ಕನ್ನಡಪ್ರಭ ವಾರ್ತೆ ಲೋಕಾಪುರ
ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವೂದೂ ಕೊನೆಯವರೆಗೂ ಉಳಿಯಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಬಿ. ಕೃಷ್ಣಗೌಡರ ಹೇಳಿದರು.ಪಟ್ಟಣದ ಆರ್.ಬಿ.ಜಿ. ಹೈಸ್ಕೂಲ್ ಶಾಲೆ ಆವರಣದಲ್ಲಿ ೧೯೯೭-೯೮ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ೧೯೯೯-೨೦೦೦ನೇ ಸಾಲಿ ಪಿಯುಸಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಆಯೋಜಿಸಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ, ನಾವು ಇಂದು ಏನಾದರು ಗಳಿಸಿದ್ದರೆ ಅದೆಲ್ಲವೂ ಈ ಸಮಾಜದಿಂದ ಗಳಿಸಿದ್ದೆ. ಹಾಗಾಗಿ ಈ ಸಮಾಜದಿಂದ ಪಡೆದ ಒಂದಿಷ್ಟಾದರೂ ನಾವು ಮತ್ತೆ ಸಮಾಜಕ್ಕೆ ವಾಪಸ್ ಮಾಡಬೇಕಾಗುತ್ತದೆ. ಆ ಮೂಲಕ ಅಕ್ಷರ ಕಲಿಸಿದ ಗುರುಗಳು, ಜನ್ಮ ಕೊಟ್ಟ ಹೆತ್ತವರು, ಆಡಿ ಬೆಳೆದ ಭೂಮಿಯ ಋಣ ತೀರಿಸಲು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ವಿ.ಜಿ. ಸಿಗರೆಡ್ಡಿ, ಡಿ.ಎಂ. ತುಬಾಕಿ, ಎಸ್.ಎಂ. ನೀಲಿ, ವಿ.ಬಿ. ಮಾಳಿ, ಎಸ್.ಎಸ್. ಜೈನಾಪೂರ ಅಂದಿನ ಶಾಲಾ ದಿನಗಳ ಹಾಗೂ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.ವಿವಿಧ ಕಡೆಗಳಿಂದ ಆಗಮಿಸಿದ್ದ ಹಿರಿಯ ವಿದ್ಯಾರ್ಥಿಗಳು ತಮಗೆ ಪಾಠ ಕಲಿಸಿದ ಗುರುಗಳನ್ನು ಗೌರವಿಸುವ ಮೂಲಕ ಧನ್ಯತೆ ಮರೆದು ಇತರರಿಗೆ ಮಾದರಿಯಾದರು. ಅಪರೂಪಕ್ಕೆ ಸಮ್ಮಿಲನಗೊಂಡ ಸಹಪಾಠಿಗಳೊಂದಿಗೆ ಶಾಲಾ ದಿನಗಳ ನೆನಪು ಮೆಲುಕು ಹಾಕಿ ಸಂತಸಪಟ್ಟರು. ಗುರುವಂದನಾ ಕಾರ್ಯಕ್ರಮದಲ್ಲಿ ಗುರುಗಳಿಗೆ ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡು. ಎಲ್ಲ ಗುರುಗಳಿಗೆ ಸನ್ಮಾನಿಸಿ, ಸ್ಮರಣೆ ಸಂಚಿಕೆ ನೀಡಿ ಗೌರವಾರ್ಪಣೆ ಮಾಡಿದರು.
ಈ ವೇಳೆ ಶಿಕ್ಷಕರಾದ ಜಿ.ಆರ್. ನಾವಲಗಿ, ವಿ.ಆರ್. ಬೋಳಿಶೆಟ್ಟಿ, ಜಿ.ಎಸ್. ಕೊಣ್ಣೂರ, ಎಸ್.ಆರ್. ಹುಂಡೇಕರ, ವಿ.ಆರ್. ಬಿರಾದಾರ ಪಾಟೀಲ, ಸಿ.ವಿ. ಬನ್ನಿ, ಎಂ.ವೈ. ಮಬ್ರುಮಕರ, ಎಲ್.ಕೆ. ತಿರಕನ್ನವರ, ಸಿ.ಎಸ್. ಕಳ್ಳಿ, ಆರ್.ಐ. ವನಕಿ, ಎ.ಪಿ. ಗಾಣಿಗೇರ, ಸಿಬ್ಬಂದಿ ಎಂ.ವಿ. ಬಾಜಿ, ಆರ್.ಎಂ. ರಾಮನ್ನವರ, ಎಸ್.ವಿ. ನಾಯ್ಕರ, ವೈ.ಎಸ್. ಕಂಟೆಪ್ಪಗೋಳ, ಆರ್.ಎಸ್. ಮಾಚಕನೂರ, ಶೋಭಾ ಹಂಚಾಟೆ, ಗಿರಿಜಾ ಶೆಟ್ಟರ ಹಾಗೂ ಶಾಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಇದ್ದರು.