ಕನ್ನಡಪ್ರಭ ವಾರ್ತೆ ಬಾದಾಮಿ
ಭಾನುವಾರ ನಗರದ ಎಸ್.ವಿ.ಪಿ. ಸಂಸ್ಥೆಯ ಬಸವಭವನದಲ್ಲಿ ಜಿಲ್ಲಾ ಶಿವಶಿಂಪಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಶಿವಶಿಂಪಿ ಸಮಾವೇಶ, ಶಿವದಾಸಿಮಯ್ಯನವರ ಜಯಂತಿ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಟ್ಟೆ ಹೊಲಿದು ಜೀವನ ನಡೆಸುವ ನಿಮ್ಮ ಸಮಾಜದವರು ಶ್ರಮಿಕರು. ಸಣ್ಣ ಸಮಾಜ ಜಿಲ್ಲೆಯಲ್ಲಿ ಉತ್ತಮವಾಗಿ ಸಂಘಟಿತರಾಗುತ್ತಿದ್ದೀರಿ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳಾಗಿ ಮಾಡಬೇಕು ಎಂದು ಹೇಳಿದರು.
ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಎ.ಸಿ.ಪಟ್ಟಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಒಟ್ಟಾಗಿ ಮುನ್ನಡೆಸುವುದು ತುಂಬಾ ಕಷ್ಟ. ಮಹಿಳೆಯರು ಸೇರಿದಂತೆ ಎಲ್ಲರೂ ಸಮಾಜವನ್ನು ಮುನ್ನಡೆಸಲು ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಜಿಪಂ ಮಾಜಿ ಉಪಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಈ ಹಿಂದಿನಂತೆ ಮುಂಬರುವ ದಿನಗಳಲ್ಲಿಯೂ ಸಹಿತ ಶಿವಶಿಂಪಿ ಸಮಾಜ ಬಾಂಧವರಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಶಿವಶಿಂಪಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕೋಲಾರ ಪ್ರಸ್ತಾವಿಕವಾಗಿ ಸಮಾಜದ ಸಮಸ್ಯೆಗಳು, ಸಮಾಜವನ್ನು ಮುನ್ನಡೆಸುವ ಕುರಿತು ಮಾತನಾಡಿದರು. ಜಿಲ್ಲೆಯ ವಿವಿದ ತಾಲೂಕುಗಳಿಂದ ಸಹಸ್ರಾರು ಶಿವಶಿಂಪಿ ಸಮಾಜದವರು ಭಾಗವಹಿಸಿದ್ದರು.
ಮೆರವಣಿಗೆ: ಬೆಳಗ್ಗೆ 8 ಗಂಟೆಗೆ ಶಿವಾನಂದ ಮಠದಿಂದ ಬಸವಭವನದವರೆಗೆ ಶಿವದಾಸಿಮಯ್ಯನವರ ಭಾವಚಿತ್ರದ ಮೆರವಣಿಗೆ, ಕುಂಭಮೇಳ ಮೆರವಣಿಗೆ ಸಕಲ ಸಂಗೀತ ವಾದ್ಯಗಳ ಮೂಲಕ ಮುಖ್ಯರಸ್ತೆಯ ಮೂಲಕ ಬಸವಭವನಕ್ಕೆ ಬಂದು ತಲುಪಿತು. ಈಲ್ಲೆ ವಿವಿಧ ತಾಲೂಕಿನಿಂದ ಶಿವಶಿಂಪಿ ಸಮಾಜ್ವರು ಭಾಗವಹಿಸಿದ್ದರು. ಶಿವಶಿಂಪಿ ಸಮಾಜವನ್ನು ಚಿನ್ನಪ್ಪರಡ್ಡಿ ವರದಿ ಪ್ರಕಾರ ಒಬಿಸಿ ಪಟ್ಟಿಗೆ ಸೇರಿಸಬೇಕು. ಶಿವದಾಸಿಮಯ್ಯನವರ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಬೇಕು. ರಾಜಕೀಯವಾಗಿ ಶಿವಶಿಂಪಿ ಸಮಾಜಕ್ಕೆ ಅವಕಾಶ ನೀಡಬೇಕು. ಬಡಮಕ್ಕಳನ್ನು ದತ್ತು ಪಡೆದು ಗುಣಮಟ್ಟದ ಶಿಕ್ಷಣ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ
-ನಾಗಪ್ಪ ಶಿವಣಗಿ, ತಾಲೂಕಾಧ್ಯಕ್ಷರು, ಶಿವಶಿಂಪಿ ಸಮಾಜ ಬಾದಾಮಿ.