17ರಂದು ಸರಗೂರು ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Jan 07, 2025, 12:16 AM IST
40 | Kannada Prabha

ಸಾರಾಂಶ

ಸರಗೂರು ತಾಲೂಕು ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ ನೇತೃತ್ವದಲ್ಲಿ ವ್ಯವಸ್ಥೆ ಗಳು ಭರದಿಂದ ಸಾಗಿದ್ದು, ಸಮ್ಮೇಳನ ಎಲ್ಲ ರೀತಿಯಲ್ಲಿ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಅವರು ಹೆಚ್ಚು ಆಸಕ್ತಿ ಯಿಂದ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಸರಗೂರು

ಸರಗೂರು ನೂತನ ತಾಲೂಕು ಕೇಂದ್ರವಾಗಿ ರೂಪುಗೊಂಡ ನಂತರ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.17ರಂದು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಡಾ.ವೈ.ಡಿ. ರಾಜಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ತಾಲೂಕು ಕಸಾಪ ಅಧ್ಯಕ್ಷ ಕೆಂಡಗಣ್ಣಸ್ವಾಮಿ ನೇತೃತ್ವದಲ್ಲಿ ವ್ಯವಸ್ಥೆ ಗಳು ಭರದಿಂದ ಸಾಗಿದ್ದು, ಸಮ್ಮೇಳನ ಎಲ್ಲ ರೀತಿಯಲ್ಲಿ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಜರುಗಲಿದ್ದು, ಶಾಸಕ ಅನಿಲ್ ಚಿಕ್ಕಮಾದು ಅವರು ಹೆಚ್ಚು ಆಸಕ್ತಿ ಯಿಂದ ಸಮ್ಮೇಳನದ ಯಶಸ್ಸಿಗೆ ಸಹಕಾರ ನೀಡುತ್ತಿದ್ದಾರೆ. ಸರಗೂರು ತಾಲೂಕಿನ ಸಮಸ್ತರು ಈ ಕನ್ನಡದ ಹಬ್ಬದಲ್ಲಿ ಭಾಗಿಯಾಗುವ ಹಾಗೆ ಶ್ರಮಿಸಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಿಳಿಸಿದ್ದಾರೆ.

ಸಮ್ಮೇಳಾಧ್ಯಕ್ಷ ಡಾ. ವೈ.ಡಿ. ಪರಿಚಯ ಪರಿಚಯ:

ಡಾ.ವೈ.ಡಿ. ರಾಜಣ್ಣ ಪ್ರಸ್ತುತ ತಾಲೂಕು ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರವೃತ್ತಿಯಲ್ಲಿ ಸೃಜನಶೀಲ ಕವಿಯಾಗಿ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ.

ಚಿತ್ತ ಚಿತ್ತಾರ.., ಮತ ಅಭಿಮತ, ಇವರ ಜನಪ್ರಿಯ ಕವನ ಸಂಕಲನಗಳು. ಬಣ್ಣದ ಲೋಕ.., ಅಮೃತ ಕಾವಲು ಕೃತಿಗಳು ಸೇರಿದಂತೆ ಹಲವು ಕೃತಿಗಳ ಲೇಖಕಕಾರರಾಗಿ ಸಂಪಾದಕರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡದ ಕಾರ್ಯಕ್ರಮಗಳ ಸಂಘಟನಾ ಚತುರತೆ ಇವರದ್ದಾಗಿದೆ. ಪಿರಿಯಾಪಟ್ಟಣ ತಾಲೂಕು ಕಸಾಪ ಕಾರ್ಯದರ್ಶಿ, ಅಧ್ಯಕ್ಷರಾಗಿ ಮೈಸೂರು ಜಿಲ್ಲೆಯ ಕಸಾಪ ಕಾರ್ಯದರ್ಶಿ 2016 ರಿಂದ 2021 ರವರೆಗೆ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿ ಹತ್ತಾರು ತಾಲೂಕು ಸಾಹಿತ್ಯ ಸಮ್ಮೇಳನಗಳು, ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ 2017ರಲ್ಲಿ ಮೈಸೂರಿನಲ್ಲಿ ಐತಿಹಾಸಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿ, ರಾಜ್ಯದ ಸಾಹಿತ್ಯ ಕ್ಷೇತ್ರದ ಶ್ಲಾಘನೆಗೆ ಪಾತ್ರರಾಗಿರುವ ಹೆಮ್ಮೆ, ಹೆಗ್ಗಳಿಕೆ ಡಾ.ವೈ.ಡಿ. ರಾಜಣ್ಣ ಅವರದು.

ಜಿಲ್ಲಾ ಕಸಾಪ ಅಧ್ಯಕ್ಷತೆಯ ಅವಧಿಯಲ್ಲಿ 715 ಕ್ಕೂ ಹೆಚ್ಚು ಕನ್ನಡ ಕಾರ್ಯಕ್ರಮ ಆಯೋಜಿಸಿರುವ ದಾಖಲೆಯ ನೆಲೆ- ಹಿನ್ನೆಲೆ ಇವರಿಗಿದೆ. ಸ್ವತಃ ಕವಿಯಾಗಿ ವಿಶ್ವ ವಿಖ್ಯಾತ ದಸರಾ ಕವಿ ಗೋಷ್ಠಿ ಹಾಗೂ ನಾಡಿನ ಇತರೆಡೆ ತಮ್ಮ ಕವಿತೆ ವಾಚನ ಮಾಡಿದ್ದಾರೆ.

ರಾಜಕಾರಣದ ವಸ್ತು ಒಳಗೊಂಡು 150ಕ್ಕೂ ಹೆಚ್ಚು ಕವಿತೆಗಳ ಮೂಲಕ ಕನ್ನಡ ನಾಡಿನ ರಾಜಕಾರಣದ ಹಿಂದಿನ ಪರಂಪರೆ. ವರ್ತಮಾನ ಕುರಿತ ಒಳನೋಟಗಳನ್ನು ನೀಡಿರುವ ಮತ ಅಭಿಮತ ಕವನ ಸಂಕಲನ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರಿಂದ ಲೋಕಾರ್ಪಣೆಗೊಂಡು ಹೆಚ್ಚು ಚರ್ಚೆಗೆ ಒಳಗಾಗಿ ವಿಮರ್ಶಕರ ಮೆಚ್ಚುಗೆ ಗಳಿಸಿದೆ.

ಹತ್ತಾರು ಕವಿಗೋಷ್ಟಿ, ವಿಚಾರ ಗೋಷ್ಟಿ, ನೂರಾರು ಪುಸ್ತಕ ಬಿಡುಗಡೆ, ಗಮಕ ಸಿನಿಮಾ, ರಂಗಭೂಮಿ, ವಿಜ್ಞಾನ ತಂತ್ರಜ್ಞಾನದಲ್ಲೂ ಕನ್ನಡದ ಇತ್ತೀಚಿನ ಬೆಳವಣಿಗೆವರೆಗೂ ಕಾರ್ಯಕ್ರಮ ಸಂಘಟಿಸಿದ ಶ್ರಮ ಕಾಳಜಿ ಇವರದು. ಜಿಲ್ಲೆಯ ಹಿರಿಯ ಸಾಹಿತಿಗಳು ವಿದ್ವಾಂಸರು ಕನ್ನಡ ಹೋರಾಟಗಾರರು ಇವರಿಗೆ ವಿರಾಜಮಾನ ಎಂಬ ಅಭಿನಂದನಾ ಗ್ರಂಥವನ್ನು ನಾಡಿನ ಹಿರಿಯ ಸಾಹಿತಿ ಸಿಪಿಕೆ ಅವರ ಗೌರವ ಸಂಪಾದಕತ್ವದಲ್ಲಿ ಸಮರ್ಪಿಸಿದ್ದಾರೆ. ಆ ಮೂಲಕ ಮೈಸೂರು ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ