ಕೊಪ್ಪಳ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆ ವಿರೋಧಿಸುತ್ತಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಹೀಗಾಗಿ ಅಧಿಕಾರ ಬದಲಾವಣೆಯ ಬಗ್ಗೆ ಮಾತನಾಡುತ್ತಾರೆ. ಇನ್ನು ಬಳ್ಳಾರಿ ಶಾಸಕರು ಗೂಂಡಾಗಳಂತೆ ವರ್ತಿಸಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಒಂದು ಸ್ಥಳಕ್ಕೆ ಹೋದಾಗ ಆ ಪ್ರದೇಶದ ಬಗ್ಗೆ ತಿಳಿದುಕೊಳ್ಳಲು ಕನಿಷ್ಠ ೬ ತಿಂಗಳು ಸಮಯ ಬೇಕಾಗುತ್ತದೆ. ಬಳ್ಳಾರಿ ವಿಷಯದಲ್ಲಿ ಕೆಲಸಕ್ಕೆ ಹಾಜರಾದ ದಿನವೇ ಎಸ್ಪಿ ವಿರುದ್ಧ ಕ್ರಮ ಕೈಗೊಂಡಿದ್ದು ಸರಿಯಲ್ಲ. ಇನ್ನು ಡಿಐಜಿ ಡಾ. ರಾಮಚಂದ್ರರಾವ್ ಮಹಿಳೆಯೊಂದಿಗಿನ ವಿಡಿಯೋ ವೈರಲ್ ಆಗಿರುವ ಕುರಿತಂತೆ ಪ್ರತಿಕ್ರಿಯಿಸಿದ ಬಿ.ಸಿ. ಪಾಟೀಲ್, ಇದು ಎಐ ತಂತ್ರಜ್ಞಾನ ಬಳಕೆ ಅಲ್ಲ ಅನಿಸುತ್ತದೆ. ಹಿರಿಯ ಅಧಿಕಾರಿ ಕಚೇರಿಯಲ್ಲಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದರು.
ಹಿರೇಕೇರೂರಿಗೆ ಗವಿಮಠ ಶ್ರೀಗಳನ್ನು ಅಹ್ವಾನಿಸಿ ಬಿ.ಸಿ. ಪಾಟೀಲ್ಕೊಪ್ಪಳ: ಕೊಪ್ಪಳ ಗವಿಮಠಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರು ಹಿರೇಕೇರೂರಿನಲ್ಲಿ ಪ್ರವಚನ ಕಾರ್ಯಕ್ರಮ ನೀಡುವಂತೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳನ್ನು ಆಹ್ವಾನಿಸಿದರು. 2027 ಜನವರಿ ತಿಂಗಳಲ್ಲಿ ಪ್ರವಚನಕ್ಕೆ ಬರುವುದಾಗಿ ಗವಿಶ್ರೀಗಳು ಹೇಳಿದ್ದಾರೆ ಎಂದು ಬಳಿಕ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ. ನಾಡಿನಲ್ಲಿ ಗವಿಶ್ರೀಗಳ ಪ್ರವಚನದಿಂದ ಅನೇಕರು ಉತ್ತಮ ಮಾರ್ಗದಲ್ಲಿ ಹೋಗಲು ಉತ್ತೇಜನ ಸಿಗುತ್ತದೆ ಎಂದರು. ಹೀಗಾಗಿ, ಶ್ರೀಗಳನ್ನು ಅಹ್ವಾನಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದಿದ್ದಾರೆ.