ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಪ್ಪಳ ಜಿಲ್ಲೆಯ ಸಂಗೀತಾ ಅವರು ಈ ಬಾರಿಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಅವರನ್ನು ಹೊನ್ನಾಳಿಗೆ ಕರೆಯಿಸಿ ಸನ್ಮಾನ ಮಾಡುತ್ತಿರುವುದು ತಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ನಡೆ ಉಳಿದ ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿ ಪರಿಣಮಿಸಲಿದೆ ಎಂದು ಹೇಳಿದರು.
ಬೆಳವಾಡಿ ಮಲ್ಲಮ್ಮ ಹೆಸರಲ್ಲಿ 5 ಪ್ರಶಸ್ತಿ:ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಎಂ. ಬೇವಿನಮರದ ಮಾತನಾಡಿ, ತಮ್ಮ ಪ್ರಾಧಿಕಾರವು 6 ರಾಜ್ಯಗಳೊಂದಿಗೆ ಗಡಿಪ್ರದೇಶ ಹಂಚಿಕೊಂಡಿದೆ. ರಾಣಿ ಅಬ್ಬಕ್ಕ ದೇವಿ ಪ್ರಶಸ್ತಿಯನ್ನು ನೀಡಿದಂತೆಯೇ ವೀರವನಿತೆ ಬೆಳವಾಡಿ ಮಲ್ಲಮ್ಮ ಹೆಸರಿನಲ್ಲಿ ಶೀಘ್ರ 5 ಪ್ರಶಸ್ತಿಗಳನ್ನು ಸ್ಥಾಪಿಸಿ ತಮ್ಮ ಪ್ರಾಧಿಕಾರದಿಂದ ನೀಡಲಾಗುವುದು ಎಂದು ಹೇಳಿದರು.
ದಾವಣಗೆರೆಯ ಮಕ್ಕಳ ತಜ್ಞರಾದ ಡಾ.ಸುಧಾ ಸಿ. ಪಾಟೀಲ್, ರಾಜು ವಿ. ಮೋತಿ ಮಾತನಾಡಿದರು. ಹೊನ್ನಾಳಿಯ ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಾ ತಜ್ಞ ಡಾ.ದೀಪಕ್ ಬಿ. ಉಪ್ಪಿನ್, ಅರ್ಬನ್ ಬ್ಯಾಂಕ್ ಸಿಇಒ ಎಚ್.ಪಿ.ದಿನೇಶ್, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದಾನಿಗಳಾದ ಕುಂಕೋದ್ ಸೋಮಸೇಖರಪ್ಪ, ಸಿದ್ದೇಶ್ ನಾಡಿಗ್ ಅವರನ್ನು ಸನ್ಮಾನಿಸಲಾಯಿತು.