ಕನ್ನಡಪ್ರಭ ವಾರ್ತೆ ಮೈಸೂರು
ಥ್ರಿ ಫೋಲ್ಡ್ ತಂಡ ಕಟ್ಟಿಕೊಂಡಿರುವ ಕೆ. ನಹುಷಾ, ಕೆ. ರಕ್ಷಿತ್ ಮತ್ತು ಬಿ.ಆರ್. ಶೈಲೇಶ್ ತಮ್ಮ ಕಲಾಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಮೈಸೂರು ಆಟ್೯ ಸೆಂಟರ್ ಆಯೋಜಿಸಿರುವ ಈ ಕಲಾಪ್ರದರ್ಶನ ಜೂ.17 ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 7 ರವರೆಗೆ ನಡೆಯಲಿದೆ.
ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ನಹುಷಾ ಅವರು ಓದಿದ್ದು ಮೈಸೂರಿನ ಕಾವಾದಲ್ಲಿ. ನಂತರ ಬೆಂಗಳೂರಿನ ವಿವಿಯಲ್ಲಿ ಚಿತ್ರಕಲೆ ವಿಷಯದಲ್ಲಿ ಎಂ.ಎ. ಪದವಿ ಪಡೆದು ಜಾಹೀರಾತು ಕಂಪನಿಯಲ್ಲಿದ್ದರು. ಸದ್ಯ ತಮ್ಮ ತೋಟ ನೋಡಿಕೊಳ್ಳುತ್ತ ಚಿತ್ರಕಲೆ ಮುಂದುವರೆಸಿದ್ದಾರೆ. ಅವರ ಚಿತ್ರಕಲಾ ಪ್ರದರ್ಶನದಲ್ಲಿ ಮಲೆನಾಡಿನ ಜೀವನಶೈಲಿ, ಮನುಷ್ಯ ಹಾಗೂ ಪ್ರಾಣಿಗಳ ಸಂಘರ್ಷವನ್ನ ಢಾಳ ಬಣ್ಣಗಳ ಮೂಲಕ ಚಿತ್ರಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆಯ ರಕ್ಷಿತ್ ಕಡ್ಲಾರ ಅವರು ಕಾವಾದಲ್ಲಿ ಪದವಿ ಹಾಗೂ ಎಂ.ಎ ಪದವಿ ಪಡೆದು ಕೃಷಿ ಜೊತೆಗೆ ಕಲಾಭ್ಯಾಸ ಕೈಗೊಂಡಿದ್ದಾರೆ. ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿ ಶೂನ್ಯದ ಮಹತ್ವವನ್ನು ಅವರು ಬಿಂಬಿಸಿದ್ದಾರೆ.
ಅಂತಾರಾಷ್ಟ್ರೀಯ ಕಿರುಚಿತ್ರ, ಸಾಕ್ಷ್ಯಚಿತ್ರೋತ್ಸವಕನ್ನಡಪ್ರಭ ವಾರ್ತೆ ಮೈಸೂರು
ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ಧ್ವನಿ ಸಂಯೋಜನೆ, ಹಾಗೂ ಇನ್ನೂ ಅನೇಕ ಬಹುಮಾನ ಇರುತ್ತವೆ. ಚಿತ್ರಗಳನ್ನು ಸಲ್ಲಿಸಲು ನ. 30ರಂದು ಕಿರುಚಿತ್ರಗಳ ಅವಧಿ - 1 ನಿಮಿಷದಿಂದ 45 ನಿಮಿಷಗಳ ಒಳಗೆ ಇರತಕ್ಕದ್ದು ಮತ್ತು ಸಾಕ್ಷ್ಯಚಿತ್ರಗಳ ಅವಧಿ -30 ನಿಮಿಷದಿಂದ 100 ನಿಮಿಷಗಳ ಒಳಗೆ ಇರಬೇಕು ಎಂದರು.ಆಸಕ್ತರು https://filmfreeway.com/paridrishya, ಇ ಮೇಲ್ವಿಳಾಸ www.mysurucinemasociety.com ಇಲ್ಲಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಮೊ. 99805 96824 ಸಂಪರ್ಕಿಸಬಹುದು.