ಆಪರೇಷನ್ ನಾರ್ಕೋಸ್: ರೈಲಿನಲ್ಲಿ ಡ್ರಗ್ಸ್ ವಶ

KannadaprabhaNewsNetwork |  
Published : Jun 10, 2025, 04:57 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಉತ್ತರ ಭಾರತದಿಂದ ದಿನನಿತ್ಯ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ನೈಋತ್ಯ ರೈಲ್ವೆ ಪೊಲೀಸರು "ಆಪರೇಷನ್ ನಾರ್ಕೋಸ್ ಕಾರ್ಯಾಚರಣೆಯಡಿ ಜಪ್ತಿ ಮಾಡಿದ್ದಾರೆ.

- ಕಡೂರು ನಿಲ್ದಾಣದಲ್ಲಿ ಆರ್‌ಪಿಎಫ್ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ

- - -

- ಉತ್ತರ ಭಾರತದಿಂದ ದಿನನಿತ್ಯ ಬೆಂಗಳೂರಿಗೆ ಸಾಗಣೆ - ನೈಋತ್ಯ ರೈಲ್ವೆ ಪೊಲೀಸರಿಂದ ಕಾರ್ಯಾಚರಣೆ: ಜಪ್ತಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಉತ್ತರ ಭಾರತದಿಂದ ದಿನನಿತ್ಯ ಕರ್ನಾಟಕ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು ನೈಋತ್ಯ ರೈಲ್ವೆ ಪೊಲೀಸರು "ಆಪರೇಷನ್ ನಾರ್ಕೋಸ್ " ಕಾರ್ಯಾಚರಣೆಯಡಿ ಜಪ್ತಿ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾವಣಗೆರೆ, ಅರಸಿಕೆರೆ, ಮೈಸೂರು ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಜಾರ್ಖಂಡ್‌ನ ಟಾಟಾ ನಗರ- ಯಶವಂತಪುರ ರೈಲು ಸಂಖ್ಯೆ 18111ರಲ್ಲಿ ದಾವಣಗೆರೆ -ಕಡೂರು ಮಾರ್ಗ ಮಧ್ಯೆ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಪತ್ತೆಯಾದ ಬ್ಯಾಗ್‌ ಅನ್ನು ಅನುಮಾನಾಸ್ಪದವಾಗಿ ಪರಿಶೀಲಿಸಲಾಯಿತು.

ಈ ವೇಳೆ ಬ್ಯಾಗ್‌ನಲ್ಲಿ ಬ್ಯಾಗ್‌ನಲ್ಲಿ ಸುಮಾರು ₹1,25,000 ಮೌಲ್ಯದ 25 ಗ್ರಾಂ ಕೃತಕ ಮಾದಕ ವಸ್ತು ಎಂಡಿಎಂಎ, ₹90,000 ಮೌಲ್ಯದ 1.522 ಕೆ.ಜಿ. ಗಾಂಜಾ ಮತ್ತು ₹1,850 ಮೌಲ್ಯದ 210 ಗ್ರಾಂ ತೂಕದ 37 ಭಾಂಗ್ ಚಾಕೊಲೇಟ್‌ಗಳು ಪತ್ತೆಯಾದವು. ಈ ಮಾದಕ ವಸ್ತುಗಳ ಒಟ್ಟು ಮೌಲ್ಯ ₹2,16,850 ಎಂದು ಅಂದಾಜಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ರೈಲ್ವೆ ನಿಲ್ದಾಣದಲ್ಲಿ ನೈಋತ್ಯ ರೈಲ್ವೆ ವಿಭಾಗದ ಆರ್‌ಪಿಎಫ್ ಮುಖ್ಯ ಆಯುಕ್ತ ಆರ್‌ಎಸ್‌ಪಿ ಸಿಂಗ್ ನೇತೃತ್ವದಲ್ಲಿ ಮಧ್ಯಾಹ್ನ 1.55ಕ್ಕೆ ರೇಲ್ವೆ ಪೊಲೀಸರು ತನಿಖೆ ನಡೆಸಲಾಯಿತು. ಈ ಬ್ಯಾಗ್‌ ವಾರಸುದಾರರು ಯಾರು ಎಂಬುದು ಮಾತ್ರ ಪತ್ತೆಯಾಗಿಲ್ಲ.

ಮಾದಕ ವಸ್ತು ಜಪ್ತಿ ಕುರಿತಂತೆ ಹಿರಿಯ ವಿಭಾಗೀಯ ಸುರಕ್ಷತಾ ಆಯುಕ್ತ ಜೆ.ಆರ್. ಸ್ಯಾಮ್ ಪ್ರಶಾಂತ್ ಮಾತನಾಡಿ, ಮಾದಕ ದ್ರವ್ಯಗಳ ಸಾಗಣೆಯನ್ನು ತಡೆಗಟ್ಟಲು, ರೈಲ್ವೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಆರ್‌ಪಿಎಫ್ ಬದ್ಧವಾಗಿದೆ. ಈ ಯಶಸ್ವಿ ಕಾರ್ಯಾಚರಣೆ ನಮ್ಮ ಪೂರ್ವಭಾವಿ ಮತ್ತು ರಕ್ಷಣೆ ಕ್ರಮಗಳ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ.

- - -

(ಸಾಂದರ್ಭಿಕ ಚಿತ್ರ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ