ಮುಂಡರಗಿ ತಾಲೂಕಿನಲ್ಲಿ ಶಾಂತಿಯುತ ಮತದಾನ

KannadaprabhaNewsNetwork |  
Published : May 08, 2024, 01:02 AM IST
ಮುಂಡರಗಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ ಮತದಾರರು ಸರದಿಸಾಲಿನಲ್ಲಿ ನಿಂತು ಮತದಾನಕ್ಕೆ ತೆರಳುತ್ತಿರುವುದು.   ಮುಂಡರಗಿ ಪಟ್ಟಣದ ಶಾಸಕರ ಸರ್ಕಾರಿ ಮಾದರೀ ಕನ್ನಡ ಗಂಡು ಮಕ್ಕಳ ಶಾಲೆಯ ಮತಗಟ್ಟೆ ಮುಂದೆ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನಕ್ಕೆ ತೆರಳುತ್ತಿರುವದು. | Kannada Prabha

ಸಾರಾಂಶ

4 ಗಂಟೆಗೆ ನಂತರ ಮತದಾನ ಚುರುಕಾಗಿ ಜರುಗಿ 5.30 ರಿಂದ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಮುಗಿದಿರುವುದು ಕಂಡು ಬಂದಿತು

ಮುಂಡರಗಿ: 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಶಾಂತಿಯುತ ಮತದಾನ ಜರುಗಿತು.

ಈ ಬಾರಿ ತಾಲೂಕಿನಲ್ಲಿ ಬಾರೀ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾದಾಗಿನಿಂದ ಮಧ್ಯಾಹ್ನ 2 ಗಂಟೆಯವರೆಗೂ ಎಲ್ಲೆಡೆ ಜೋರಾಗಿ ನಡೆಯಿತು.

ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಬಿಸಿಲಿನ ತಾಪದಿಂದ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಅಷ್ಟೋಂದು ಕಾಣಲಿಲ್ಲವಾದರೂ ಬಿಸಿಲಿನಲ್ಲಿಯೂ ಸಹ ಕೆಲವರು ಬಂದು ಮತ ಹಾಕಿದ್ದು ಕಂಡು ಬಂದಿತು. ಮತ್ತೆ 4 ಗಂಟೆಗೆ ನಂತರ ಮತದಾನ ಚುರುಕಾಗಿ ಜರುಗಿ 5.30 ರಿಂದ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಮುಗಿದಿರುವುದು ಕಂಡು ಬಂದಿತು.

ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಲೂಕಿನ ಹೆಸರೂರ, ನಾಗರಳ್ಳಿ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಸಿಂಗಟಾಲೂರು, ಹಮ್ಮಿಗಿ, ಬಾಗೇವಾಡಿ, ಹಾರೋಗೇರಿ, ಹಿರೇವಡ್ಡಟ್ಟಿ, ಡಂಬಳ, ಡೋಣಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮತದಾನ ಜೋರಾಗಿಯೇ ನಡೆಯಿತು. ಎಲ್ಲೆಡೆ ಪುರುಷರು, ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಸಮಾಧಾನದಿಂದ ಮತ ಚಲಾಯಿಸಿದ್ದು, ಈ ಬಾರಿ ಬಹುತೇಕ ಗ್ರಾಮಗಳಲ್ಲಿ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿತು.

ತಾಲೂಕಿನ ಕೊರ್ಲಹಳ್ಳಿ, ಶೀರನಹಳ್ಳಿ, ಸಿಂಗಟಾಲೂರು, ಹಮ್ಮಿಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತದಾರರು ಜಾತ್ರೆಗೆ ಬರುವಂತೆ ಹಿಂಡು ಹಿಂಡಾಗಿ ಮತಗಟ್ಟೆ ಕೇಂದ್ರದತ್ತ ಧಾವಿಸಿ ಬರುತ್ತಿರುವುದು ಕಂಡು ಬಂದಿತು. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಎಲ್ಲೆಡೆ ಶಾಂತಿಯುತ ಮತದಾನವಾಗಿದೆ.

ಮುಂಡರಗಿ ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲೆಯ ಮತಗಟ್ಟೆಸಂಖ್ಯೆ 42 ರಲ್ಲಿ ಮಾಜಿ ಶಾಸಕ ರಾಮಕೃಷ್ಣ ಶಿ. ದೊಡ್ಡಮನಿ ಮತದಾನ ಮಾಡಿದರು.ತಾಲೂಕಿನ ಕಲಕೇರಿ ಗ್ರಾಮದ ಮತಗಟ್ಟೆ ಸಂಖ್ಯೆ 62ರಲ್ಲಿ 89 ವರ್ಷದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಪಟ್ಟಣದ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 37ರಲ್ಲಿ ಸ್ಥಳೀಯರಾದ ಎಸ್.ಬಿ. ಹಂದ್ರಾಳ, ಜಿಲ್ಲಾ ನ್ಯಾಯಾಧೀಶ ಹಬ್ಬಳ್ಳಿ ಮತದಾನ ಮಾಡಿದರು. ಅಲ್ಲದೇ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ನಾಗರಾಜ ಭೀಮಪ್ಪ ಗುಂಡಿಕೇರಿ ವಿಶೇಷಚೇತನ ಮತದಾರರು ತಮ್ಮ ವಾಹನದಲ್ಲಿ ಬಂದು ಮತದಾನ ಮಾಡಿದರು. ಸಿಂಗಟಾಲೂರು ಗ್ರಾಮದಲ್ಲಿ 85 ವರ್ಷದ ನಿಂಗಮ್ಮ ಕುರಿ ಮೊಮ್ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಚ್ಚಿನ ಗುರುಗೆ ಶಿಷ್ಯರಿಂದ ‘ರಕ್ತ’ ತುಲಾಭಾರ!
ಮರ್ಯಾದೆಗೇಡು ಹತ್ಯೆಗೆ ದಲಿತ ಸಂಘಟನೆಗಳ ಕಿಚ್ಚು-18 ಮಂದಿ ವಿರುದ್ಧ ಎಫ್‌ಐಆರ್‌