-ಶಹಾಪುರ ನಗರದ ವೈನ್ ಶಾಪ್ ವೊಂದರಲ್ಲಿ ನಕಲಿ ಫೋನ್ ಪೇ ಮೂಲಕ ಹಣ ಪಾವತಿ । ಪ್ರಕರಣ ದಾಖಲು: ಓರ್ವ ಯುವಕನ ಬಂಧನ
ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರನಗರದಲ್ಲಿ ಖತರ್ನಾಕ್ ಖದೀಮರು ಗ್ರಾಹಕರ ಸೋಗಿನಲ್ಲಿ ಬರುವ ಇವರು ನಕಲಿ ಫೋನ್ ಪೇ ಅಪ್ಲಿಕೇಷನ್ ಮೂಲಕ ಅಂಗಡಿ ಮಾಲೀಕರ ಫೋನ್ ಪೇ ಕ್ಯೂಆರ್ ಕೋಡನ್ನು ಸ್ಕ್ಯಾನ್ ಮಾಡುತ್ತಾರೆ. ಅಂಗಡಿ ಮಾಲೀಕರಿಗೆ ಹಣ ಸಂದಾಯವಾದಂತೆ ಮೆಸೇಜ್ ಸಹ ಹೋಗುತ್ತದೆ. ಆದರೆ, ಅಕೌಂಟ್ಗೆ ಹಣ ಜಮಾ ಆಗಿರುವುದಿಲ್ಲ. ಇತ್ತೀಚೆಗೆ ಇಂತಹ ಪ್ರಕರಣಗಳು ನಗರದಲ್ಲಿ ಬೆಳಕಿಗೆ ಬರುತ್ತಿವೆ. ಇಂಥ ಪ್ರಕರಣಗಳಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸದೆ ಉದಾಸೀನತೆ ತೋರಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ತಲೆ ಎತ್ತಿದ ನಕಲಿ ಫೋನ್ ಪೇ ಗ್ಯಾಂಗ್: ನಕಲಿ ಫೋನ್ ಪೇ ಮೂಲಕ ವ್ಯಾಪಾರಸ್ಥರನ್ನು ವಂಚಿಸುವ ಗ್ಯಾಂಗೊಂದು ನಗರದಲ್ಲಿ ಸಕ್ರಿಯವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ಇಂಥ ಘಟನೆ ಮರುಕಳಿಸದಂತೆ ತಡೆಯಲು ಪೋಲಿಸ್ ಇಲಾಖೆ ಒಬ್ಬರಿಂದ ಸಾಧ್ಯವಿಲ್ಲ. ಆದರೆ, ಇದಕ್ಕೆ ಸಾರ್ವಜನಿಕ ಸಹಕಾರ ಅಗತ್ಯ. ಆದರೂ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಹಲವು ಅನುಮಾನ ಮೂಡುತ್ತಿವೆ ಎನ್ನುತ್ತಾರೆ ಜಿಲ್ಲಾ ದಲಿತ ಮುಖಂಡ ನಿಂಗಣ್ಣ ನಾಟೇಕಾರ.
* ಪೊಲೀಸರ ಹಿಂದೇಟು: ಪೊಲೀಸರಿಗೆ ಇದರ ಮೂಲ ಗೊತ್ತಿದ್ದರೂ ಅದನ್ನು ಅವರು ಬುಡ ಸಮೇತ ಕಿತ್ತಿಹಾಕಲು ಮನಸ್ಸು ಮಾಡುತ್ತಿಲ್ಲ. ಮೋಸ ಹೋಗಿರುವ ಬಗ್ಗೆ ದೂರು ಕೊಡಲು ಹೋದ ವ್ಯಾಪಾರಸ್ಥರಗೆ ಇನ್ನಿಲ್ಲದ ಪ್ರಶ್ನೆಗಳನ್ನು ಕೇಳುವ ಮೂಲಕ ಕಂಪ್ಲೇಂಟ್ ಕೊಡದ ಹಾಗೆ ನೋಡಿಕೊಳ್ಳುತ್ತಿದ್ದಾರೆಂದು ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.
* ಆಫ್ಲೈನ್ ಮೂಲಕ ಕುತಂತ್ರ: ವ್ಯಾಪಾರಿಗಳು ಬೇರೆ ಕಡೆಗೆ ಗಮನಹರಿಸಿದ್ದಾಗ ಪಾವತಿ ದೃಢೀಕರಣವನ್ನು ಪರಿಶೀಲಿಸಲು ಸಾಧ್ಯವಾಗದ ಪರಿಸ್ಥಿತಿ ಇದ್ದಾಗ, ವಂಚಕರು ವ್ಯಾಪಾರಿಯಿಂದ ಉತ್ಪನ್ನ ಅಥವಾ ಸೇವೆಗಳನ್ನು ಪಡೆಯುವುದಕ್ಕಾಗಿ ನಕಲಿ ಸ್ಕ್ರೀನ್ಶಾಟ್ ಬಳಸಲು ಈ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಾರೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ವ್ಯಾಪಾರಸ್ಥ ವಿಜಯಕುಮಾರ್.
ಕೋಟ್ -1:
- ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ.
ಕೋಟ್ -2
ಕಳೆದೆರಡು ಮೂರು ತಿಂಗಳಿಂದ ನಮ್ಮ ವೈನ್ ಶಾಪ್ ನಲ್ಲಿ ನಕಲಿ ಫೋನ್ ಪೇ ಮೂಲಕ 3 ರಿಂದ 3.50 ಲಕ್ಷ ರು.ಗಳವರೆಗೆ ವಂಚನೆ ನಡೆದಿದೆ. ಇದರ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾದರೆ ಇನ್ನೊಬ್ಬರು ಮೋಸ ಹೋಗುವುದಿಲ್ಲ.- ಉಮೇಶ್ ಕಟ್ಟಿಮನಿ, ವಂಚನೆಗೆ ಒಳಗಾದ ರೇಣುಕಾ ವೈನ್ ಶಾಪ್ ಮಾಲೀಕ.
---------21ವೈಡಿಆರ್7: ಶಹಾಪುರ ನಗರದ ವೈನ್ ಶಾಪ್ ವೊಂದರಲ್ಲಿ ನಕಲಿ ಫೋನ್ ಪೇ ಮೂಲಕ ಹಣ ಪಾವತಿ ಮಾಡುತ್ತಿರುವ ದೃಶ್ಯ.