿವಕುಮಾರ, ಬದಲಿ ರಸ್ತೆ ಮಾಡಿಕೊಳ್ಳಿ. ನಮ್ಮ ಜಾಗವೇ ಯಾಕೆ ಎಂದು ಆಕ್ಷೇಪಿಸಿದರು. ಆಗ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಸೂಕ್ಷ್ಮತೆ ಅರಿತ ಪಾಲಿಕೆ ಆಯುಕ್ತೆ ರೇಣುಕಾ, ಪಕ್ಕದ ಜಾಗದ ಮಾಲೀಕ ಶಿವಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿವಾದ ಮುಂದುವರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. 30 ಅಡಿ ರಸ್ತೆ ನಿರ್ಮಿಸುತ್ತೇವೆ ಎಂದು ಹೇಳಿದ್ದಕ್ಕೆ ಶಿವಕುಮಾರ ಸಹ ಒಪ್ಪಿಕೊಂಡಿದ್ದಾರೆ. ಅಲ್ಲದೇ. ಕೆರೆ ರಸ್ತೆಯ ಗುಂಡಿಗಳನ್ನು ಸಹ ಮುಚ್ಚುತ್ತೇವೆ. ಆದಷ್ಟು ಬೇಗನೇ ಅಲ್ಲಿಯೂ ಸಿಮೆಂಟ್ ರಸ್ತೆ ನಿರ್ಮಿಸುವ ಭರವಸೆಯನ್ನು ಆಯುಕ್ತರು ನೀಡಿದರು.
ಕಾಂಗ್ರೆಸ್ ಮುಖಂಡ ಹುಲ್ಮನಿ ಗಣೇಶ, ಹಳೇ ಕುಂದುವಾಡ ಗ್ರಾಮದ ಮುಖಂಡರಾದ ಮುರುಗೆವ್ವರ ಅಣ್ಣಪ್ಪ, ಮಿಟ್ಲಕಟ್ಟೆ ಚಂದ್ರಪ್ಪ, ಡಿ.ಜಿ.ಪ್ರಕಾಶ, ಎಚ್.ಜಿ.ಮಂಜಪ್ಪ, ಯುವ ಮುಖಂಡರಾದ ಮಧು ನಾಗರಾಜ, ಪ್ರಭಾಕರ, ಲಿಂಗರಾಜ, ಕಿಟ್ಟಪ್ಪ, ಹಾಲಪ್ಪ ನಿಂಗಪ್ಪ, ಅಜಯ್, ಚಂದ್ರು, ಸಿದ್ದೇಶ, ಗದಿಗೆಪ್ಪ, ಪಾಲಿಕೆ ಅಧಿಕಾರಿಗಳು ಇದ್ದರು.
-7ಕೆಡಿವಿಜಿ1.ಜೆಪಿಜಿ:
ದಾವಣಗೆರೆ ಹೊರವಲಯದ ಹಳೇ ಕುಂದುವಾಡ ಗ್ರಾಮಸ್ಥರು ಸಿ.ಸಿ. ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ದಿಢೀರ್ ರಸ್ತೆ ತಡೆ ನಡೆಸಿ, ಪಾಲಿಕೆ ಆಯುಕ್ತೆ ರೇಣುಕಾ ಇತರೆ ಅಧಿಕಾರಿಗಳ ಸಮ್ಮುಖ ಪ್ರತಿಭಟಿಸಿದರು. -7ಕೆಡಿವಿಜಿ2.ಜೆಪಿಜಿ:ದಾವಣಗೆರೆ ಹೊರವಲಯದ ಹಳೇ ಕುಂದುವಾಡ ಗ್ರಾಮಸ್ಥರು- ಜಾಗ ತಮ್ಮದೆಂದು ಹೇಳಿದ ಶಿವಕುಮಾರ ಅವರ ಅಹವಾಲುಗಳನ್ನು ಪಾಲಿಕೆ ಆಯುಕ್ತೆ ರೇಣುಕಾ ಮತ್ತಿತರ ಇಲಾಖೆಗಳ ಅಧಿಕಾರಿಗಳು ಆಲಿಸಿದರು.