ನಾರಾಯಣ ಮಾಯಾಚಾರಿ
ಪಟ್ಟಣದಲ್ಲಿ ಈಗ ೪೦ ರಿಂದ ೪೨ ಡಿಗ್ರಿವರೆಗೆ ಉಷ್ಣಾಂಶ ದಾಖಲಾಗುತ್ತಿರುವುದು ಕಂಡುಬಂದಿದೆ. ಬೆಳಗ್ಗೆಯಾಗುತ್ತಲೆ ನೆತ್ತಿಸುಡುವ ಬಿಸಿಲು ಶುರುವಾಗುತ್ತಿದ್ದು, ಜನರು ಮನೆಯಿಂದ ಹೊರಗೆ ಕಾಲಿಡಲು ಹಿಂಜರಿಯುವಂತಾಗಿದೆ. ಅನಿವಾರ್ಯತೆಯಿದ್ದರೆ ಮಾತ್ರ ಕೊಡೆಗಳನ್ನು ಹಿಡಿದು ಹೊರಗೆ ಬರುತ್ತಿದ್ದಾರೆ. ಬಿಸಿಲಿನ ತಾಪ ತಾಳಲಾರದೆ ಜನರು ಗಿಡದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲದೆ, ರಸ್ತೆಯ ಅಕ್ಕಪಕ್ಕದಲ್ಲಿರುವ ತಂಪು ಪಾನಿಯ ಸೇವಿಸಿ ಜನರು ಧಗೆ ತಣಿಸಿಕೊಳ್ಳುತ್ತಿದ್ದಾರೆ.
ಬೇಸಿಗೆ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಬೆಳಗ್ಗೆ ೮ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಮಾತ್ರ ಕರ್ತವ್ಯ ನಿರ್ವಹಿಸುತ್ತಿವೆ. ಇತ್ತ ಅಧಿಕಾರಿಗಳು ಲೋಕಸಭಾ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಕಾರಣ ಸಾರ್ವಜನಿಕರಿಗೆ ಸರ್ಕಾರಿ ಕೆಲಸಗಳು ಅಡಚಣೆಯಾಗುತ್ತಿವೆ. ಗ್ರಾಮೀಣ ಭಾಗಗಳಿಂದ ಕಚೇರಿಗೆ ಬರುವ ಸಾರ್ವಜನಿಕರು ಕಚೇರಿಯಲ್ಲಿ ಅಧಿಕಾರಿಗಳಿಗಾಗಿ ಕಾದು ಕಾದು ಸುಸ್ತಾಗಿ ಮನೆಗೆ ಮರಳುವಂತಾಗಿದೆ.ಇನ್ನು ಮನೆಯಲ್ಲಿದ್ದರೂ ನೆಮ್ಮದಿ ಇಲ್ಲದಂತಾಗಿದೆ. ಎಷ್ಟೇ ನೀರು ಕುಡಿದರೂ ತೀರುತ್ತಿಲ್ಲ. ಕುಡಿಯುವ ನೀರು ಬಿಸಿಯಾಗುತ್ತಿದೆ. ಸ್ನಾನ ಮಾಡಲು ನೀರು ಕಾಯಿಸುವ ಅವಶ್ಯಕತೆಯೇ ಬೀಳುತ್ತಿಲ್ಲ. 11 ಗಂಟೆಯಾದರೆ ಸಿಂಟೆಕ್ಸ್ಗಳಲ್ಲಿನ ನೀರು ಬಿಸಿಯಾಗುತ್ತಿದೆ. ಫ್ಯಾನ್ಗಳಿದ್ದರೂ ಅವುಗಳೂ ಬಿಸಿಯ ಗಾಳಿಯನ್ನೇ ನೀಡುತ್ತಿವೆ. ರಾತ್ರಿ 12 ಗಂಟೆಯಾದರೂ ನಿದ್ರೆ ಬಾರದಂತಾಗಿದೆ. ಅನೇಕರು ಮನೆಯ ಮಹಡಿ ಮೇಲೆ, ಬಯಲಿನಲ್ಲಿ ಮಲಗುತ್ತಿದ್ದಾರೆ. ಕೆಲವರು ಎಸಿ, ಕೂಲರ್ಗಳ ಮೊರೆ ಹೋಗುತ್ತಿದ್ದಾರೆ.
---------------
ಬಹುತೇಕ ಕಾಲುವೆಗಳಿಗೆ ಹರಿದ ನೀರು
---
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದ ಮುಖ್ಯ ಬಜಾರದಲ್ಲಿ ಬೇಸಿಗೆ ನಿಮಿತ್ತ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಪಟ್ಟಣದ ಹಲವು ಪ್ರದೇಶಗಳಲ್ಲಿ ನೀರಿನ ಅರವಟ್ಟಿಗೆ ನಿರ್ಮಾಣ ಮಾಡಲಾಗಿದೆ. ಇದರಿಂದ ಪಟ್ಟಣಕ್ಕೆ ಆಗಮಿಸುವ ಜನರ ಬಾಯಾರಿಕೆ ನೀಗಿಸಿಕೊಳ್ಳಲು ಸಹಾಯವಾಗಿದೆ.
ಕೋಟ್
-ಮಲ್ಲನಗೌಡ ಬಿರಾದಾರ, ಮುಖ್ಯಾಧಿಕಾರಿ ಪುರಸಭೆ ಮುದ್ದೇಬಿಹಾಳ