3, 4ರಂದು ಮರಾಠ ಟ್ರೋಫಿ- ಕ್ರಿಕೆಟ್‌, ತ್ರೋಬಾಲ್‌ ಪಂದ್ಯ

KannadaprabhaNewsNetwork |  
Published : Feb 02, 2024, 01:01 AM IST
111 | Kannada Prabha

ಸಾರಾಂಶ

ಶಿವಾಜಿ ಜಯಂತಿ ಪ್ರಯುಕ್ತ ಮರಾಠ ಟ್ರೋಫಿ 2023 ಪುರುಷರ ಕ್ರಿಕೆಟ್‌ ಮತ್ತು ಮಹಿಳೆಯರ ತ್ರೋಬಾಲ್‌ ಪಂದ್ಯಾವಳಿ ಫೆ.3 ಮತ್ತು 4 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂಬಾ ಭವಾನಿ ಗೇಮ್ಸ್‌ ಟೀಮ್‌ ಬಜಾಲ್‌ ಜಲ್ಲಿಗುಡ್ಡೆ ವತಿಯಿಂದ ಶಿವಾಜಿ ಜಯಂತಿ ಪ್ರಯುಕ್ತ ಮರಾಠ ಟ್ರೋಫಿ 2023 ಪುರುಷರ ಕ್ರಿಕೆಟ್‌ ಮತ್ತು ಮಹಿಳೆಯರ ತ್ರೋಬಾಲ್‌ ಪಂದ್ಯಾವಳಿ ಫೆ.3 ಮತ್ತು 4 ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಪುರುಷರ ಕ್ರಿಕೆಟ್‌ ಪಂದ್ಯಾಟವು ಐಪಿಎಲ್‌ ಮಾದರಿಯಲ್ಲಿ ನಡೆಯಲಿದೆ. ಮಂಗಳೂರು, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳ ವಿವಿಧ ತಂಡಗಳ ಮಾಲೀಕತ್ವದಲ್ಲಿ 8 ತಂಡಗಳು ಭಾಗವಹಿಸಲಿವೆ. ಏಳು ಓವರ್‌ ಮ್ಯಾಚ್‌ ಆಗಲಿದ್ದು, ಕ್ರಿಕೆಟ್‌ ಪಂದ್ಯಾಟದಲ್ಲಿ ಚಾಂಪಿಯನ್‌ ತಂಡಕ್ಕೆ ಪ್ರಥಮ ಬಹುಮಾನ 1 ಲಕ್ಷ ರು. ನಗದು ಮತ್ತು ಟ್ರೋಫಿ, ರನ್ನರ್‌ಅಪ್‌ ತಂಡಕ್ಕೆ 50,000 ರು. ನಗದು, ಟ್ರೋಫಿ ಸಹಿತ ಇನ್ನಿತರ ಹಲವಾರು ಪ್ರಶಸ್ತಿಗಳು ಇರಲಿದೆ. ಮಹಿಳಾ ತ್ರೋಬಾಲ್‌ ಚಾಂಪಿಯನ್‌ ತಂಡಕ್ಕೆ 10,000 ರು. ನಗದು, ಟ್ರೋಫಿ, ದ್ವಿತೀಯ 5,000 ರು. ನಗದು, ಟ್ರೋಫಿ ಸಹಿತ ಇನ್ನಿತರ ಪ್ರಶಸ್ತಿಗಳು ಇರಲಿದೆ ಎಂದು ಅಂಬಾ ಭವಾನಿ ಗೇಮ್ಸ್‌ ಟೀಮ್‌ ಅಧ್ಯಕ್ಷ ಸುಧಾಕರ ರಾವ್‌ ಪಾಟೀಲ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.3 ರಂದು ಬೆಳಗ್ಗೆ 9 ಗಂಟೆಗೆ ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಉದ್ಘಾಟಿಸಲಿದ್ದು, ಗೌರವಾಧ್ಯಕ್ಷ ಹರಿಕೇಶವ್‌ ಜಿ. ಜಾಧವ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ವಾಮನ ಮುಳ್ಳಂಗೋಡು, ವಿಜಯ ಕುಮಾರ್‌ ಶೆಟ್ಟಿ, ಅಶ್ವಿತ್‌ ಕೊಟ್ಟಾರಿ, ಸುರೇಶ್‌ ಕೆ. ರಾವ್‌ ಲಾಡ್‌, ಪ್ರಸಾದ್‌ ಶೆಟ್ಟಿಶಿಶಿಪಾಲ್‌ ರಾವ್‌ ಬೋಂಸ್ಲೆ ಸಹಿತ ಗಣ್ಯರು ಭಾಗವಹಿಸುವರು. ಸಮಾರೋಪ ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್‌ ಬಹುಮಾನ ವಿತರಿಸಲಿದ್ದಾರೆ. ಅಧ್ಯಕ್ಷ ಸುಧಾಕರ ರಾವ್‌ ಪಾಟೀಲ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ನಳಿನ್‌ ಕುಮಾರ್‌ ಕಟೀಲು, ಪ್ರಮುಖರಾದ ರವೀಂದ್ರ ನಿಕ್ಕಂ, ಪ್ರಕಾಶ್‌ ಕುಂಪಲ, ದೇವಿಪ್ರಸಾದ್‌ ಶೆಟ್ಟಿ, ರಾಜೇಶ್‌ ಜಿ., ಚಿರಾಗ್‌ ರಾವ್‌, ದೇವಿಪ್ರಸಾದ್‌ ರಾವ್‌ ಲಾಡ್‌ ಸಹಿತ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ದೇವಿಪ್ರಸಾದ್‌ ಲಾಡ್‌, ಜೀವನ್‌ ಜಗತಾಪ್‌, ಗಣೇಶ್‌ ಪವಾರ್‌, ಗೋಕುಲ್‌ ಲಾಡ್‌, ಹೃತಿಕ್‌, ಅನುರಾಗ್‌ ಲಾಡ್‌, ನಿಕಲ್‌ ಲಾಡ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ