ನರಗುಂದ: ಸಮಾಜದಲ್ಲಿ ಮನುಷ್ಯನಲ್ಲಿ ನಯ, ವಿನಯ ಇದ್ದರೆ ಮಾತ್ರ ಅದು ದಯವೇ ಧರ್ಮದ ಮೂಲವಾಗುತ್ತದೆ. ಆದ್ದರಿಂದ ಮನುಷ್ಯ ಜೀವಿ ನಯ ವಿನಯದಿಂದ ವರ್ತಿಸಬೇಕು ಎಂದು ಪದ್ಮಭೂಷಣ ಡಾ. ಪುಟ್ಟರಾಜ ಕವಿ ಕವಾಯಿಗಳವರ ಶಿಷ್ಯರಾದ ಶರಣ ಶ್ರೀ ಶಶಿಧರ ಶಾಸ್ತ್ರೀಗಳು ಹಿರೇಮಠ ಹೇಳಿದರು.
ಮೇಲಾಗಿ ನಿಮ್ಮ ಗೊಡ್ಡು ಸಂಪ್ರದಾಯಗಳು ನನಗಷ್ಟೆ ಏಕೆ ಸೀಮಿತಿಗೊಳಿಸಿದ್ದೀರಿ? ಅಕ್ಕ ನಾಗಲಾಂಬಿಕೆಗೆ ಏಕೆ ಉಪನಯನ ಮಾಡುತ್ತಿಲ್ಲ ಎಂದಾಗ, ಉಪನಯನವಾದ ನಂತರ ಮುಟ್ಟು ಚಟ್ಟುಗಳನ್ನು ಖಡ್ಡಾಯವಾಗಿ ಪಾಲಿಸಬೇಕು, ಹೆಣ್ಣು ಮಕ್ಕಳು ಋತುಸ್ರಾವ ಕ್ರಿಯಗೆ ಒಳಗಾಗುವುದರಿಂದ ಮುಟ್ಟಿನಿಂದ ಪಾವಿತ್ರ್ಯತೆ ಹಾಳಾಗುವುದರಿಂದ ಗಂಡು ಮಕ್ಕಳಿಗೆ ಮಾತ್ರ ಉಪನಯನ ಕಾರ್ಯ ಮಾಡಲಾಗುವುದು ಎಂದು ತಿಳಿದ ತಕ್ಷಣ, ಲಿಂಗಾಸಮಾನತೆ ಇಲ್ಲದ ಈ ಸಮಾಜದಲ್ಲಿ ಹೆಣ್ಣು ಕೀಳು - ಗಂಡು ಮೇಲು ಎಂದಾದರೆ ಧಿಕ್ಕಾರವಿರಲಿ ನಿಮ್ಮ ಸಂಪ್ರದಾಯಕ್ಕೆ ಎಂದು, ಮನೆ ತ್ಯಜಿಸಿ ಹೊರಟ ಬಸವಣ್ಣವರು ಮುಂದೆ ಲಿಂಗಸಮಾನತೆ ದಯಾಪರನಾಗಿ ಬೆಳೆದು ನಿಂತರು. ಸಮಾಜದಲ್ಲಿ ಸಮಾನತೆಗಾಗಿ ಜೀವನ ಪೂರ್ತಿ ಬಸವಣ್ಣವರು ಹೋರಾಟ ನಡೆಸಿದರು ಎಂದರು.
ಶಾಂತಲಿಂಗ ಶ್ರೀಗಳು, ಕಾರ್ಯಕ್ರಮದ ಉಪಾಧ್ಯಕ್ಷ ಪ್ರಕಾಶಗೌಡ ನಾಗನಗೌಡ, ವೀರಯ್ಯ ದೊಡ್ಡಮನಿ, ಗುರುಬಸಯ್ಯ ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ಆರ್.ಐ. ನದಾಫ್, ಲಾಲಸಾಬ ಅರಗಂಜಿ, ನಾಗನಗೌಡ ತಿಮ್ಮನಗೌಡ್ರ, ಹನುಮಂತ ಕಾಡಪ್ಪನವರ, ಪ್ರಾಚಾರ್ಯರಾದ ಬಿ.ಆರ್. ಸಾಲಿಮಠ ಇದ್ದರು.