ನೀರಾವರಿ ಭೂಮಿ ಸ್ವಾಧೀನಕ್ಕೆ ವಿರೋಧ

KannadaprabhaNewsNetwork |  
Published : Mar 22, 2025, 02:00 AM IST
ಸಿಕೆಬಿ-1 ಜಂಗಮಕೋಟೆ ಹೋಬಳಿಯಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕೆಐಎಡಿಬಿ ವಶಕ್ಕೆ ಪಡೆಯಬಾರದು ಎಂದು ರೈತ ಪರ ಹೋರಾಟ ಸಮಿತಿಯ ವತಿಯಿಂದ  ಬೃಹತ್ ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್  ಮನವಿ ಪತ್ರವನ್ನು ನೀಡಲಾಯಿತು  | Kannada Prabha

ಸಾರಾಂಶ

ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಿಕ ಮಂಡಳಿಗೆ ನೀಡಿ ಕೈಗಾರಿಕೆಗಳನ್ನು ಸ್ದಾಪನೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಭೂಮಿ ನೀಡಲು ಸಮ್ಮತಿಸಿರುವ ಶೇ.80ರಷ್ಟು ರೈತರು ವಿಧಿಸಿರುವ ಷರತ್ತುಗಳನ್ನು ಈಡೇರಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ರೈತರ ಫಲವತ್ತಾದ ನೀರಾವರಿ ಭೂಮಿಯನ್ನು ಕೆಐಎಡಿಬಿ ವಶಕ್ಕೆ ಪಡೆಯಬಾರದು ಎಂದು ರೈತ ಪರ ಹೋರಾಟ ಸಮಿತಿಯು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರನ್ನು ಬೆಂಗಳೂರಿನ ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.

ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಜಮೀನು ಭೂ ಸ್ವಾಧೀನಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಿಕ ಮಂಡಳಿಗೆ ನೀಡಿ ಕೈಗಾರಿಕೆಗಳನ್ನು ಸ್ದಾಪನೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಶೇ.80 ಭಾಗ ರೈತರ ಒಪ್ಪಿಗೆ

ಈ ಬಗ್ಗೆ ನೋಟಿಸ್ ಪಡೆದವರ ಪೈಕಿ ಶೇ. 80 ಭಾಗದ ರೈತರು ಕೆಐಎಡಿಬಿ, ಕಚೇರಿಗೆ ತೆರಳಿ ನಮ್ಮ ಜಮೀನು ನಾವು ನೀಡುತ್ತೇವೆ. ನಮಗೆ ಉತ್ತಮ ಬೆಲೆ ನೀಡಬೇಕು, ನಮ್ಮ ಮಕ್ಕಳಿಗೆ ಮನೆಗೊಂದು ಉದ್ಯೊಗ ನೀಡಬೇಕು, ಭೂ ಪರಿಹಾರ ಒಂದೇ ಕಂತಿನಲ್ಲಿ ಜಮಾ ಮಾಡಬೇಕೆಂದು ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಸಂಘದ ಮುಖಂಡ ಭಕ್ತರಹಳ್ಳಿ ಪ್ರತೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯುಗಾದಿ ಬಳಿಕ ಕ್ರಮ: ಸಚಿವ

ಈ ಸಮಸ್ಯೆಗೆ ಸ್ಪಂಧಿಸಿದ ಮಾನ್ಯ ಕೈಗಾರಿಕಾ ಇಲಾಖೆಯ ಸಚಿವ ಎಂ.ಬಿ.ಪಾಟೀಲ್ ನಾವು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ನೀಡುವುದಿಲ್ಲ. ನಿನ್ನ ಭೂಮಿ ನಿನ್ನ ಹಕ್ಕು,ನಾವು ತ್ವರಿತಗತಿಯಲ್ಲಿ ಈ ಪ್ರಾಜೆಕ್ಟನ್ನು ಪ್ರಾರಂಭ ಮಾಡುತ್ತೇವೆ. ರೈತರಿಗೆ ಉತ್ತಮ ಬೆಲೆ ನೀಡುತ್ತೇವೆ. ಯುಗಾದಿ ಹಬ್ಬ ಕಳೆದರೆ ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆಂದು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆಯ ಬಸವಪಟ್ಟಣ ಪ್ರಭು, ಆಂಜಿಪ್ಪ, ರಾಮದಾಸ್, ಯೋಗನಂದಬಾಬು, ಚೆನ್ನಪ್ಪ,ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌