ಕಾರಟಗಿಯಲ್ಲಿ ಇಂದಿನಿಂದ ಶಾಶ್ವತ ನ್ಯಾಯಾಲಯ

KannadaprabhaNewsNetwork |  
Published : Jul 21, 2026, 02:00 AM IST
ಕಾರಟಗಿಯಲ್ಲಿ ಸೋಮವಾರ ಪೂರ್ಣ ಪ್ರಮಾಣದ ನ್ಯಾಯಾಲಯದ ಕಲಾಪ ಪ್ರಾರಂಭವಾಯಿತು. | Kannada Prabha

ಸಾರಾಂಶ

ಕಾರಟಗಿ ನ್ಯಾಯಾಲಯವನ್ನು ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಮೇಲ್ದರ್ಜೆಗೆ ಏರಿಸಿದ್ದು, ಜು. 21ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಯಾಧೀಶರಾದ ಮೇಘಾ ಸೋಮಣ್ಣವರ ಹೇಳಿದರು.

ಕಾರಟಗಿ: ತಾಲೂಕಿನ ಜನರಿಗೆ ಕಾನೂನು ಸೇವೆಗಳು ಸಮಯ ಮತ್ತು ಹಣ ಎರಡು ವ್ಯರ್ಥವಿಲ್ಲದಂತೆ ಸಿಗುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಸಂಚಾರಿ ಪೀಠವಾಗಿದ್ದ ಕಾರಟಗಿ ನ್ಯಾಯಾಲಯವನ್ನು ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಮೇಲ್ದರ್ಜೆಗೆ ಏರಿಸಿದ್ದು, ಜು. 21ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ನ್ಯಾಯಾಧೀಶರಾದ ಮೇಘಾ ಸೋಮಣ್ಣವರ ಹೇಳಿದರು.

ಕಾರಟಗಿ ಮತ್ತು ಗಂಗಾವತಿ ತಾಲೂಕಿನ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿನ ವಿಶೇಷ ಎಪಿಎಂಸಿಯ ಆವರಣದಲ್ಲಿ ಶಾಶ್ವತ ನ್ಯಾಯಾಲಯ ಸಂಕೀರ್ಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯಾಂಗ ವ್ಯವಸ್ಥೆಯ ವಿಕೇಂದ್ರೀಕರಣ ಅತ್ಯವಶ್ಯಕವಾಗಿದೆ. ವಕೀಲರು ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ, ವಿಶೇಷವಾಗಿ ಬಡ ಮತ್ತು ಶೋಷಿತರಿಗೆ ಸಕಾಲದಲ್ಲಿ ನ್ಯಾಯ ಒದಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಗಂಗಾವತಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎನ್. ನಾಯಕ ಮಾತನಾಡಿ, ಇನ್ನು ಮುಂದೆ ಕಾರಟಗಿ ನ್ಯಾಯಾಲಯ ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲಿದೆ. ಪಟ್ಟಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಸ್ವಂತ ಕಟ್ಟಡಕ್ಕಾಗಿ ಅನುದಾನ ಬಿಡುಗಡೆಯಾಗಿದ್ದು, ಅನುದಾನ ಒದಗಿಸಿದ ಶಾಸಕ ಶಿವರಾಜ ತಂಗಡಗಿ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಸಿ. ಅವರ ಸತತ ಪ್ರಯತ್ನದಿಂದ ಈ ನ್ಯಾಯಾಲಯ ನಿರ್ಮಾಣ ಸಾಧ್ಯವಾಗಿದೆ ಎಂದರು.

ವಕೀಲ ಎಚ್.ಎಂ. ಮಂಜುನಾಥ್ ಮಾತನಾಡಿ, ಇಂದು ನಮ್ಮ ಬಹುದಿನದ ಕನಸು ನನಸಾಗಿದೆ ಎಂದರು. ನ್ಯಾಯಾಲಯ ಸ್ಥಾಪನೆ ನಿಟ್ಟಿನಲ್ಲಿ ನೆರವು ನೀಡಿದವರನ್ನು ಸ್ಮರಿಸಿದರು. ಸಂಘದ ಉಪಾಧ್ಯಕ್ಷ ಪ್ರಕಾಶ್ ಕುಸುಬಿ, ಹಿರಿಯ ವಕೀಲರಾದ ಸೋಮನಾಥ್ ಪಟ್ಟಣಶೆಟ್ಟಿ, ವಿ.ಎಸ್.ಎಚ್. ವಕೀಲರು ಮಾತನಾಡಿ, ಕಾರಟಗಿಗೆ ಪೂರ್ಣ ಪ್ರಮಾಣದ ನ್ಯಾಯಾಲಯ ವಿಧ್ಯುಕ್ತವಾಗಿ ಲೋಕಾರ್ಪಣೆಗೊಳ್ಳಲು ಸಹಕರಿಸಿದವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

ನ್ಯಾಯಾಲಯ ಸ್ಥಾಪನೆಗೆ ಶ್ರಮಿಸಿದ ನ್ಯಾಯಾಧೀಶರು, ವಕೀಲರ ಸಂಘದ ಅಧ್ಯಕ್ಷ, ಪದಾಧಿಕಾರಿಗಳಿಗೆ ಕಾರಟಗಿ ವಕೀಲರ ಪರವಾಗಿ ಗೌರವಿಸಲಾಯಿತು. ಸೋಮನಾಥ್ ಹೆಬ್ಬಡದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಬೂದಿ, ರಾಮಚಂದ್ರ ದೇವರಗುಡಿ ಕಾರ್ಯಕ್ರಮ ನಿರ್ವಹಿಸಿದರು.

ವಕೀಲರಾದ ರಾಘವೇಂದ್ರ ರಾವ್ ಬೇವಿನಾಳ, ಗವಿಸಿದ್ಧಪ್ಪ ಸಾಲೋಣಿ, ತ್ರಿಲೋಚನ ಕೋಲ್ಕಾರ್, ಶ್ರೀ ಪುಷ್ಪ ಶ್ರೀನಿವಾಸ್, ಮಂಜುನಾಥ ರೆಡ್ಡಿ, ಪರಸಪ್ಪ ನಾಯಕ, ತಿಮ್ಮನಗೌಡ ಪೊಲೀಸ್‌ಪಾಟೀಲ್‌, ಶೇಷಗಿರಿ ಕಟ್ಟೆಮನಿ, ಬಸವರಾಜ್ ಸೊಲಬನಗೌಡರ, ಶಿವರಾಜ್ ಹೊಸಮನಿ, ಮಾರುತಿ ಮೆತಗಲ್, ಅಮರೇಗೌಡ ಯರಡೋಣ, ಶ್ರೀಕಂಠಯ್ಯಸ್ವಾಮಿ, ಬಸನಗೌಡ ಯರಡೋಣ, ಬಸವರಾಜ್ ಆರಾಪುರ, ಶ್ರೀಕಾಂತ ಜೋಶಿ, ರಮೇಶ್ ಕುಂಟೋಜಿ, ಪಂಪಯ್ಯ ಸ್ವಾಮಿ ನವಲಿ, ಕೇಶವ್ ನಾಯಕ, ಕರಿವೀರಪ್ಪ ಕುಂಟೋಜಿ, ಚಂದ್ರು ಅರಳಿ, ಮಾಲತಿ, ಸುಮಾ ಹಿರೇಮಠ, ಅನ್ನಪೂರ್ಣಾ ಕುಂಬಾರ, ರೋಜಾ, ಶಿವರಾಜ್ ಜೋಗಲದಿನ್ನಿ, ಗೌರಿ ಕುಲಕರ್ಣಿ, ರಾಮಣ್ಣ ದೊಡ್ಡಮನಿ, ರಾಜಶೇಖರ್, ಶರಣಪ್ಪ ರಾಮಪುರ, ಶರಣಪ್ಪ ಕೊಲ್ಕಾರ್ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗವಿಕಲರ ಮಾಸಾಶನಕ್ಕೆ ಕುಟುಂಬದ ಆದಾಯ ಮಿತಿ ರದ್ಧತಿಗೆ ಆಗ್ರಹ
ಎಡದಂಡೆ ಭಾಗದ ಕಾಲುವೆಗೆ ನೀರು, ಅಧಿಕಾರಿಗಳ ಜತೆ ವಾಗ್ವಾದ