ಭದ್ರಾವತಿಯಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ

KannadaprabhaNewsNetwork |  
Published : Sep 10, 2025, 01:03 AM IST
ಪೋಟೊ:09ಎಸ್‌ಎಂಜಿಕೆಪಿ01ಶಿವಮೊಗ್ಗ ನಗರದ ಬಿಜೆಪ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಶಾಸಕ ಎಸ್‌.ಎನ್. ಚನ್ನಬಸಪ್ಪ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾವತಿಯಲ್ಲಿ ದೇಶದ್ರೋಹ ಘೋಷಣೆ ಕೂಗಿದವರನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಹಿಂದೂ ಸಮಾಜ ಏನು ಮಾಡಬೇಕು? ಎಷ್ಟು ಅಪಮಾನ ಸಹಿಸಬೇಕು ಎಂದು ಬಿಜೆಪಿ ಶಾಸಕ ಎಸ್‌.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿಯಲ್ಲಿ ದೇಶದ್ರೋಹ ಘೋಷಣೆ ಕೂಗಿದವರನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಹಿಂದೂ ಸಮಾಜ ಏನು ಮಾಡಬೇಕು? ಎಷ್ಟು ಅಪಮಾನ ಸಹಿಸಬೇಕು ಎಂದು ಬಿಜೆಪಿ ಶಾಸಕ ಎಸ್‌.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಗಮಂಗಲ, ಹುಬ್ಬಳ್ಳಿಯಾಯಿತು ಸಾಗರದಲ್ಲಿಯೂ ಗಣಪತಿಗೆ ಕ್ಯಾಕರಿಸಿ ಉಗಿಯುವ ಮಾನಸಿಕತೆ ನೋಡಿದ್ದಾಯಿತು. ಮಸೀದಿಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ತುಷ್ಟೀಕರಣ ಮಾಡಲು ಹೊರಟ್ಟಿದ್ದೀರಿ ಎಂದರು.

ಭದ್ರಾವತಿ ಕಾಂಗ್ರೆಸ್ ಶಾಸಕರು ನಿನ್ನೆ ಮುಂದಿನ ಜನ್ಮದಲ್ಲಿ ನಾನು ಮುಸ್ಮಿಮನಾಗಿ ಹುಟ್ಟಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಬ್ಬ ಹಿಂದೂವಾಗಿ ಹುಟ್ಟಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದರು. ಹಾಗೆಯೇ, ಇಂತಹ ಹೇಳಿಕೆ ನೀಡಿದ ಅವರಿಗೆ ಭಾರತದಂತಹ ಪುಣ್ಯ ಭೂಮಿಯಲ್ಲಿ ಪುನರ್ ಜನ್ಮವೇ ಇರಲು ಸಾಧ್ಯವಿಲ್ಲ ಎಂದರು.

ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ದೇಶದ ಅನ್ನ ತಿಂದು, ಸಕಲ ಸೌಲಭ್ಯಗಳನ್ನು ಪಡೆದ ಯುವಕರ ಗುಂಪೊಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಈ ಕಾಂಗ್ರೆಸ್ ಸರ್ಕಾರ ನಪುಂಸಕ ಸರ್ಕಾರವಾಗಿದೆ. ದೇಶದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಜ್ಯದಲ್ಲಿ ಮುಸಲ್ಮಾನ್ ಗೂಂಡಾ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಹೊರಟಿದೆ. ನಾವು ಹಿಂದೂಸ್ತಾನ್ ಉಳಿವಿಗಾಗಿ ಮತ್ತು ಹಿಂದೂಸ್ತಾನ್ ಸಂರಕ್ಷಣೆಗಾಗಿಯೇ ರಾಜಕಾರಣ ಮಾಡುವವರು. ರಾಷ್ಟ್ರದ್ರೋಹಿಗಳಿಗೆ ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದರು.

ಬೂಕರ್ ಪ್ರಶಸ್ತಿ ಬರಲು ಕಾರಣವಾದ ಅನುವಾದಕರನ್ನು ಹಿಂದೂ ಹೆಣ್ಣು ಮಗಳು ಎನ್ನುವ ಕಾರಣಕ್ಕೆ ಹೊರಗಿಡುತ್ತೀರಿ. ನ್ಯಾಯ ಕೇಳಿದರೆ ಲಾಠಿಚಾರ್ಜ್ ಮಾಡುತ್ತೀರಿ, ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದವರನ್ನು ಬಿಟ್ಟು ಹಿಂದೂಗಳನ್ನು ಬಂಧಿಸುತ್ತೀರಿ. ಗೃಹಸಚಿವರೇ ನಿಮ್ಮ ಜಾಗ ಕಿತ್ತುಕೊಳ್ಳುವ ಅಥವಾ ಕುತ್ತುಬರುವ ಭೀತಿಯಿಂದ ನೀವು ಒಂದು ವರ್ಗದ ಪರವಾಗಿ ಕೆಲಸ ಮಾಡುತ್ತಿದ್ದೀರಿ. ಎಚ್ಚರಿಕೆಯಿಂದ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ತಕ್ಕಪಾಠ ಕಲಿಸುತ್ತದೆ ಎಂದರು.

ಡಿಜೆ ಹಾಕಿದವರಿಗೆ ನೋಟೀಸು ನೀಡುವ ನೀವು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತಲ್ವಾರ್ ತೋರಿಸಿದಾಗ ನೋಟೀಸ್ ನೀಡಲಿಲ್ಲವೇಕೆ ? ಎಂದು ಪ್ರಶ್ನಿಸಿದರು. ಮದರಸದಲ್ಲಿ ಮಕ್ಕಳಿಗೆ ಉತ್ತಮ, ನೈತಿಕ ದೇಶಭಕ್ತಿಯ ಶಿಕ್ಷಣ ಕೊಡಿ. ನಾನು ಕೂಡ ಮದ್ದೂರಿಗೆ ಹೊರಟಿದ್ದೇನೆ ಎಂದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ದಿನದಯಾಳ್, ಜ್ಣಾನೇಶ್ವರ್ ಸೇರಿದಂತೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ