ವಿಜಯಪುರ: ಕೇವಲ ಕರ್ನಾಟಕದ ಚೌಕಟ್ಟಿನಲ್ಲಿ ನಡೆದ ೧೨ನೇ ಶತಮಾನದ ಶರಣಕ್ರಾಂತಿ ಇಂದು ಅನೇಕಾಂಶಗಳಲ್ಲಿ ಇಡೀ ಜಗತ್ತಿಗೆ ವ್ಯಾಪಿಸಿದೆ. ಸಂಘಟನೆ ಮತ್ತು ವೈಚಾರಿಕ ದೃಷ್ಟಿಕೋನಗಳಲ್ಲಿ ವಚನಕ್ರಾಂತಿ ಅಭೂತಪೂರ್ವ ಐತಿಹಾಸಿಕ ಕಾಲಘಟ್ಟವಾಗಿ ಪರಿಣಮಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ಮಾಜಿ ಅಧ್ಯಕ್ಷ, ರುದ್ರೇಶಮೂರ್ತಿ ತಿಳಿಸಿದರು.
ವನಕಲ್ಲು ಸುಕ್ಷೇತ್ರ ಶ್ರೀ ಬಸವರಮಾನಂದ ಸ್ವಾಮೀಜಿ ಮಾತನಾಡಿ, ಶರಣರು ಜಾತಿ, ಲಿಂಗ, ಕಸುಬು, ಆರ್ಥಿಕ ಸ್ಥಿತಿ ಮುಂತಾದ ಬೇಧಭಾವಗಳನ್ನು ತಿರಸ್ಕರಿಸಿದ್ದರು. ವಚನಸಾಹಿತ್ಯ ಸಮಾನತೆ, ಶ್ರಮಿಕ, ಕಾಯಕ, ದಾಸೋಹದ ನೆಲೆಯಲ್ಲಿ ಪ್ರಮುಖವಾದುದು. ಧಾರ್ಮಿಕ, ಸಾಮಾಜಿಕ, ದಾರ್ಶನಿಕ ಚಿಂತನೆಗಳನ್ನು ಒಳಗೊಂಡಿವೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ಕಾರ್ಯದರ್ಶಿ ವಿ.ವಿಶ್ವನಾಥ್, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಸ್ವರ್ಣಗೌರಿ, ಜಿಲ್ಲಾ ಶಸಾಪ ಅಧ್ಯಕ್ಷ ಚಂದ್ರಶೇಖರಹಡಪದ್, ತಾಲೂಕು ಶಸಾಪ ಅಧ್ಯಕ್ಷ ಮ.ಸುರೇಶ್ಬಾಬು, ಜಿಲ್ಲಾ ಸಹಕಾರ ಸಮ್ಮೇಳನಾಧ್ಯಕ್ಷ ವೆಂಕಟಾಪುರ ಲಕ್ಷ್ಮಣ್, ಆರ್.ಮುನಿರಾಜು, ಮುನಿವೀರಣ್ಣ, ಮುನಿವೆಂಕಟರಮಣಪ್ಪ, ಕೆ.ಎಚ್.ಚಂದ್ರಶೇಖರ್, ಎ.ಬಿ.ಪರಮೇಶ್, ಶ್ರೀನಿವಾಸ್, ಚಿದಾನಂದ ಬಿರಾದಾರ್, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಬೇಕರಿ ವಿ.ಶಿವಣ್ಣ, ಖಜಾಂಚಿ ಮ.ಜಯದೇವ್, ಹೊಸಕೋಟೆ ಚೌಡೇಗೌಡ, ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಎಂ.ಚಂದ್ರು, ಕರವೇ ಮಹೇಶ್ ಉಪಸ್ಥಿತರಿದ್ದರು.(ಫೋಟೋ ಕ್ಯಾಫ್ಷನ್)
ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಸಮ್ಮೇಳನದ ಸಮಾರೊಪ ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು.