ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಈಗಿನ ಕಾಂಗ್ರೆಸ್ ನಾಯಕರು ಕೇವಲ ಮುಖವಾಡ ಧರಿಸಿಕೊಂಡು ಅಂಬೇಡ್ಕರ್ ನಮ್ಮನವರು ಎನ್ನುತ್ತಿದ್ದು, ನಿಜವಾದ ಕಾಳಜಿಯಿಲ್ಲ. ಬಿಜೆಪಿ ಮಾತ್ರ ಅವರ ಆದರ್ಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಹೀಗಾಗಿ, ಮುಂದೆ ಪ್ರತಿವಾರ್ಡ್, ಮಂಡಲ, ಬೂತ್ ಮಟ್ಟದಲ್ಲಿ ಅವರ ವಿಚಾರಧಾರೆ ಪ್ರಸ್ತಾಪಿಸುವ ಕಾರ್ಯ ಮಾಡಬೇಕು ಎಂದರು.
ಭಾರತದ ಸ್ವಾತಂತ್ರ್ಯಕ್ಕೆ ಗಾಂಧೀಜಿ ಕಾರಣವಾದರೂ, ನಿಜವಾದ ರಾಷ್ಟ್ರಪಿತ ಡಾ.ಬಿ.ಆರ್.ಅಂಬೇಡ್ಕರ್. ಸರ್ವರನ್ನು ಒಂದೇ ದೋಣಿಯಲ್ಲಿ ಕೊಂಡೊಯ್ಯುವ ಮಹತ್ತರ ಕನಸು, ಆಧುನಿಕ ಭಾರತದಲ್ಲಿ ಈಡೇರುತ್ತಿದೆ ಎಂದು ತಿಳಿಸಿದರು.ಜೆಪಿ ರಾಜ್ಯ ಪ್ರಕೋಷ್ಟಗಳ ಕಾರ್ಯಕಾರಿ ಸಮಿತಿ ಸದಸ್ಯ ಸಿ.ಆರ್.ಪ್ರೇಮ್ಕುಮಾರ್ ಮಾತನಾಡಿ, ಅಂಬೇಡ್ಕರ್ ವಿಚಾರ ಧಾರೆ ಒಂದು ಪವಿತ್ರವಾದ ಬೆಳಕು. ಇದನ್ನು ಆರಿಸಿದೇ ಸದಾಕಾಲ ಉರಿಯುವಂತೆ ಮಾಡುವುದು ಭಾಜಪ ಕಾರ್ಯ ಕರ್ತರ ಮೂಲ ಧ್ಯೇಯ. ಸಮಾನತೆ, ಭಾತೃತ್ವ, ಸಹ ಬಾಳ್ವೆ ಎಂಬ ಹಾದಿಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಅಂಬೇಡ್ಕರ್ ರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡು ಚುನಾವಣೆಯಲ್ಲಿ ಸೋಲಿಸಲು ಆಪ್ತ ಸಹಾಯಕರನ್ನೇ ಎದುರಾಳಿಯಾಗಿಸಿ ಕುತಂತ್ರ ನಡೆಸಲಾಗಿತ್ತು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಜಯ ಸದಾನಂದ್ ಮಾತನಾಡಿ, ಅಂಬೇಡ್ಕರ್ ವಿಚಾರಧಾರೆ ಸಾಗರದಷ್ಟು ಆಳ ಹಾಗೂ ಆಕಾಶದಷ್ಟು ವಿಸ್ತೀರ್ಣ. ಅವರ ಜೀವನ ಚರಿತ್ರೆಗಳು ಮನುಷ್ಯನ ಬಾಳಿಗೆ ಮೌಲ್ಯ ಯುತ ಬದುಕು ರೂಪಿಸಲಿದೆ. ಕೇಂದ್ರ ಸರ್ಕಾರ ಅಂಬೇಡ್ಕರ್ ಅವರ ಪಂಚಧಾಮಗಳ ಅಭಿವೃ ದ್ದಿಗೊಳಿಸಿ ಸಮಾಜಕ್ಕೆ ಅರ್ಪಿಸಿದೆ ಎಂದರು.