ಹಿಪ್ಪರಗಿ ಜಲಾಶಯದಲ್ಲಿ ೩ ಟಿಎಂಸಿ ನೀರಷ್ಟೇ ಲಭ್ಯ

KannadaprabhaNewsNetwork |  
Published : Feb 29, 2024, 02:04 AM ISTUpdated : Feb 29, 2024, 02:05 AM IST
ಹಿಪ್ಪರಗಿ ಜಲಾಶಯ : ೩ ಟಿಎಂಸಿ ನೀರು ಮಾತ್ರ ಲಭ್ಯ! | Kannada Prabha

ಸಾರಾಂಶ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೆ ಸಂಜೀವಿನಿಯಾಗಿರುವ ತಾಲೂಕಿನ ಹಿಪ್ಪರಗಿ ಜಲಾಶಯದ ಒಡಲು ಬರಿದಾಗುತ್ತಿದ್ದು, ಫೆಬ್ರುವರಿ ತಿಂಗಳ ಕೊನೆಯಲ್ಲಿ ನದಿ ನೀರಿನಮಟ್ಟದ ತೀವ್ರ ಕುಸಿತವಾಗಿದ್ದರಿಂದ ಬೇಸಿಗೆ ನಿಭಾಯಿಸುವುದು ಸವಾಲಾಗಿ ಪರಿಣಮಸಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಬಹುತೇಕ ಗ್ರಾಮಗಳಿಗೆ ಸಂಜೀವಿನಿಯಾಗಿರುವ ತಾಲೂಕಿನ ಹಿಪ್ಪರಗಿ ಜಲಾಶಯದ ಒಡಲು ಬರಿದಾಗುತ್ತಿದ್ದು, ಫೆಬ್ರುವರಿ ತಿಂಗಳ ಕೊನೆಯಲ್ಲಿ ನದಿ ನೀರಿನಮಟ್ಟದ ತೀವ್ರ ಕುಸಿತವಾಗಿದ್ದರಿಂದ ಬೇಸಿಗೆ ನಿಭಾಯಿಸುವುದು ಸವಾಲಾಗಿ ಪರಿಣಮಸಿದೆ.

ಗರಿಷ್ಠ ೬ ಟಿಎಂಸಿಯಷ್ಟು ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಈಗ ಕೇವಲ ೩ ಟಿಎಂಸಿಯಷ್ಟು ಮಾತ್ರ ನೀರು ಸಂಗ್ರಹವಿದೆ. ಅಧಿಕಾರಿಗಳ ಪ್ರಕಾರ ಪ್ರತಿ ತಿಂಗಳಿಗೆ ೧ ಟಿಎಂಸಿಯಷ್ಟು ನೀರು ಹಿಪ್ಪರಗಿ ಜಲಾಶಯದಿಂದ ಬಳಕೆಯಾಗುತ್ತಿದೆ. ಈಗ ೩ ಟಿಎಂಸಿ ಮೇ ತಿಂಗಳವರೆಗೂ ನಿರ್ವಹಣೆಯಾಗುವುದೇ ಸವಾಲಿನ ಸಮಸ್ಯೆಯಾಗಿದ್ದು, ಶೀಘ್ರವೇ ಮಹಾರಾಷ್ಟ್ರದಿಂದ ಕನಿಷ್ಠ ೨ ಟಿಎಂಸಿಯಷ್ಟು ನೀರನ್ನು ಬಿಡುಗಡೆಗೊಳಿಸಿದ್ದಲ್ಲಿ ಬೇಸಿಗೆಯ ನಾಲ್ಕು ತಿಂಗಳು ನಿಭಾಯಿಸಲು ಸಾಧ್ಯವೆಂಬುದು ತಾಂತ್ರಿಕ ವಿಭಾಗದ ಲೆಕ್ಕಾಚಾರ.

ಬೆಳೆಗೆ ನೀರು ಬಳಕೆಗೆ ಕಡಿವಾಣವಿಲ್ಲ: ರಬಕವಿ-ಬನಹಟ್ಟಿ ನಗರ, ತೇರದಾಳ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ನಿಟ್ಟಿನಲ್ಲಿ ನದಿ ತಟದಲ್ಲಿರುವ ಭೂಮಿಗಳಿಗೆ ರೈತರು ಹರಿಸುತ್ತಿರುವ ನೀರು ಪೂರೈಕೆಗೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆಯಿದೆ. ಇದರಿಂದಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ನೀರು ಪೂರೈಕೆಯಾಗದಿದ್ದಲ್ಲಿ ಬೆಳೆ ನಾಶವಾಗುವ ಭೀತಿಯೂ ಇದೆ. ಇದರಿಂದ ಭಾಗ್ಯಗಳ ಭರಾಟೆಯಲ್ಲಿರುವ ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಂಡು ನೀರಿನ ವ್ಯವಸ್ಥೆ ಮಾಡಲಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ