ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಆದರೂ ಮನುಷ್ಯ ಮರೆತು ನಿಜ ದಾರಿಯಲ್ಲಿ ನಡೆಯುವವರೂ ಬಹಳ ವಿರಳ. ಸತ್ತು ಹೋದ ಮನುಷ್ಯನನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಬದುಕಿಸಿದ ಮಹಾತ್ಮರನ್ನು ಕಾಣುತ್ತೇವೆ. ಅಂಥ ಮಹಾತ್ಮರೂ ಕೂಡಾ ಕಾಲ ಗರ್ಭದಲ್ಲಿ ಕಣ್ಮರೆಯಾಗಿದ್ದಾರೆ. ಯಾವ ಪರಮಾತ್ಮನಿಂದ ಈ ಜೀವಾತ್ಮ ಅಗಲಿ ಬಂದಿದ್ದಾನೆ. ಆ ಜೀವಾತ್ಮ ಮತ್ತೆ ಪರಮಾತ್ಮನಲ್ಲಿ ಒಂದಾಗುವುದಕ್ಕೆ ಲಿಂಗೈಕ್ಯ ರೆಂದು ಕರೆದಿದ್ದಾರೆ. ಭೌತಿಕ ಬದುಕಿನಲ್ಲಿ ಮನುಷ್ಯ ಏನೆಲ್ಲ ಸಂಪತ್ತು ಸಂಪನ್ಮೂಲ ಸಂಪಾದಿಸಿದರೂ ಜೊತೆಗೆ ಯಾವುದೂ ಬರಲಾರದು. ಅವರವರು ಮಾಡಿದ ಪುಣ್ಯದ ಶಕ್ತಿ ಒಳ್ಳೆಯ ಹೆಸರನ್ನು ತರಲು ಸಾಧ್ಯ ಎಂದರು. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ತಮ್ಮ ಬದುಕಿನುದ್ದಕ್ಕೂ ಸಮಾಜ ಮತ್ತು ಧರ್ಮ ಮುಖಿಯಾಗಿ ಕಾರ್ಯ ನಿರ್ವಹಿಸಿವುದನ್ನು ಕಾಣುತ್ತೇವೆ. ರಚನಾತ್ಮಕ ಮತ್ತು ಗುಣಾತ್ಮಕ ಕಾರ್ಯಗಳ ಮೂಲಕ ನಮ್ಮೆಲ್ಲರ ಮನದಾಳದಲ್ಲಿ ಸದಾ ಅವರ ನೆನಹು ಉಳಿದಿದೆ ಎಂದರು. ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಯಾವುದೋ ಪುಣ್ಯ ಫಲದಿಂದ ನಾವಿಲ್ಲಿ ಸೇರಿದ್ದೇವೆ. ಪುಣ್ಯ ತೀರಿದ ಮರು ಗಳಿಗೆಯಲ್ಲಿ ಪರಮಾತ್ಮನ ಕರೆಗೆ ಓಗೊಟ್ಟು ಹೋಗುವುದು ಅನಿವಾರ್ಯ. ಮನುಷ್ಯ ಜೀವನದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳು ಮಾತ್ರ ಸದಾ ನೆನಪಿನಲ್ಲಿ ಇರುತ್ತವೆ. ಲಿಂ. ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರು ಸರಳತೆಯ ಸಾಕಾರ ಮೂರ್ತಿಯಾಗಿದ್ದರು ಎಂದರು. ಸಮಾರಂಭದಲ್ಲಿ ಚಿಕ್ಕಮಗಳೂರು ಶಂಕರ ದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಸ್.ಮಹೇಶ, ಗೌರವಾಧ್ಯಕ್ಷ ಬಿ.ಬಿ.ರೇಣುಕಾರ್ಯ, ಇ.ಸಿ.ಉಮೇಶ್. ಪ್ರಧಾನ ಕಾರ್ಯದರ್ಶಿ ಯಲಗುಡಿಗ ಹರೀಶ್, ಗಂಗಾಧರಯ್ಯ, ಬಸವರಾಜ, ಕೆ.ಎಸ್.ನಂದೀಶ, ಬಿ.ಬಸವರಾಜ, ಪ್ರಶಾಂತ, ನಂದೀಶ ಬನ್ನೂರು, ಶಂಕರೇಗೌಡ, ಕುಮಾರ್, ನವೀನ್ ಮಹೇಶ್, ದಾಕ್ಷಾಯಿಣಿ ಬಸವರಾಜ, ಪ್ರೇಮಾ, ಮಂಗಳ ಶಶಿಧರ ಸೇರಿದಂತೆ ಮಹಾರಾಷ್ಟçದ ಸೊಲ್ಲಾಪುರ, ಬಾರ್ಸಿ, ವೈರಾಗ್, ಪುಣೆ ನಗರದಿಂದ ಬಂದ ಭಕ್ತರು ಪಾಲ್ಗೊಂಡಿದ್ದರು. ಬೆಳಿಗ್ಗೆ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಶ್ರೀ ರಂಭಾಪುರಿ ವೀರರುದ್ರಮುನೀಶ್ವರ ವಸತಿ ಪ್ರೌಢ ಶಾಲೆಯ ಹೆಚ್ಚು ಅಂಕ ಪಡೆದಿರುವ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ೦೧ಬಿಹೆಚ್ಆರ್ ೨: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಲಿಂ.ಶ್ರೀ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀ ರುದ್ರಮುನೀಶ್ವರ ಜಗದ್ಗುರುಗಳ ಗದ್ದುಗೆಗೆ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ವಿಶೇಷ ಪೂಜೆ ಸಲ್ಲಿಸಿದರು.