ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಕಾಶ್ಮೀರದಲ್ಲಿ ಪಹಾಲ್ಗಮ್ನಲ್ಲಿ 26 ಅಮಾಯಕ ಪ್ರವಾಸಿಗರ ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಮಡಿಕೇರಿ : ಕುಂದಚೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಕಾಶ್ಮೀರದಲ್ಲಿ ಪಹಾಲ್ಗಮ್ನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಉಗ್ರರ ಕೃತ್ಯವನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಬಿ. ದಿನೇಶ್ ಅವರು ಈ ಸಂದರ್ಭ ಮಾತನಾಡಿ ಇಂತಹ ಹೇಯ ಕೃತ್ಯಕ್ಕೆ ಪಾಕಿಸ್ಥಾನದ ಪಿತೂರಿಯೇ ಕಾರಣ, ಹಲವಾರು ಸಂದರ್ಭದಲ್ಲಿ ಕಾಲುಕೆರೆದು ಯುದ್ಧಕ್ಕೆ ಬಂದ ಪಾಕ್ ಸರಿಯಾಗಿ ಪೆಟ್ಟುತಿಂದಿದೆ, ಆದರೂ ಆ ದೇಶಕ್ಕೆ ಬುದ್ಧಿ ಬಂದಿಲ್ಲ, ಭಾರತ ಕೂಡಲೇ ಯುದ್ಧ ನಡೆಸಿ ಆ ದೇಶಕ್ಕೆ ಸರಿಯಾಗಿ ಪಾಠ ಕಲಿಸಬೇಕು. ಉಗ್ರರ ಅಡಗು ದಾಣಾ ವನ್ನು ನಾಶಗೊಳಿಸಬೇಕು ಎಂದು ಆಗ್ರಹಿಸಿದರು. ಈ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಸಂಖ್ಯೆಯಲ್ಲಿ ಜಾತಿ ಭೇದವಿಲ್ಲದೆ ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.