ಅಗಲುವುದು ಅನಿವಾರ್ಯ ಸವಿನೆನಪು ಒಂದೇ ಶಾಶ್ವತ: ರಂಭಾಪುರಿ ಶ್ರೀ

KannadaprabhaNewsNetwork |  
Published : Aug 04, 2025, 12:15 AM IST
೦೧ಬಿಹೆಚ್‌ಆರ್ ೨: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ರುದ್ರಮುನೀಶ್ವರ ಜಗದ್ಗುರುಗಳ ಗದ್ದುಗೆಗೆ  ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು ಸಾಸಿವೆಯಷ್ಟು ಸುಖಕ್ಕೆ ಸಾವಿರದಷ್ಟು ದುಃಖ. ಆ ಸಾಸಿವೆಯಷ್ಟು ಸುಖಕ್ಕಾಗಿ ಶ್ರಮಿಸಿದರೂ ಕೆಲವರಿಗೆ ದೊರಕದು. ಹುಟ್ಟು ಸಹಜವಾದರೂ ಮರಣ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತಗೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಮಾಡಿದ ಸತ್ಕಾರ್ಯಗಳ ನೆನಹು ಮಾತ್ರ ಶಾಶ್ವತ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾಸಿವೆಯಷ್ಟು ಸುಖಕ್ಕೆ ಸಾವಿರದಷ್ಟು ದುಃಖ. ಆ ಸಾಸಿವೆಯಷ್ಟು ಸುಖಕ್ಕಾಗಿ ಶ್ರಮಿಸಿದರೂ ಕೆಲವರಿಗೆ ದೊರಕದು. ಹುಟ್ಟು ಸಹಜವಾದರೂ ಮರಣ ನಿಶ್ಚಿತ. ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತಗೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಮಾಡಿದ ಸತ್ಕಾರ್ಯಗಳ ನೆನಹು ಮಾತ್ರ ಶಾಶ್ವತ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಶುಕ್ರವಾರ ನಡೆದ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳ ಪುಣ್ಯ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಾವ ಸಂಪತ್ತಿಗಾಗಿ ಈ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿ ಗಾಗಿ ಮನುಷ್ಯ ಶ್ರಮಪಡಬೇಕಾಗುತ್ತದೆ. ದೇವರು ಮನುಷ್ಯನಿಗೆ ಎರಡು ಕೈ ಕೊಟ್ಟಿದ್ದಾನೆ. ಒಂದು ಕೈ ನಮ್ಮನ್ನು ಕಾಪಾಡಿ ಕೊಳ್ಳಲು ಇನ್ನೊಂದು ಕೈ ನಮ್ಮನ್ನು ನಂಬಿದವರನ್ನು ಕಾಪಾಡಲು ಎಂಬುದನ್ನು ಮನುಷ್ಯ ಮರೆಯಬಾರದು. ಹುಟ್ಟಿದ ಮೇಲೆ ಮರಣ ಇರುವುದು ಸತ್ಯ.

ಆದರೂ ಮನುಷ್ಯ ಮರೆತು ನಿಜ ದಾರಿಯಲ್ಲಿ ನಡೆಯುವವರೂ ಬಹಳ ವಿರಳ. ಸತ್ತು ಹೋದ ಮನುಷ್ಯನನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಬದುಕಿಸಿದ ಮಹಾತ್ಮರನ್ನು ಕಾಣುತ್ತೇವೆ. ಅಂಥ ಮಹಾತ್ಮರೂ ಕೂಡಾ ಕಾಲ ಗರ್ಭದಲ್ಲಿ ಕಣ್ಮರೆಯಾಗಿದ್ದಾರೆ. ಯಾವ ಪರಮಾತ್ಮನಿಂದ ಈ ಜೀವಾತ್ಮ ಅಗಲಿ ಬಂದಿದ್ದಾನೆ. ಆ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಒಂದಾಗುವುದಕ್ಕೆ ಲಿಂಗೈಕ್ಯ ರೆಂದು ಕರೆದಿದ್ದಾರೆ. ಭೌತಿಕ ಬದುಕಿನಲ್ಲಿ ಮನುಷ್ಯ ಏನೆಲ್ಲ ಸಂಪತ್ತು ಸಂಪನ್ಮೂಲ ಸಂಪಾದಿಸಿದರೂ ಜೊತೆಗೆ ಯಾವುದೂ ಬರಲಾರದು. ಅವರವರು ಮಾಡಿದ ಪುಣ್ಯದ ಶಕ್ತಿ ಒಳ್ಳೆಯ ಹೆಸರನ್ನು ತರಲು ಸಾಧ್ಯ ಎಂದರು. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ತಮ್ಮ ಬದುಕಿನುದ್ದಕ್ಕೂ ಸಮಾಜ ಮತ್ತು ಧರ್ಮ ಮುಖಿಯಾಗಿ ಕಾರ್ಯ ನಿರ್ವಹಿಸಿವುದನ್ನು ಕಾಣುತ್ತೇವೆ. ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳ ಮೂಲಕ ನಮ್ಮೆಲ್ಲರ ಮನದಾಳದಲ್ಲಿ ಸದಾ ಅವರ ನೆನಹು ಉಳಿದಿದೆ ಎಂದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಯಾವುದೋ ಪುಣ್ಯ ಫಲದಿಂದ ನಾವಿಲ್ಲಿ ಸೇರಿದ್ದೇವೆ. ಪುಣ್ಯ ತೀರಿದ ಮರು ಗಳಿಗೆಯಲ್ಲಿ ಪರಮಾತ್ಮನ ಕರೆಗೆ ಓಗೊಟ್ಟು ಹೋಗುವುದು ಅನಿವಾರ್ಯ. ಮನುಷ್ಯ ಜೀವನದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ ಸದಾ ನೆನಪಿನಲ್ಲಿ ಇರುತ್ತವೆ. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು ಎಂದರು. ಸಮಾರಂಭದಲ್ಲಿ ಚಿಕ್ಕಮಗಳೂರು ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಮಹೇಶ, ಗೌರವಾಧ್ಯಕ್ಷ ಬಿ.ಬಿ.ರೇಣುಕಾರ್ಯ, ಇ.ಸಿ.ಉಮೇಶ್. ಪ್ರಧಾನ ಕಾರ್ಯದರ್ಶಿ ಯಲಗುಡಿಗ ಹರೀಶ್, ಗಂಗಾಧರಯ್ಯ, ಬಸವರಾಜ, ಕೆ.ಎಸ್.ನಂದೀಶ, ಬಿ.ಬಸವರಾಜ, ಪ್ರಶಾಂತ, ನಂದೀಶ ಬನ್ನೂರು, ಶಂಕರೇಗೌಡ, ಕುಮಾರ್, ನವೀನ್ ಮಹೇಶ್, ದಾಕ್ಷಾಯಿಣಿ ಬಸವರಾಜ, ಪ್ರೇಮಾ, ಮಂಗಳ ಶಶಿಧರ ಸೇರಿದಂತೆ ಮಹಾರಾಷ್ಟçದ ಸೊಲ್ಲಾಪುರ, ಬಾರ್ಸಿ, ವೈರಾಗ್, ಪುಣೆ ನಗರದಿಂದ ಬಂದ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಶ್ರೀ ರಂಭಾಪುರಿ ವೀರರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯ ಹೆಚ್ಚು ಅಂಕ ಪಡೆದಿರುವ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ೦೧ಬಿಹೆಚ್‌ಆರ್ ೨: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ರುದ್ರಮುನೀಶ್ವರ ಜಗದ್ಗುರುಗಳ ಗದ್ದುಗೆಗೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...