ಮಂಡ್ಯ ಮಂಜುನಾಥ
ಜಿಲ್ಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ೩,೭೦,೦೫೪ ಮಂದಿ ಪೈಕಿ ೬೦,೬೫೧ ಮಂದಿಯ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ. ರಾಜ್ಯ ಸರ್ಕಾರ ಗುರುತಿಸಿದ್ದ ೮೧,೧೦೦ ಸಂಶಯಾಸ್ಪದ ಪ್ರಕರಣಗಳ ಕುರಿತು ಮೂರು ತಿಂಗಳ ಕಾಲ ನಡೆದ ಪಿಂಚಣಿದಾರರ ದಾಖಲೆಗಳ ಪರಿಶೀಲನೆ ಸಮಯದಲ್ಲಿ ಅನರ್ಹತೆ ಸಾಬೀತಾಗಿದೆ.
ರಾಜ್ಯ ಸರ್ಕಾರ ನಿಯಮಬಾಹಿರವಾಗಿ ಪಿಂಚಣಿ ಪಡೆಯುತ್ತಿರುವವರನ್ನು ಪರಿಶೀಲಿಸಲು ಸಂಯೋಜನೆ ಆ್ಯಪ್ನ್ನು ಸಿದ್ಧಪಡಿಸಿಕೊಂಡಿತ್ತು. ಅದರಲ್ಲಿ ಇಡೀ ರಾಜ್ಯಾದ್ಯಂತ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿತ್ತು. ಮಂಡ್ಯ ಜಿಲ್ಲೆಯಲ್ಲಿ ೮೧,೧೦೦ ಫಲಾನುಭವಿಗಳನ್ನು ಅನರ್ಹರು ಎಂದು ರಾಜ್ಯ ಸರ್ಕಾರ ಗುರುತಿಸಿ ಅವರ ಪಿಂಚಣಿಯನ್ನು ಕಡಿತಗೊಳಿಸಿತ್ತು.ಸಂಶಯಾಸ್ಪದ ಪ್ರಕರಣಗಳನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಅದರಂತೆ ಏಪ್ರಿಲ್ ತಿಂಗಳಿಂದ ಶುರುವಾದ ಸಂಶಯಾಸ್ಪದ ಪ್ರಕರಣಗಳ ಪರಿಶೀಲನೆ ಕಾರ್ಯ ಇದುವರೆಗೆ ಶೇ.೯೮.೬ರಷ್ಟು ಪೂರ್ಣಗೊಂಡಿದೆ. ಸರ್ಕಾರ ಗುರುತಿಸಿದ್ದ ೮೧,೧೦೦ ಸಂಶಯಾಸ್ಪದ ಪ್ರಕರಣಗಳಲ್ಲಿ ೬೦,೬೫೧ ಮಂದಿ ಅನರ್ಹರೆಂದು ಖಚಿತಪಡಿಸಿಕೊಂಡು ೧೯,೩೩೧ ಮಂದಿ ಅರ್ಹರೆಂದು ಗುರುತಿಸಲಾಗಿದೆ. ಇನ್ನೂ ೧,೧೧೮ ಫಲಾನುಭವಿಗಳ ಪರಿಶೀಲನೆಯನ್ನು ಬಾಕಿ ಉಳಿಸಲಾಗಿದ್ದು, ಅದೂ ಕೂಡ ಮಾಸಾಂತ್ಯದೊಳಗೆ ಪೂರ್ಣಗೊಳ್ಳಲಿದೆ.
ರಾಜ್ಯ ಸರ್ಕಾರ ಗುರುತಿಸಿದ್ದ ೮೧,೧೦೦ ಸಂದೇಹಾಸ್ಪದ ಪ್ರಕರಣಗಳ ಫಲಾನುಭವಿಗಳಿಗೆ ಏಪ್ರಿಲ್ ತಿಂಗಳಿನಿಂದ ಪಿಂಚಣಿಯನ್ನು ಕಡಿತಗೊಳಿಸಲಾಗಿದೆ. ಇನ್ನು ಪ್ರತಿ ತಾಲೂಕುಗಳ ತಹಸೀಲ್ದಾರ್ ಅವರು ಅರ್ಹತೆಯನ್ನು ದೃಢೀಕರಿಸುವ ಫಲಾನುಭವಿಗಳು ಮಾತ್ರ ಮುಂದಿನ ದಿನಗಳಲ್ಲಿ ಪಿಂಚಣಿ ಪಡೆಯಲಿದ್ದಾರೆ. ಕಂದಾಯಾಧಿಕಾರಿ, ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಫಲಾನುಭವಿಗಳ ಅರ್ಹತೆಯ ಪರಿಶೀಲನೆ ನಡೆಸಲಾಗುತ್ತಿದೆ.
ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿದ್ದ ೩,೭೦,೦೫೪ ಮಂದಿ
-------
------------------------
------------------------------------------
ಮದ್ದೂರು, ೧೨೫೯೨, ೨೪೮೪, ೯೯೮೬, ೧೨೪೭೦, ೧೨೨
ಮಳವಳ್ಳಿ, ೧೨೪೯೪, ೧೯೬೦, ೧೦೪೪೪, ೧೨೪೦೪, ೯೦ಮಂಡ್ಯ, ೨೦೬೨೬, ೭೮೭೪, ೧೨೪೮೪, ೨೦೩೫೮, ೨೬೮
ನಾಗಮಂಗಲ, ೬೫೪೯, ೧೪೬೪, ೫೦೮೪, ೬೫೪೮, ೦೧ಪಾಂಡವಪುರ, ೭೪೨೬, ೨೮೮೦, ೪೪೫೦, ೭೩೩೦, ೯೬
ಶ್ರೀರಂಗಪಟ್ಟಣ, ೬೬೮೩, ೧೨೨೧, ೫೪೪೬, ೬೬೬೭, ೧೬-------------------------------------------
ಒಟ್ಟು, ೮೧೧೦೦, ೧೯೩೩೧, ೬೦೬೫೧, ೭೯೯೮೨, ೧೧೧೮------------------------------------------
ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿದ್ದವರಲ್ಲಿ ೩.೭೦ ಲಕ್ಷ ಮಂದಿಯಲ್ಲಿ ೮೧,೧೦೦ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಿ ಪರಿಶೀಲನೆಗೆ ಕಳುಹಿಸಿತ್ತು. ಈ ಪ್ರಕರಣಗಳ ಕುರಿತು ದಾಖಲೆಗಳ ಪರಿಶೀಲನೆ ನಡೆಸಿದಾಗ ೬೦,೬೫೧ ಜನರು ಅನರ್ಹರಾಗಿದ್ದಾರೆ. ಅರ್ಹರು ಯಾರನ್ನೂ ಯೋಜನೆಯಿಂದ ಕೈಬಿಟ್ಟಿಲ್ಲ.- ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯ