ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

KannadaprabhaNewsNetwork |  
Published : Feb 13, 2024, 12:46 AM IST
ರೈಲು | Kannada Prabha

ಸಾರಾಂಶ

ಈ ರೈಲು ವಿಸ್ತರಣೆಯಿಂದ ಪ್ರತಿನಿತ್ಯ ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.

ಹೊಸಪೇಟೆ: ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ- ಗುಂತಕಲ್‌ ರೈಲು ಇದೀಗ ಮತ್ತೆ ಗುಂತಕಲ್‌ವರೆಗೆ ಸಂಚರಿಸಲಿದೆ.

ಈ ಹಿಂದೆ ಹುಬ್ಬಳ್ಳಿ- ಹೊಸಪೇಟೆ- ಬಳ್ಳಾರಿ- ಗುಂತಕಲ್‌ ನಡುವೆ ಸಂಚರಿಸುತ್ತಿದ್ದ(ಗಾಡಿ ಸಂಖ್ಯೆ: ೦೭೩೩೭/ ೦೭೩೩೮ ) ಪ್ಯಾಸೆಂಜರ್ ರೈಲು ಕಳೆದ ಆರು ತಿಂಗಳಿಂದ ತೋರಣಗಲ್ಲುವರೆಗೆ ಮಾತ್ರ ಸಂಚರಿಸುತ್ತಿತ್ತು. ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಈ ರೈಲನ್ನು ಮೊದಲಿನಂತೆ ಬಳ್ಳಾರಿ ಇಲ್ಲವೇ ಗುಂತಕಲ್‌ವರೆಗೆ ಪುನರಾರಂಭಿಸಬೇಕು ಎಂದು ಫೆ. 9ರಂದು ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಆಗ್ರಹಿಸಿತ್ತು. ಇದಕ್ಕೆ ಸ್ಪಂದಿಸಿ ಫೆ. 12ರಿಂದ ಈ ರೈಲನ್ನು ತಾತ್ಕಾಲಿಕವಾಗಿ ಮೊದಲಿನಂತೆ ಗುಂತಕಲ್‌ವರೆಗೆ ವಿಸ್ತರಿಸಲಾಗಿದೆ.

ಈ ರೈಲು ವಿಸ್ತರಣೆಯಿಂದ ಪ್ರತಿನಿತ್ಯ ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಸರ್ಕಾರಿ ಕಚೇರಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ರೈಲು ಪ್ಯಾಸೆಂಜರ್ ಆಗಿರುವುದರಿಂದ ಹೊಸಪೇಟೆಯಿಂದ- ಬಳ್ಳಾರಿಗೆ ₹20 ಮತ್ತು ಗುಂತಕಲ್‌ಗೆ ₹35 ಹಾಗೂ ಹುಬ್ಬಳ್ಳಿಗೆ ₹35 ದರ ನಿಗದಿಪಡಿಸಲಾಗಿದೆ. ಈ ರೈಲು ಪ್ರತಿದಿನ ಹುಬ್ಬಳ್ಳಿಯಿಂದ ಬೆಳಗ್ಗೆ 7.45ಕ್ಕೆ ನಿರ್ಗಮಿಸಿ ಹೊಸಪೇಟೆಗೆ 11 ಗಂಟೆಗೆ, ಬಳ್ಳಾರಿ 12:20, ಗುಂತಕಲ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2.40ಕ್ಕೆ ನಿರ್ಗಮಿಸಿ ಬಳ್ಳಾರಿ ಮಧ್ಯಾಹ್ನ 3.45, ಹೊಸಪೇಟೆಗೆ ಸಂಜೆ 5.15ಕ್ಕೆ ಆಗಮಿಸಿ ಹುಬ್ಬಳ್ಳಿಯನ್ನು ರಾತ್ರಿ 9.30ಕ್ಕೆ ತಲುಪುತ್ತದೆ. ಬಳ್ಳಾರಿ- ಗುಂತಕಲ್- ಗದಗ- ಹುಬ್ಬಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರು ಕಡಿಮೆ ದರದ ಈ ರೈಲಿನ ಸೌಲಭ್ಯ ಬಳಸಿಕೊಳ್ಳಬೇಕು ಎಂದು ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿಯ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ್‌ ಕುಡತಿನಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಭ್ರಷ್ಟಾಚಾರದ ಕೂಪವಿದ್ದಂತೆ
ದೇಶ ಉಳಿಯಲು ಎಲ್ಲ ಹಿಂದೂಗಳು ಗಟ್ಟಿಯಾಗಿ