ಧಾರವಾಡ:
ಭಾನುವಾರ ಕರ್ನಾಟಕ ವಿಧ್ಯಾವರ್ಧಕ ಸಂಘದ 135ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕನ್ನಡದ ಪ್ರಪಂಚ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಸವಿ ನೆನಪಿನಲ್ಲಿ ಕೊಡಮಾಡುವ ಡಾ. ಪಾಟೀಲ್ ಪುಟ್ಟಪ್ಪನವರ ಪ್ರಶಸ್ತಿಯನ್ನು ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ ಅವರಿಗೆ ಪ್ರದಾನ ಮಾಡಿ ಮಾತನಾಡಿದರು.
ಕನ್ನಡಮ್ಮ ಪತ್ರಿಕೆ ಸಮಾಜದ ಕನ್ನಡಿಯಾಗಿ ಗಡಿಭಾಗದ ಜನರ ಸಮಸ್ಯೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಲುಪಿಸಿ ಪರಿಹಾರ ಕಲ್ಪಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಕನ್ನಡಮ್ಮ ಪತ್ರಿಕೆಗೆ ಪಾಪು ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೆಯ ವಿಚಾರ. ನನಗೆ ಹಾಗೂ ಸಾವಿರಾರೂ ಪತ್ರಕರ್ತರಿಗೆ ಕನ್ನಡದ ಬರವಣಿಗೆ ಕಲಿಸಿದ ವಿಶ್ವವಿದ್ಯಾಲಯ ಕನ್ನಡಮ್ಮ ದಿನಪತ್ರಿಕೆ ಎಂದರು.
ಬೆಳಗಾವಿಯ 18 ವಿಧಾನಸಭಾ ಕ್ಷೇತ್ರದಲ್ಲಿ 5 ಕ್ಷೇತ್ರದಲ್ಲಿ ಎಂಇಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಆಗ ಎಂಇಎಸ್ ಪುಂಡಾಟಿಕೆಯ ಸದ್ದು ಅಡಗಿಸಲು ಕನ್ನಡಮ್ಮ ಪತ್ರಿಕೆಯನ್ನು ಎಂ.ಎಸ್. ಟೋಪಣ್ಣವರ ದಿಟ್ಟತನದಿಂದ 1972ರಲ್ಲಿ ಸ್ಥಾಪಿಸಿದರು. ಎಲ್ಲ ಪತ್ರಿಕೆ ಹುಟ್ಟಿದ್ದು ಸಮಾಜದ ಕಳಕಳಿಯ ಬಗ್ಗೆ. ಆದರೆ ಟೋಪಣ್ಣವರ ಅವರು ಮರಾಠಿಗರ ಅಟ್ಟಹಾಸ, ಸದ್ದು ಅಡುಗಿಸಲು ಪತ್ರಿಕೆ ಆರಂಭಿಸಿದರು ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಕನ್ನಡಮ್ಮ ದಿನಪತ್ರಿಕೆ ಸಂಪಾದಕ ರಾಜಕುಮಾರ ಟೋಪಣ್ಣವರ, ನಮ್ಮ ಪತ್ರಿಕೆ ಪತ್ರಕರ್ತರ ವಿಶ್ವವಿದ್ಯಾಲಯ ಅಲ್ಲ. ಬೆಳಗಾವಿಯಲ್ಲಿ ಸಾಕಷ್ಟು ಕನ್ನಡ ಹೋರಾಟಗಾರರನ್ನು ರೂಪಿಸಿದೆ. ಪತ್ರಿಕೆಯ ಶ್ರೇಯೋಭಿವೃದ್ಧಿಗೆ ಕನ್ನಡಮ್ಮ ಸಿಬ್ಬಂದಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಕನ್ನಡ ಕಟ್ಟುವ ಜತೆಗೆ ಬೆಳಗಾವಿಯ ಜನರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುವ ಜವಾಬ್ದಾರಿ ಪತ್ರಿಕೆ ಮಾಡುತ್ತಿದೆ ಎಂದು ಹೇಳಿದರು.