ಕನ್ನಡಪ್ರಭ ವಾರ್ತೆ ಮಂಗಳೂರು
ಸೋಮವಾರ ಬೆಳಗ್ಗೆ ಸೈಕಲ್ನಲ್ಲಿ ಪೇಪರ್ ವಿತರಣೆ ಮಾಡುತ್ತಿದ್ದಾಗ ಬಲ್ಲಾಳ್ಬಾಗ್ ರಸ್ತೆ ಬದಿ ಐಫೋನ್ ಸಿಕ್ಕಿತ್ತು. ಅದನ್ನು ಅವರು ರೇಣುಕಾ ರಾಜ್ ಏಜೆನ್ಸಿಯ ಮಾಲೀಕ ನಾಗರಾಜ್ ಅವರಿಗೆ ತಂದು ಕೊಟ್ಟಿದ್ದರು. ಆಗ ಅದು ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಮೊಬೈಲ್ ಸಿಕ್ಕಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ಸಹಿತ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಮೊಬೈಲ್ ವಾರಸುದಾರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಜೋಯೆಲ್ ಎಂಬ ವಿದ್ಯಾರ್ಥಿಯ ಬಂದು ಇವರಿಂದ ಮೊಬೈಲ್ ಪಡೆದುಕೊಂಡು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
......................ಉಚಿತ ಯೋಗ ತರಬೇತಿ ಕಾರ್ಯಕ್ರಮ ಉದ್ಘಾಟನೆಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ 48 ದಿನಗಳ ಉಚಿತ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಗುರುವಾರನಕೆರೆ ಪಾಂಡುರಂಗ ಮಂದಿರದಲ್ಲಿ ನಡೆಯಿತು.
ಯೋಗ ಶಿಕ್ಷಣ ಸಮಿತಿಯ ಮಂಗಳೂರು ಪ್ರಾಂತ ಪ್ರಮುಖ ರವೀಶ, ಯೋಗ ಶಿಕ್ಷಣ ಸಮಿತಿಯ ಆನಂದ, ಮಾರ್ಗದರ್ಶಕರು ಯೋಗ ಶಿಕ್ಷಣ ಸಮಿತಿ ಉಪ್ಪಿನಂಗಡಿ ತಾಲೂಕು , ಪ್ರದೀಪ ಯೋಗ ಶಿಕ್ಷಣ ಸಮಿತಿ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಸೇರಿ 105 ಮಂದಿ ಉಪಸ್ಥಿತರಿದ್ದರು.ನಮ್ಮ ಮನೆ ಶಾಖೆಯ ಶಿಕ್ಷಕ ಶಿವಣ್ಣ ಸ್ವಾಗತಿಸಿದರು. ಶಿಕ್ಷಕಿ ದಮಯಂತಿ ವಂದಿಸಿದರು. ಶಿಕ್ಷಕಿ ಭಾರತಿ ನಿರೂಪಿಸಿದರು. ನಮ್ಮ ಮನೆ ಯೋಗ ಬಂಧುಗಳಾದ ಪುರಂದರ, ಗಿರೀಶ , ಅಶೋಕ, ಪ್ರಿಯ ,ಆಶಾ ಯೋಗದ ಅನುಭವಗಳನ್ನು ಹಂಚಿಕೊಂಡರು. ನಮ್ಮ ಮನೆ ಗುರುವಾಯನಕೆರೆ ಶಾಖೆಯ ಯೋಗ ಶಿಕ್ಷಕ ಬಂಧುಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.