‘ಮುದ್ರಕರಿಗೆ ಅನಧಿಕೃತ ಜಾಹೀರಾತು ಮುದ್ರಿಸದಂತೆ ವೈಯಕ್ತಿಕವಾಗಿ ತಿಳಿಸಿ’

KannadaprabhaNewsNetwork |  
Published : Aug 04, 2024, 01:18 AM IST
ತುಷಾರ್‌ ಗಿರಿನಾಥ್‌ | Kannada Prabha

ಸಾರಾಂಶ

ಅನಧಿಕೃತ ಜಾಹೀರಾತು ಮುದ್ರಿಸದಂತೆ ಮುದ್ರಕರಿಗೆ ಆದೇಶ ಪತ್ರ ನೀಡಿ ವೈಯಕ್ತಿಕವಾಗಿ ಮಾಹಿತಿ ತಿಳಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಮುದ್ರಿಸುವ ಪ್ರತಿಯೊಬ್ಬ ಮುದ್ರಣಕರಿಗೆ ವೈಯಕ್ತಿವಾಗಿ ಅನಧಿಕೃತವಾಗಿ ಯಾವುದೇ ಜಾಹೀರಾತು ಪ್ರಕಟಣೆಗಳನ್ನು ಮುದ್ರಣ ಮಾಡದಂತೆ ಎಚ್ಚರಿಕೆ ನೀಡಬೇಕು. ಈ ಬಗ್ಗೆ ಆ.5ರ ಒಳಗೆ ವರದಿ ನೀಡುವಂತೆ ಎಲ್ಲಾ ವಲಯ ಮಟ್ಟದ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ನಿರ್ದೇಶಿಸಿದ್ದಾರೆ.

ನಗರದಲ್ಲಿ ಅನಧಿಕೃತ ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬಿಬಿಎಂಪಿ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ಜಂಟಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಸಿದ್ಧಪಡಿಸಿ ಆದೇಶಿಸಲಾಗಿದೆ. ಈ ಆದೇಶ ಪತ್ರವನ್ನು ನಗರದಲ್ಲಿರುವ ಪ್ರತಿಯೊಬ್ಬ ಫ್ಲೆಕ್ಸ್‌, ಬ್ಯಾನರ್‌ ಮುದ್ರಣಕರಿಗೆ ನೀಡಿ ಕಟ್ಟುನಿಟ್ಟಾಗಿ ಆದೇಶ ಪಾಲಿಸುವಂತೆ ಸೂಚಿಸಬೇಕು ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಎಷ್ಟು ಫ್ಲೆಕ್ಸ್‌, ಬ್ಯಾನರ್‌ ಮುದ್ರಕರಿಗೆ ಆದೇಶ ಪ್ರತಿ ನೀಡಿ ಸೂಚಿಸಲಾಗಿದೆ ಎಂಬ ವರದಿಯನ್ನೂ ಪಾಲಿಕೆ ಜಾಹೀರಾತು ವಿಭಾಗಕ್ಕೆ ಸಲ್ಲಿಸಬೇಕು. ಈ ಕಾರ್ಯವನ್ನು ಜಂಟಿ ಆಯುಕ್ತರು, ವಲಯ ಮುಖ್ಯ ಆಯುಕ್ತರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು (ಜಾಹೀರಾತು ನಿರ್ವಹಿಸಬೇಕೆಂದು ತಿಳಿಸಲಾಗಿದೆ.

ಫ್ಲೆಕ್ಸ್‌-ಬ್ಯಾನರ್‌ ಮುದ್ರಕರಿಗೆ ನೀಡಲಾದ ಸೂಚನೆ

ಬಿಬಿಎಂಪಿಯ ಅನುಮತಿ ಇಲ್ಲದೇ ಯಾವುದೇ ಕಾರಣಕ್ಕೆ ಫ್ಲೆಕ್ಸ್‌, ಬ್ಯಾನರ್‌ ಮುದ್ರಣ ಮಾಡಬಾರದು. ಜನ್ಮ ದಿನದ ಶುಭಾಶಯ ತಿಳಿಸುವ, ಸಂತಾಪಗಳು, ಸ್ವಾಗತ ಫಲಕಗಳು ಮುಂತಾದ ಫಲಕಗಳನ್ನು ಅನಧಿಕೃತವಾಗಿ ಅಳವಡಿಸುವಂತಿಲ್ಲ ಹಾಗೂ ಮುದ್ರಿಸುವಂತಿಲ್ಲ. ಮುದ್ರಣ ಮಾಡಿದರೆ ಉದ್ದಿಮೆ ಪರವಾನಗಿ ರದ್ದು ಪಡಿಸಲಾಗುವುದು. ಜತೆಗೆ, ಒಂದು ವರ್ಷ ಜೈಲು ಹಾಗೂ 2 ಲಕ್ಷ ರು. ದಂಡ ವಿಧಿಸಲಾಗುವುದು. ಈ ಅಪರಾಧಗಳಿಗೆ ಕುಮ್ಮಕ್ಕು ನೀಡುವವರಿಗೂ ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಫ್ಲೆಕ್ಸ್ ಮುದ್ರಿಸಲು ಬಂದವರು ಪಾಲಿಕೆಯಿಂದ ಅನುಮತಿ ಪಡೆದುಕೊಂಡಿರುವ ಪ್ರತಿಯನ್ನು ಮುದ್ರಕರಿಗೆ ತೋರಿಸಬೇಕು. ಅದು ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳು ನೀಡಿರುವುದು ಎಂಬುದನ್ನು ಮುದ್ರಕರು ಖಚಿತಪಡಿಸಿಕೊಳ್ಳಬೇಕು. ಗ್ರಾಹಕರು ಮುದ್ರಿಸಲು ಬಯಸುವ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಪೋಸ್ಟರ್‌ಗಳು, ಹೋರ್ಡಿಂಗ್‌ಗಳ ಕುರಿತಂತೆ ಪಡೆದ ಅನುಮತಿ ಪತ್ರಗಳ ನಕಲನ್ನು ಮಾಡಿಟ್ಟುಕೊಳ್ಳಬೇಕು. ಗ್ರಾಹಕರು ಅನುಮತಿ ಪತ್ರ ನೀಡುವಲ್ಲಿ ವಿಫಲವಾದಲ್ಲಿ ಯಾವುದೇ ಜಾಹೀರಾತನ್ನು ಮುದ್ರಿಸಿಕೊಡಬಾರದು. ಅನುಮತಿ ಪಡೆದು ಮುದ್ರಿಸುವ ಫ್ಲೆಕ್ಸ್‌ ಮತ್ತು ಬ್ಯಾನರ್‌ ಗಳನ್ನು ಕಡ್ಡಾಯವಾಗಿ ಪರಿಸರ ಸ್ನೇಹಿಯಾಗಿರಬೇಕು. ಜತೆಗೆ, ಮುದ್ರಣಕರ ಹೆಸರು, ವಿಳಾಸ ಹಾಗೂ ಮೊಬೈಲ್‌ ನಂಬರ್‌ ನಮೂದಿಸಬೇಕು ಎಂದು ಸೂಚಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ