ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಆನೆಗೊಳ, ಐಕನಹಳ್ಳಿ ಗ್ರಾಮದಲ್ಲಿನ ಆದಿಚುಂಚನಗಿರಿ ಪ್ರೌಢಶಾಲೆಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿ, ಮಠದ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರಿದೆ. ಮಧ್ಯಮ, ರೈತಾಪಿ ವರ್ಗದವರು ಬಲು ಪ್ರೀತಿಯಿಂದ ಪೂಜ್ಯ ಭೈರವೈಕ್ಯರ ಮೇಲೆ ಇಟ್ಟು ಶಾಲೆಗೆ ಸೇರಿಸುತ್ತಾರೆ. ಇವರ ಪ್ರೀತಿಗೆ ವಂಚನೆ ಮಾಡದಂತೆ ಶಿಕ್ಷಕರು ವರ್ತಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲು ಅನುದಾನಿತ ಕನ್ನಡ ಶಾಲೆ ತೆರೆಯಲಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ವಿಶೇಷ ಮೀಸಲಾತಿ ಇದೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಇರಲಿದೆ. ಈ ಶಾಲೆಗಳನ್ನು ಉಳಿಸುವುದು ಪ್ರತಿ ಶಿಕ್ಷಕರ ಕರ್ತವ್ಯವಾಗಿದೆ. ಗುಣಾತ್ಮಕ ಶಿಕ್ಷಣದೊಂದಿಗೆ ಉತ್ತಮ ಫಲಿತಾಂಶ ನಿರೀಕ್ಷಿಸಲಾಗುವುದು ಎಂದರು.ಶಿಕ್ಷಣಕ್ಕೆ ಪೂರಕವಾದ ಸಮಸ್ಯೆಗಳನ್ನು ಪರಿಹರಿಸಲು ತಾವು ಸದಾ ಬದ್ಧವಿದ್ದು, ಪಠ್ಯದಜೊತೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಪ್ಪದೆ ಶಿಕ್ಷಕರು ಆಯೋಜಿಸಬೇಕು. ಮಕ್ಕಳು ನಲಿನಲಿಯುತ್ತ ಶಾಲೆಗೆ ಬರುವ ವಾತಾವರಣ ನಿರ್ಮಿಸಬೇಕು ಎಂದರು.
ಈ ವೇಳೆ ಮುಖ್ಯ ಶಿಕ್ಷಕರಾದ ಆನೆಗೊಳ ಪುರುಷೋತ್ತಮ್, ಐಕನಹಳ್ಳಿ ಹನುಮಂತೇಗೌಡ, ಶ್ರೀಧರ್ ಮತ್ತಿತರ ಶಿಕ್ಷಕರು ಉಪಸ್ಥಿತರಿದ್ದರು.
ಹಲಗೂರು:ಸರ್ಕಾರಿ ಶಾಲೆಗಳಲ್ಲಿ ಅನೇಕ ಸವಲತ್ತುಗಳು ದೊರಕುತ್ತಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಶಿಕ್ಷಕ ಪುಟ್ಟಸ್ವಾಮಿ ಕರೆ ನೀಡಿದರು.
ಸರ್ಕಾರದಿಂದ ಸಿಗುವ ಬಿಸಿ ಊಟ, ಸೈಕಲ್ ವಿತರಣೆ, ಸಮವಸ್ತ್ರ, ವಿದ್ಯಾರ್ಥಿ ವೇತನ, ಎಲ್ಲಾ ವ್ಯವಸ್ಥೆ ಒಳಗೊಂಡಿದೆ. 8ನೇ ಯಿಂದ ಆಂಗ್ಲ ಮತ್ತು ಕನ್ನಡ ಎರಡು ಮಾಧ್ಯಮಗಳಲ್ಲಿ ತರಗತಿ ಪ್ರಾರಂಭವಾಗಿರುವುದರಿಂದ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿ ಉತ್ತಮ ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.ಈ ವೇಳೆ ಉಪ ಪ್ರಾಂಶುಪಾಲರಾದ ಅನುರಾಧ, ಶಿಕ್ಷಕರಾದ ಎನ್.ಪುಟ್ಟಸ್ವಾಮಿಗೌಡ, ಬಿ.ಕೆ.ಕರಿಯಪ್ಪ, ತ್ಯಾಗರಾಜ್, ಕಿರಣ್ ಕುಮಾರ್, ರಶ್ಮಿ, ಸೇರಿದಂತೆ ಇತರ ಶಿಕ್ಷಕರು ಇದ್ದರು.