ಕನ್ನಡಪ್ರಭ ವಾರ್ತೆ ವಿಜಯಪುರ
ನಾನು ಒಂದು ದಿನ ಸಿಎಂ ಆಗುತ್ತೇನೆ. ಅಸೆ ಇದೆ, ದುರಾಸೆ ಇಲ್ಲ. ನೀರಾವರಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಸಿಎಂ ಆದರೆ ವಿಜಯಪುರ ಜಿಲ್ಲೆಯ ಜನರಿಗೆ, ರಾಜ್ಯದ ಜನರಿಗೆ ಖುಷಿಯಾಗುತ್ತದೆ. ಒಳ್ಳೆಯ ಕೆಲಸ ಮಾಡುವೆ. ಈಗ ಸಿಎಂ ಸ್ಥಾನದ ಮೇಲೆ ಕೈ ಹಾಕಲ್ಲ. ಸ್ವಯಂ ಘೋಷಿತವಾಗಿ ಸಿಎಂ ಆಗಲು ಬರಲ್ಲ. ಸಿಎಂ ಮಾಡುವ ತೀರ್ಮಾನ ಪಕ್ಷದ ಹೈಕಮಾಂಡ್ ಹಾಗೂ ಶಾಸಕರು ತೀರ್ಮಾನ ಮಾಡುತ್ತಾರೆ. ಯಾರನ್ನು ತೆಗೆದು ಹಾಕೋ ಕೆಲಸಕ್ಕೆ ನಾನು ಕೈ ಹಾಕಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಸಿಎಂ ಕುರ್ಚಿ ಖಾಲಿಯಾಗುತ್ತದೆ ಎಂಬ ವಿಚಾರಕ್ಕೆ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿಯೇ ಮುಂದುವರೆಯುತ್ತಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಕುರಿತು ಯಾವುದೇ ಹುರಳಿಲ್ಲ. ಸಿದ್ದರಾಮಯ್ಯನವರಿಗೆ ಹಾಗಾಗುತ್ತೆ ಹೀಗಾಗುತ್ತೆ ಎಂದು ಯಾರಾದ್ರು ತಿಳಿದುಕೊಂಡಿದ್ದರೆ ಏನು ಆಗಲ್ಲ. ನ್ಯಾಯಾಲಯದಲ್ಲಿಯೂ ಸಿದ್ದರಾಮಯ್ಯ ಪರವಾಗಿಯೇ ತೀರ್ಪು ಬರುತ್ತದೆ. ಬಿಜೆಪಿಯವರು ಪಶ್ಚಾತಾಪ ಪಡುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ನಾವೆಲ್ಲ ಸಿದ್ದರಾಮಯ್ಯರ ಜೊತೆಗಿದ್ದೇವೆ, ಈ ಕುರಿತು ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಿದ್ದಾಗಿ ತಿಳಿಸಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ, ರಾಹುಲ್ ಗಾಂಧಿಯವರು, ಸಚಿವರು, ಶಾಸಕರು, ಕಾರ್ಯಕರ್ತರು, ಪದಾಧಿಕಾರಿಗಳು ಎಲ್ಲರೂ ಅವರ ಪರವಾಗಿದ್ದೇವೆ ಎಂದರು.ಸತೀಶಗೆ ಲಕ್ಷ್ಮಣ ಸವದಿ ಬೆಂಬಲ ವಿಚಾರ
ಸತೀಶ ಜಾರಕಿಹೋಳಿ ಇರಲಿ, ಎಂ.ಬಿ.ಪಾಟೀಲ್ ಇರಲಿ, ಯಾರೇ ಇರಲಿ ಸಿಎಂ ಕುರ್ಚಿ ಖಾಲಿ ಇಲ್ಲ.ಸಿಎಂ ಆಗಲು ಕಾಂಗ್ರೆಸ್ನಲ್ಲಿ ಎಂ.ಬಿ.ಪಾಟೀಲಗಿಂತ ಬಹಳ ಜನ ಹಿರಿಯರಿದ್ದಾರೆ ಎಂಬ ಶಿವಾನಂದ ಪಾಟೀಲ್ ಹೇಳಿಕೆ ವಿಚಾರ. ಸಿದ್ದರಾಮಯ್ಯ ಅವರದ್ದು ಸ್ಪೆಷಲ್ ಕೇಸ್, ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ತಪ್ಪು. ಕಟ್ಟ ಕಡೆಯ ಬಾರಿ ಹೇಳುತ್ತಿದ್ದೇನೆ 2004 ರಲ್ಲಿ ನನಗಾಗಿ ಶಿವಾನಂದ ಪಾಟೀಲ್ ತ್ಯಾಗ ಮಾಡಿದರು ಎಂದು ಅವರ ಸಹೋದರ ವಿಜುಗೌಡ ಪಾಟೀಲ್ ಹೇಳುತ್ತಾನೆ. ವಿಜುಗೌಡ ಪಾಟೀಲ್ ಎಂ.ಬಿ.ಪಾಟೀಲ್ ವಿರುದ್ದ ಸ್ಪರ್ಧಿಸಿ ನಾಲ್ಕು ಬಾರಿ ಸೋತ ಅಭ್ಯರ್ಥಿ. ಎರಡು ಬಾರಿ ಜೆಡಿಎಸ್ನಿಂದ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ವಿಜುಗೌಡ ಪಾಟೀಲ್ ಎಂದರು. ಇದೆಲ್ಲ ಸತ್ಯವೋ ಸುಳ್ಳೋ ಎಂದು ಸೋರಗಾಂವ್ ಅವರನ್ನ ಕೇಳಿ?. ಸುಮ್ಮನೇ ಕ್ಷೇತ್ರ ಬಿಟ್ಟು ಕೊಡಲಾಗಿದೆ ಎಂಬುದಕ್ಕೆ ಇತಿಶ್ರೀ ಹಾಡಬೇಕಿದೆ ಎಂದರು.ಸದ್ಯ ನಾವು ಒಗ್ಗಟ್ಟಾಗಿರಬೇಕಿದ್ದು, ಸಿದ್ದರಾಮಯ್ಯರನ್ನು ಬೆಂಬಲಿಸಬೇಕಿದೆ. ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕಿದೆ. ಸಿದ್ದರಾಮಯ್ಯ ಬಹಳ ಬಲಿಷ್ಟರಾಗಿದ್ದಾರೆ ಎಂದರು.ಕೋಟ್ನಾನು ಡಿಕೆಶಿ ಸೀನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸೀನಿಯರ್. ಪರಮೇಶ್ವರ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ. ನಮಗಿಂತ ಸೀನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಸಿಎಂ ಮಾಡುವ ವೇಳೆ ಸೀನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ. ಶರದ್ ಪವಾರ ಉದಾಹರಣೆ ಇದೆ. ನಮ್ಮಲ್ಲೇ ಗುಂಡೂರಾವ್, ದೇವರಾಜ ಅರಸ್ ಇದ್ದಾರೆ. ಬೇರೆ ಪಕ್ಷಗಳ ನೂರಾರು ಜನ 28 ವರ್ಷಕ್ಕೆ ಸಿಎಂ ಆಗಿದ್ದಾರೆ.ಎಂ.ಬಿ.ಪಾಟೀಲ, ಉಸ್ತುವಾರಿ ಸಚಿವ