ಮುಚ್ಚಳವಿಲ್ಲದೇ ತೆರೆದಿರುವ ಯುಜಿಡಿ ಛೇಂಬರ್!

KannadaprabhaNewsNetwork |  
Published : May 23, 2024, 01:14 AM IST
ಪೊಟೋ೨೨ಸಿಪಿಟಿ೧: ನಗರದ ಕೆಎಚ್‌ಬಿ ಬಡಾವಣೆಯಲ್ಲಿ ಮುಚ್ಚಳವಿಲ್ಲದೇ ತೆರೆದಿರುವ ಯುಜಿಡಿ ಛೇಂಬರ್. | Kannada Prabha

ಸಾರಾಂಶ

ಚನ್ನಪಟ್ಟಣ: ನಗರದ 31ನೇ ವಾರ್ಡ್ ವ್ಯಾಪ್ತಿಯ ಕೆಎಚ್‌ಬಿ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿರುವ ಯುಜಿಡಿ ಛೇಂಬರ್ ಮುಚ್ಚಳವಿಲ್ಲದೇ ತೆರೆದುಕೊಂಡಿದ್ದು, ಯಾರಾದರೂ ಬಿದ್ದು, ಅನಾಹುತವಾಗುವ ಮುನ್ನ ಇದಕ್ಕೆ ಮುಚ್ಚಳ ಅಳವಡಿಸುವ ಅಗತ್ಯವಿದೆ.

ಚನ್ನಪಟ್ಟಣ: ನಗರದ 31ನೇ ವಾರ್ಡ್ ವ್ಯಾಪ್ತಿಯ ಕೆಎಚ್‌ಬಿ ಬಡಾವಣೆಯಲ್ಲಿ ರಸ್ತೆ ಬದಿಯಲ್ಲಿರುವ ಯುಜಿಡಿ ಛೇಂಬರ್ ಮುಚ್ಚಳವಿಲ್ಲದೇ ತೆರೆದುಕೊಂಡಿದ್ದು, ಯಾರಾದರೂ ಬಿದ್ದು, ಅನಾಹುತವಾಗುವ ಮುನ್ನ ಇದಕ್ಕೆ ಮುಚ್ಚಳ ಅಳವಡಿಸುವ ಅಗತ್ಯವಿದೆ.

ನಗರದ ಪ್ರಮುಖ ಬಡಾವಣೆಗಳಲ್ಲಿ ಕೆಎಚ್‌ಬಿ ಬಡಾವಣೆ ಒಂದಾಗಿದ್ದು, ಪ್ರತಿನಿತ್ಯ ಈ ಮಾರ್ಗದಲ್ಲಿ ನೂರಾರು ಜನ ಹಾಗೂ ವಾಹನಗಳು ಸಂಚರಿಸುತ್ತವೆ. ಇದಲ್ಲದೇ ಬೆಳಗ್ಗೆ ಹಾಗೂ ಸಂಜೆ ವೇಳೆ ಈ ರಸ್ತೆಯಲ್ಲಿ ಹತ್ತಾರು ಮಂದಿ ವಾಕಿಂಗ್ ಮಾಡುತ್ತಾರೆ. ಇಂತಹ ಸ್ಥಳದಲ್ಲೇ ಯುಜಿಡಿ ಛೇಂಬರ್ ಮುಚ್ಚಳವಿಲ್ಲದೇ ತೆರೆದುಕೊಂಡಿದೆ.

ಹತ್ತಿರದಲ್ಲೇ ಇರುವ ಉದ್ಯಾನವನಕ್ಕೆ ವಾಯುವಿಹಾರಕ್ಕೆ ಹಿರಿಯರು ಹಾಗೂ ಆಟವಾಡಲು ಮಕ್ಕಳು ಆಗಮಿಸುತ್ತಾರೆ. ಆಟಆಡಲು ಬರುವ ಮಕ್ಕಳು ಮುಚ್ಚಳವಿಲ್ಲದ ಛೇಂಬರ್‌ಗೆ ಬಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇದೆ. ಇದಲ್ಲದೇ ಇದೀಗ ಮಳೆಗಾಲ ಆರಂಭಗೊಂಡಿದ್ದು, ಮಳೆ ಬಂದು ರಸ್ತೆಯಲ್ಲಿ ನೀರು ನಿಂತಲ್ಲಿ ಛೇಂಬರ್ ಕಾಣದೇ ಬೈಕ್ ಸವಾರು ಹಾಗೂ ಪಾದಚಾರಿಗಳು ಛೇಂಬರ್‌ಗೆ ಬೀಳುವ ಸಂಭವವಿದೆ.

ಮುಚ್ಚಳವಿಲ್ಲದೇ ತೆರೆದಿರುವ ಛೇಂಬರ್‌ಗೆ ಯಾರಾದರೂ ಬಿದ್ದು, ಕೈಕಾಲು ಮುರಿದುಕೊಳ್ಳುವ ಮುನ್ನ ನಗರಸಭೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಛೇಂಬರ್‌ಗೆ ಮುಚ್ಚಳ (ಕ್ಯಾಪ್) ಅನ್ನು ಅಳವಡಿಸುವ ಕೆಲಸ ಮಾಡಬೇಕು ಎಂದು ಬಡಾವಣೆಯ ನಾಗರಿಕರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ